ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): – ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಪೂರ್ಣ ಸಹಕಾರ ನೀಡಿ , ಪೊಲೀಸ್ ಇಲಾಖೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಕರೆ ನೀಡಿದರು .
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ನೇತೃತ್ವದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ನೂತನ ಎಸ್ಪಿ ಅವರನ್ನು ಅಭಿನಂದಿಸಿ ಸ್ವಾಗತ ಕೋರಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು . ಗಡಿ ಜಿಲ್ಲೆಯಾಗಿದ್ದು , ಇಲ್ಲಿ ಅಪರಾಧಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಜನರ ಸಹಕಾರ ಅಗತ್ಯವಿದೆ ಎಂದ ಅವರು , ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಿದರೆ ಮಾತ್ರ ಇಲಾಖೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ ಎಂದರು . ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸುವ ತಮ್ಮ ಪ್ರಯತ್ನಕ್ಕೆ ನೌಕರರ ಸಂಘ , ನೌಕರರು , ಸಾರ್ವಜನಿಕರು ಸಹಕಾರ ನೀಡಬೇಕು ಎಂದ ಅವರು , ಕೋಲಾರದಲ್ಲಿ ಸಂಚಾರ ನಿಯಂತ್ರಣದ್ದು ಸಮಸ್ಯೆ ಇದೆ . ನಿಯಮ ಪಾಲನೆಗೆ ಅರಿವು ಮೂಡಿಸುವ ಪ್ರಯತ್ನಕ್ಕೆ ನೌಕರರು ಮುಂದಾಗಬೇಕು ಎಂದರು .
ನೂತನ ಎಸ್ಪಿ ಅವರನ್ನು ಅಭಿನಂದಿಸಿದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು , ಜಿಲ್ಲೆಗೆ ಬರುವ ಅಧಿಕಾರಿಗಳನ್ನು ಸ್ವಾಗತಿಸಿ ಅವರಿಗೆ ಸಹಕಾರ ನೀಡುವ ಸಂಪ್ರದಾಯವನ್ನು ನೌಕರರ ಸಂಘ ಅನುಸರಿಸಿಕೊಂಡು ಬಂದಿದೆ ಎಂದರು .
ಈ ನಿಟ್ಟಿನಲ್ಲಿ ಜೂ .೨೫ ರ ಶುಕ್ರವಾರ ಎಸ್ಪಿಯವರು ನೌಕರರ ಭವನಕ್ಕೆ ಆಗಮಿಸಿ , ನೌಕರರ ಅಭಿನಂದನೆ ಸ್ವೀಕರಿಸಬೇಕು , ಸಮಾಜಮುಖಿಯಾಗಿ ಸಾಗಲು ಸಂಘದ ಸಹಕಾರನೀಡಬೇಕು ಮತ್ತು ನೌಕರರಿಗೆ ಮಾರ್ಗದರ್ಶನ ನೀಡಬೇಕು ಎಂದು ಕೋರಿದರು .
ಈ ಸಂದರ್ಭದಲ್ಲಿ ಎಎಸ್ಪಿ ನಾರಾಯಣಸ್ವಾಮಿ , ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ಖಜಾಂಚಿ ವಿಜಯ್ , ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ , ಎಸ್ಪಿ ಅವರ ಆಪ್ತ ಸಹಾಯಕ ನಾಗರಾಜ್ , ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ , ಗೌರವಾಧ್ಯಕ್ಷ ಆರ್.ನಾಗರಾಜ್ , ನೌಕರರ ಸಂಘದ ಪದಾಧಿಕಾರಿಗಳಾದ ಶಿವಕುಮಾರ್ , ಮಂಜುನಾಥ್ , ರವಿಕುಮಾರ್ , ಶ್ರೀನಿವಾಸ್ , ವಿಜಯ್ ಮತ್ತಿತರರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.