ಲಕ್ಕೂರು (ವಿಶ್ವ ಕನ್ನಡಿಗ ನ್ಯೂಸ್): ಕಲಾಸೇವಾ, ಅನಿಕೇತನ, ಹಾಗೂ ಕನ್ನಡ ವೈಭವ ಪ್ರಶಸ್ತಿ ಪುರಸ್ಕೃತರು, ಹಾಗೂ ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಸಾರಥ್ಯದಲ್ಲಿನ “ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.)” ಯ ನೂತನ ಕಟ್ಟಡದ ಪ್ರಾರಂಭ ಕಾರ್ಯಕ್ರಮವನ್ನು ಲಕ್ಕೂರಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಯ ಸಂಸ್ಥಾಪಕ ಅಧ್ಯಕ್ಷರಾ ಶ್ರೀಮತಿ ಶ್ವೇತನಾಗರಾಜ್ ರವರು ನಟರಾಜ ಮೂರ್ತಿಗೆ ದೀಪ ಬೆಳಗುವ ಮೂಲಕ ಮಾತನಾಡಿ “ಭಾರತೀಯ ಭವ್ಯ ಸಂಸ್ಕ್ರತಿಯನ್ನು ನಾವು ಉಳಿಸಬೇಕಾಗಿರುವ ಅನಿವಾರ್ಯತೆ ಇದೆ, ಇಂದು ವೇಗವಾಗಿ ಬೆಳೆಯುತ್ತಿರುವ ಈ ದಿನಮಾನಗಳಲ್ಲಿ ಯುವ ಜನಾಂಗ ನಮ್ಮ ಸಂಸ್ಕ್ರತಿಯನ್ನು ಮರೆಯುತ್ತಾ ವಿದೇಶಿ ಸಂಸ್ಕೃತಿಯ ಮೇಲೆ ಹೆಚ್ಚು ಆವಲಂಬಿತವಾಗಿದ್ದಾರೆ ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ನಮ್ಮ ಸಂಸ್ಕ್ರತಿಯ ಪರಿಚಯ, ನಮ್ಮ ದೇಶಿ ಸಂಸ್ಕ್ರತಿಯ ಭರತನಾಟ್ಯ ನೃತ್ಯ ತರಬೇತಿ ಅವಶ್ಯ ಇರುವ ನಿಟ್ಟಿನಲ್ಲಿ ಇಂದು ನೂತನವಾದ ಕಟ್ಟಡದಲ್ಲಿ ಶಾಲೆ ಪ್ರಾರಂಭ ಮಾಡಿದ್ದೀವಿ, ಈ ಮೂಲಕ ಎಲ್ಲಾರು ಭಾಗವಹಿಸುವ ಮೂಲಕ ನಮ್ಮ ಸಂಸ್ಕ್ರತಿ ಉಳಿಸಿ” ಎಂದರು.
ಇದೇ ಸಂದರ್ಭದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಯ ಪ್ರಧಾನ ಕಾರ್ಯದರ್ಶಿ ಲಕ್ಕೂರು ಎಂ ನಾಗರಾಜ್ ಮಾತನಾಡಿ “ಭರತನಾಟ್ಯ ಕಲಿಕೆ ಇಂದಿನ ದಿನಮಾನಗಳಲ್ಲಿ ಬಹಳ ಅವಶ್ಯವಾದದ್ದು, ಇದು ನಮ್ಮ ಬದುಕನ್ನು ಹಸನು ಮಾಡುವ ಜೊತೆಗೆ, ನಮ್ಮಲ್ಲಿನ ದೈಹಿಕ ಸಧೃಡತೆಯನ್ನು ಹೆಚ್ಚು ಮಾಡುವ ಮಹತ್ತರ ಕಲೆ ಇದಾಗಿದೆ. ನಮ್ಮ ಸಂಸ್ಕ್ರತಿಯ ಉಳಿವಿನ ಕಾರ್ಯವನ್ನು ಗ್ರಾಮೀಣ ಪ್ರದೇಶದಲ್ಲಿ ಮಾಡುವ ಮೂಲಕ ಹಳ್ಳಿಯಲ್ಲಿರುವ ನಿಜವಾದ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿ ಈ ನಾಡಿಗೆ ಪರಿಚಯಿಸುವ ಕಾರ್ಯ ಮಾಡುವ ನಿಟ್ಟಿನಲ್ಲಿ ಶಾಲೆ ಪ್ರಾರಂಭವಾಗಿದೆ ಆ ನಿಟ್ಟಿನಲ್ಲಿ ಎಲ್ಲಾರೂ ಕೈ ಜೋಡಿಸಿ, ಆಸಕ್ತ ಪೋಷಕರು ನಿಮ್ಮ ಮಕ್ಕಳನ್ನು ನಿಮಗೆ ಸಮೀಪ ಇರುವ ಮಾಲೂರು, ಲಕ್ಕೂರು, ಚಿಕ್ಕತಿರುಪತಿ ಹಾಗೂ ದೊಡ್ಡದುನ್ನಸಂದ್ರ ಭಾಗದಲ್ಲಿ ಸೇರಿಸಿ” ಎಂದರು.
ನೂತನ ಶಾಲೆಯ ಪ್ರಾರಂಭಕ್ಕೆ ಮಹಾಗಣಪತಿ ಹೋಮ ಮಾಡುವ ಮೂಲಕ ಮಕ್ಕಳ ಕಲಿಕೆಗೆ ಶಕ್ತಿಯಾಗಲಿ ಎಂದು ವಿಶೇಷ ಪೂಜೆಯನ್ನು ಸಹ ಸಲ್ಲಿಸಲಾಯಿತು.
ಪೂಜಾ ಕೈಂಕರ್ಯಗಳನ್ನು ಲಕ್ಕೂರಿನ ಶಿವ ದೇವಾಲಯದ ಆರ್ಚಕರಾದ ಸ್ವಾಮಿ ವೆಂಕಟೇಶ್ ರವರು ನೇರೆವೇರಿಸುವ ಮೂಲಕ ಶುಭ ಹಾರೈಸಿದರು.
ಪೂಜಾ ಕಾರ್ಯದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, ಪ್ರಧಾನ ಕಾರ್ಯದರ್ಶಿ ಲಕ್ಕೂರು ಎಂ ನಾಗರಾಜ್, ಪ್ರವೀಣ್,ಟಿ, ಗ್ರ್ಯಾಂಡ್ ಮಾಸ್ಟರ್ ತಾನೀಶ್.ಎನ್ ಹಾಗೂ ಇತರರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.