ಕೆ.ಜಿ.ಎಫ್ ( ವಿಶ್ವ ಕನ್ನಡಿಗ ನ್ಯೂಸ್ ) :- 2019 ನೇ ಸಾಲಿನ ಅಕ್ಟೋಬರ್ 8 ರಂದು ಬಂಗಾರಪೇಟೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ಪೂರ್ವಿಕರ ಆಸ್ತಿಗಾಗಿ ತನ್ನ ತಾಯಿಯನ್ನೇ ಕೊಲೆಗೈದ ಪ್ರಕರಣದಲ್ಲಿ ಮೃತರ ಮಗನಾದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಯಾಗಿದೆ .
ಕೆಜಿಎಫ್ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಸರಹದ್ದು ಬಂಗಾರಪೇಟೆ ಪಟ್ಟಣದ ಕುಪ್ಪುಸ್ವಾಮಿ ಮೊದಲಿಯಾರ್ ಲೇಔಟ್ ಎ.ಬಿ.ಆರ್ . ಕಲ್ಯಾಣ ಮಂಟಪ ಹಿಂಬಾಗದ ನಿವಾಸಿ ದಿವಂಗತ ರಾಧಾಕೃಷ್ಣಯ್ಯಶೆಟ್ಟಿ ರವರ ಮಗ ಸಿ.ಆರ್ , ಮಂಜುನಾಥಶೆಟ್ಟಿ ರವರು ಸುಮಾರು 22 ವರ್ಷಗಳಿಂದ ಮನೆ ಬಿಟ್ಟು ಹೋಗಿದ್ದು , ಕೆಲವು ಜ್ಯೋತಿಷ್ಯರು ತಿಳಿಸಿದಂತೆ ತಮ್ಮ ಸ್ವಂತ ಸ್ಥಳದಲ್ಲಿ ಪೂರ್ವಿಕರು ಅಪಾರ ಆಸ್ತಿ ಪಾಸ್ತಿ , ಸಂಪತ್ತು ಇಟ್ಟಿರುವುದಾಗಿ ಭವಿಷ್ಯ ನುಡಿದಂತೆ .
ದಿನಾಂಕ 08.10.2019 ರಂದು ಮದ್ಯಾಹ್ನ ದಿಢೀರನೆ ಮನೆಗೆ ಬಂದು ತನ್ನ ತಾಯಿಯಾದ ಸತ್ಯಲಕ್ಷ್ಮಿ ರವರಲ್ಲಿ ಪೂರ್ವಿಕರ ಆಸ್ತಿ , ಸಂಪತ್ತು ಕುರಿತು ವಿಚಾರಿಸಿ , ಗಲಾಟೆ ತೆಗೆದಿದ್ದು , ಈ ಬಗ್ಗೆ ಸತ್ಯಲಕ್ಷ್ಮಿ ರವರು ಸಮರ್ಪಕವಾದ ಉತ್ತರವನ್ನು ನೀಡದೇ ಇದ್ದುದರಿಂದ ಕೋಪಗೊಂಡ ಮಂಜುನಾಥಶೆಟ್ಟಿ ತನ್ನ ತಾಯಿ ಸತ್ಯಲಕ್ಷ್ಮೀ ರವರ ಮುಖಕ್ಕೆ ದಿಂಬನ್ನು ಹಾಕಿ ಉಸಿರಾಡಲು ಬಾರದಂತೆ ಒತ್ತಿದ್ದು , ನಂತರ ವೈರಿನಿಂದ ಅವರ ಕುತ್ತಿಗೆಗೆ ಹಾಕಿ ಎಳೆದು , ಕತ್ತರಿಯಿಂದ ತಿವಿದು ಕೊಲೆ ಮಾಡಿರುತ್ತಾರೆ .
ಈ ಸಂಬಂಧ ಮೃತರ ಮಗ ಸಿ.ಆರ್ , ಮಂಜುನಾಥಶೆಟ್ಟಿ ರವರ ವಿರುದ್ಧ ಬಂಗಾರಪೇಟೆ ಪಿಎಸ್ಐ ಆರ್ , ದಯಾನಂದ ಅವರು ಕೊಲೆ ಪ್ರಕರಣ ದಾಖಲಿಸಿಕೊಂಡು , ಸಿಪಿಐ ಬಿ.ಎನ್ . ಶ್ರೀಕಂಠಯ್ಯ ಅವರು ತನಿಖೆ ಕೈಗೊಂಡಿದ್ದರು , ನಂತರ ಆರೋಪಿಯ ವಿರುದ್ಧ ತನಿಖೆಯನ್ನು ಪೂರೈಸಿ ಮಂಜುನಾಥಶೆಟ್ಟಿ ವಿರುದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಿಪಿಐ ಶ್ರೀಕಂಠಯ್ಯ ಅವರು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು .
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು ಬಾರಕಉಲ್ಲಾ ಹುಸೈನಿ ಅವರು ವಾದ , ವಿವಾದವನ್ನು ಮಂಡಿಸಿದರು . 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಡಿ . ಪವನೇಶ್ ಅವರು ಸೋಮವಾರದಂದು ಈ ಪ್ರಕರಣದಲ್ಲಿ ತೀರ್ಪು ನೀಡಿ , ಆರೋಪಿ ಸಿ.ಆರ್ ಮಂಜುನಾಥಶೆಟ್ಟಿ ಅವರಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು ರೂ . 20,000 ಗಳ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ .
ಈ ಪ್ರಕರಣದಲ್ಲಿ ಶೀಘ್ರವಾಗಿ ತನಿಖೆಯನ್ನು ಪೂರೈಸಿ , ಆರೋಪಿಗಳ ವಿರುದ್ದ ನಿಗಧಿತ ವೇಳೆಯೊಳಗೆ ನ್ಯಾಯಾಲಯಕ್ಕೆ ದೋಷಾರೋಪಣೆಯನ್ನು ಸಲ್ಲಿಸಿ , ಆರೋಪಿಗೆ ಜೀವಾವಧಿ ಶಿಕ್ಷೆಯಾಗುವಲ್ಲಿ ಯಶಸ್ವಿಯಾದ ಬಂಗಾರಪೇಟೆ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ , ಡಿವೈಎಸ್ಪಿ ಬಿ.ಕೆ. ಉಮೇಶ್ ಅವರು ಶ್ಲಾಘಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.