ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : – ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವ ತಲುಪಿಸುವ ಸಂಕಲ್ಪದೊಂದಿಗೆ ಡಿಜಟಲೀಕರಣದ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮುನ್ನುಡಿ ಬರೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು .
ಬುಧವಾರ ಬ್ಯಾಂಕಿನ ಸಭಾಂಗಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮಂಜೂರಾಗಿರುವ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿ , ವಾಣಿಜ್ಯ ಬ್ಯಾಂಕುಗಳಿಗಿಂತ ಅತ್ಯುತ್ತಮ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ ಧೈಯ ನಮ್ಮದಾಗಿದ್ದು , ಗ್ರಾಹಕರು ಠೇವಣಿ ಇಡುವ ಮೂಲಕ ಬ್ಯಾಂಕಿಗೆ ಶಕ್ತಿ ತುಂಬಬೇಕು ಎಂದರು . ಸಹಕಾರಿ ವ್ಯವಸ್ಥೆ ಎಂದರೆ ಬುಕ್ ಅಡ್ಡಸ್ಮೆಂಟ್ ಎಂಬ ಅಪವಾದವಿದ್ದು , ಇದನ್ನು ದೂರ ಮಾಡುವ ಮೂಲಕ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಟಲೀಕರಣಗೊಳಿಸಲಾಗಿದೆ , ನಮ್ಮ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರವಾನಗಿಯೊಂದಿಗೆ ಸೇವೆ ಸಲ್ಲಿಸುತ್ತಿದ್ದು , ಪಾರದರ್ಶಕತೆ ಕಾಪಾಡಲಾಗಿದೆ ಎಂದರು .
ಇಂಟರ್ನೆಟ್ ಬ್ಯಾಂಕಿಂಗ್ ಶೀಘ್ರ ಅನುಷ್ಠಾನ ಕಳೆದ ಏಳೂವರೆ ವರ್ಷಗಳ ಹಿಂದೆ ನಬಾರ್ಡ್ ಕಚೇರಿಗೆ ಹೋದರೆ ನಮ್ಮನ್ನು ನೋಡಿ ನಗುತ್ತಿದ್ದರು , ಒಂದು ಸಭೆಯಲ್ಲಿ ೩೦ ಲಕ್ಷ ರೂ ಡಿಸಿಸಿ ಬ್ಯಾಂಕಿಗೆ ನೀಡಲು ನಬಾರ್ಡ್ ಹೆದರಿತ್ತು ಇಂತಹ ಅವಮಾನವನ್ನು ಸವಾಲಾಗಿ ಸ್ವೀಕರಿಸಿ ೨೫ ದಿನಗಳಲ್ಲಿ ಕೋರ್ ಬ್ಯಾಂಕಿಂಗ್ ಮಾಡಿ ನಮ್ಮ ಸಾಮರ್ಥ್ಯವನ್ನು ತೋರಿಸಿದವು ಎಂದು ಸ್ಮರಿಸಿದರು . ದಿವಾಳಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಿಸಿಸಿ ಬ್ಯಾಂಕಿನೊಂದಿಗೆ ವಿಲೀನದ ಪ್ರಸ್ತಾಪ ಹೊಂದಿದ್ದ ಕೋಲಾರ ಡಿಸಿಸಿ ಬ್ಯಾಂಕನ್ನು ನಮ್ಮ ಆಡಳಿತ ಮಂಡಳಿ ಸಹಕಾರದೊಂದಿಗೆ ಉಳಿಸಿ ಇಷ್ಟೊಂದು ಎತ್ತರಕ್ಕೆ ಬೆಳಸಿದ್ದೇವೆ , ನಾನು ಅಧ್ಯಕ್ಷನಾದಾಗ ದಿವಾಳಿ ಬ್ಯಾಂಕಿನ ಅಧ್ಯಕ್ಷನೆಂದು ನಗುತ್ತಿದ್ದವರು ಇಂದು ಗೌರವದಿಂದ ಕೂರಿಸಿ ಮಾತನಾಡುವಂತೆ ಮಾಡಿದ್ದೇವೆ ಎಂದು ತಿಳಿಸಿದರು .
ಈಗಾಗಲೇ ಬ್ಯಾಂಕ್ ನೆಫ್ಟ್ , ಆರ್ಟಿಜಿಎಸ್ ಪೇಮೆಂಟ್ ಸಿಸ್ಟಮ್ , ಬೆನಿಫಿಟ್ ಟ್ರಾನ್ಸ್ಫರ್ , ಆಧಾರ್ ಬೇಸ್ಡ್ ಪೇಮೆಂಟ್ , ಎಸ್ಎಂಎಸ್ ಅಲರ್ಟ್ , ರೂಪಕಾರ್ಡ್ ನೀಡಿಕೆ , ಚೆಕ್ ಟಾನಕನ್ ಸಿಸಮ್ , ಮೈಕೋ ಎಟಿಎಂ , ಮೊಬೈಲ್ ಎಟಿಎಂ ವ್ಯಾನ್ ಸೇರಿದಂತೆ ಎಲ್ಲಾ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು . ಇಂಟರ್ನೆಟ್ ಬ್ಯಾಂಕಿಂಗ್ ಅನುಷ್ಠಾನ ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ ಎಂದ ಅವರು , ನಮ್ಮದು ಬಡವರ ಬ್ಯಾಂಕ್ , ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಶುಭಘಳಿಗೆಯಾಗಿದ್ದು , ರೈತರ ನೆರವಿಗೆ ನಮ್ಮ ಆಡಳಿತ ಮಂಡಳಿ , ಸಿಬ್ಬಂದಿ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು . ೫ ಲಕ್ಷ ಮಹಿಳೆಯರು , ೩೫ ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಸಾಲ ಸೌಲಭ್ಯ ಒದಗಿಸಿದ ಹೆಮ್ಮೆ ನಮಗಿದೆ , ಇದೀಗ ಡಿಜಟಲೀಕರಣದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ತಲುಪಿಸಲು ಧಾಪುಗಾಲು ಇಡುತ್ತಿದ್ದೇವೆ ಎಂದರು .
ಸಹಕಾರಿ ಬ್ಯಾಂಕ್ ಮಾತ್ರ ಬಡವರು , ರೈತರ ಕೈಹಿಡಿಯುತ್ತದೆ ಎಂಬ ಸತ್ಯ ಅರಿತು ಇಲ್ಲೇ ಠೇವಣಿ ಇಡಿ ಎಂದು ಮನವಿ ಮಾಡಿದ ಅವರು , ಕೆಲವರು ಈವಣಿ ಇಡಲು ವಾಣಿಜ್ಯ ಬ್ಯಾಂಕ್ , ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್ ಎಂಬ ಮನಸ್ಥಿತಿಯಲ್ಲಿದ್ದಾರೆ ಅಂತಹ ಮನೋಭಾವದಿಂದ ಹೊರಬನ್ನಿ , ಠೇವಣಿ ಸಂಗ್ರಹ ಹೆಚ್ಚಿದಷ್ಟು ಮತ್ತಷ್ಟು ಬಡವರು , ರೈತರಿಗೆ ಸಾಲ ಸೌಲಭ್ಯ ವಿಸ್ತರಿಸಬಹುದಾಗಿದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ನಾಗನಾಳ ಸೋಮಣ್ಣ , ಅನಿಲ್ ಕುಮಾರ್ , ಹನುಮಂತರೆಡ್ಡಿ , ಕೆ.ವಿ.ರಯಾನರ್ , ವೆಂಕಟರೆಡ್ಡಿ , ನಾಗಿರೆಡ್ಡಿ , ಗೋವಿಂದರಾಜ್ , ವೃತ್ತಿಪರ ನಿರ್ದೇಶಕ ಮಹಮದ್ ಇಲಿಯಾಸ್ , ಬ್ಯಾಂಕಿನ ಎಂಡಿ ವೆಂಕಟೇಶಪ್ಪ , ಮುಖಂಡ ಎಸ್.ವಿ.ಸುಧಾಕರ್ , ಸಿಬ್ಬಂದಿ ಪದ್ಮಮ್ಮ ಹ್ಯಾರೀಸ್ , ಜಬ್ಬಾರ್ ಮತ್ತಿತರರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.