ರಸ್ತೆಯಲ್ಲಿ ನಿಂತ ಮಳೆನೀರಿನ ಮೇಲೆ ಮಲಗಿ ಶ್ರೀ ಟಿ. ಆರ್. ಕೃಷ್ಣಪ್ಪ ರಿಂದ ಪ್ರತಿಭಟನೆ
(ವಿಶ್ವಕನ್ನಡಿಗ ನ್ಯೂಸ್ ),ಶಿವಮೊಗ್ಗ: ರಸ್ತೆ ದುರಸ್ಥಿ ಮಾಡದ ಅಧಿಕಾರಿಗಳ ವಿರುದ್ಧ ಮಳೆನೀರು ನಿಂತಲ್ಲಿ ಅರೆ ಬೆತ್ತಲಾಗಿ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಕೆ. ಆರ್. ಕೃಷ್ಣಪ್ಪರವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ರಿಪ್ಪನಪೇಟೆಯಲ್ಲಿ ನಡೆದಿದೆ.
ರಿಪ್ಪನಪೇಟೆಯಲ್ಲಿ ಸಾಮಾಜಿಕ ಹೋರಾಟವನ್ನು ಏಕಾಂಗಿಯಾಗಿ ಪ್ರದರ್ಶಿಸುವ ಮೂಲಕ ಶ್ರೀ ಟಿ . ಆರ್.ಕೃಷ್ಣಪ್ಪ ಸಂಬಂದಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವಲ್ಲಿ ಸದಾ ಸುದ್ದಿಯಲ್ಲಿದ್ದಾರಲ್ಲದೆ ತಮ್ಮ ಸರಳತೆ ಕಾರಣದಿಂದ ಎಲ್ಲರಿಗೂ ಸುಲಭವಾಗಿ ಸಿಗುತ್ತಾರೆ.
ಈಜಿ ಪ್ರತಿಭಟನೆ ನಡೆಸಿದ ಶ್ರೀ ಕೃಷ್ಣಪ್ಪರ ವಿನೂತನ ಪ್ರತಿಭಟನೆಯನ್ನು ಕೈಗೊಂಡಿದಕ್ಕೆ ಕಾರಣ ರಿಪ್ಪನಪೇಟೆಯ ಮುಖ್ಯ ರಸ್ತೆಯಲ್ಲಿ ಪ್ರತಿ ಬಾರಿ ಮಳೆ ಬಂದಾಗ ನೀರು ನಿಂತು ಸಂಚಾರಕ್ಕೆ ಅನಾನೂಕುಲ ಉಂಟಾಗುತ್ತಿತ್ತು. ಹೀಗಾಗಿ ನಿಂತ ಮಳೆ ನೀರಿನಲ್ಲಿ ಮಲಗಿ ಪ್ರತಿಭಟಿಸುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಸಾಕಷ್ಟು ಅಪಘಾತವಾಗಿದೆ. ನೀರುನಿಲ್ಲದಂತೆ ದುರಸ್ಥಿ ಮಾಡುವಂತೆ ಮನವಿ ಮಾಡಿದ್ರು ಸಹ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಹೋರಾಟಗಾರ ಕೃಷ್ಣಪ್ಪ ನೀರು ನಿಂತ ಬಳಿ ಅರೆ ಬೆತ್ತಲಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.