ಧಾರವಾಡ (www.vknews.com) : ಇಲ್ಲಿಗೆ ಹತ್ತಿರದ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ‘ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳಮಠ’ದಲ್ಲಿರುವ ಶ್ರೀಮದ್ ವೀರಶೈವ ಸಂಸ್ಕೃತ ವೇದ ಪಾಠಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯಕ್ಕೆ 2021-22ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಪ್ರಾಥಮಿಕ 5ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಇಲ್ಲಿ ಸೇರಬಯಸುವ ವಿದ್ಯಾರ್ಥಿಗಳು ವೀರಶೈವ ಬಡ ಜಂಗಮ ಕುಟುಂಬಗಳಿಗೆ ಸೇರಿದವರಾಗಿರಬೇಕು. ವಿದ್ಯಾರ್ಥಿನಿಲಯದಲ್ಲಿ ಉಚಿತ ವಸತಿ ಹಾಗೂ ಪ್ರಸಾದ(ಊಟ)ದ ವ್ಯವಸ್ಥೆಯಿದೆ. ಇಲ್ಲಿ ಸಂಸ್ಸøತ, ವೈದಿಕ ಶಿಕ್ಷಣ, ಜ್ಯೋತಿಷ್ಯಶಾಸ್ತ್ರ, ಯೋಗಶಿಕ್ಷಣದ ಜೊತೆಗೆ ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಣ ನೀಡಿಕೆಗೂ ವ್ಯವಸ್ಥೆ ಇದೆ. ಭೌತಿಕವಾಗಿ ವಿದ್ಯಾರ್ಥಿಗಳ ಶಾಲಾ ಪ್ರವೇಶಕ್ಕೆ ಸರಕಾರ ಆದೇಶ ನೀಡದೇ ಹೋದಲ್ಲಿ ಸಂಸ್ಕøತ ವೇದ ಪಾಠಶಾಲೆ ಮೂಲಕ ಆನ್ಲೈನ್ ತರಗತಿ ಆರಂಭಿಸಲಾಗುವುದು. ಪಾಲಕರು/ಪೋಷಕರು ವಿದ್ಯಾರ್ಥಿಗಳ ವೈಯಕ್ತಿಕ ವಿವರ, ವಾರ್ಷಿಕ ಆದಾಯ, ಅಂಚೆ ವಿಳಾಸ, ವಾಟ್ಸ್ ಆ್ಯಪ್ ಸಂಖ್ಯೆ ಸಹಿತ ಅರ್ಜಿ ಸಲ್ಲಿಸಬೇಕು. ಶಾಲಾ ಪ್ರವೇಶ ಸಂದರ್ಭದಲ್ಲಿ ಸಲ್ಲಿಸುವ ಎಲ್ಲ ದಾಖಲೆಗಳನ್ನು ಕಳಿಸಬೇಕು.
ಅರ್ಜಿಗಳನ್ನು “ಸಿ.ಇ.ಓ., ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದ ಆಡಳಿತ ಮಂಡಳಿ, ಉಗರಗೋಳ-591110, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ” ಇವರಿಗೆ ಜುಲೈ-15ರ ಒಳಗಾಗಿ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9663511022, 8073378292, 9845480675 ಅಥವಾ 9945801422 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಪಾಠಶಾಲೆಯ ಆಡಳಿತ ಮಂಡಳಿ ಸಿಇಓ, ನಿವೃತ್ತ ಕೆ.ಎ.ಎಸ್. ಅಧಿಕಾರಿ ಎಂ.ಆರ್. ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.