ಮಂಗಳೂರು (www.vknews.com): ಗೋವಿನ ಹೆಸರಲ್ಲಿ ಮನುಷ್ಯರನ್ನು ಕೊಲ್ಲುವುದು ಹಿಂದು ಧರ್ಮಕ್ಕೆ ಕಲಂಕವಾಗಿದೆ ಮತ್ತು ಮುಸ್ಲಿಮರು ದೇಶದಲ್ಲಿ ವಾಸಿಸಬಾರದು ಎನ್ನುವವರು ಹಿಂದುಗಳೇ ಅಲ್ಲ ಎಂಬ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ನೀಡಿದ ಹೇಳಿಕೆ ಬದ್ದತೆಯಿಂದ ಕೂಡಿದ್ದೇ ಆಗಿದ್ದರೆ ಅದು ದೇಶದ ಸೌಹಾರ್ಧತೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅದ್ಯಕ್ಷ ಎಸ್ ಬಿ ದಾರಿಮಿ ಅಭಿಪ್ರಾಯ ಪಟ್ಟಿದ್ದಾರೆ.
ಮೋಹನ್ ಭಾಗವತ್ ಈ ಹೇಳಿಕೆಯನ್ನು ಈ ಮೊದಲೇ ನೀಡಿರುತ್ತಿದ್ದರೆ ಅದೆಷ್ಟೋ ಜನರ ಅಮೂಲ್ಯ ಜೀವವನ್ನು ಉಳಿಸ ಬಹುದಿತ್ತು ಮತ್ತು ದೇಶದ ಅಭಿವೃದ್ದಿ ಇನ್ನಷ್ಟು ವೇಗ ಪಡೆಯುತ್ತಿತ್ತು. ತಡವಾಗಿಯಾದರೂ ಈಗ ಜ್ಞಾನೋದಯ ಉಂಟಾದದ್ದು ಸ್ವಾಗತಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಆರೆಸ್ಸೆಸ್ ಸಹಿತ ಸಂಘಪರಿವಾರದ ಎಲ್ಲಾ ಕಾರ್ಯಕರ್ತರು ತಮ್ಮ ನಾಯಕರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ದೇಶದಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಪುನಃಸ್ಥಾಪನೆ ಮಾಡಲು ಪಣತೊಡ ಬೇಕಾಗಿದೆ ಎಂದು ದಾರಿಮಿಯವರು ಅಭಿಪ್ರಾಯ ಪಟ್ಟಿದ್ದಾರೆ.
ಧರ್ಮದ ಹೆಸರಲ್ಲಿ ಅಸಹಿಷ್ಣುತೆಯನ್ನು ಬೆಳೆಸುವುದು ದೇಶದ ಅಭಿವೃದ್ದಿಗೆ ಮಾರಕ ಎಂಬುದನ್ನು ಈಗಲಾದರೂ ಅರ್ಥಮಾಡಿಕೊಂಡಿದ್ದು ಉತ್ತಮ ಬೆಳವಣಿಗೆಯಾಗಿದೆ. ದ್ವೇಷವನ್ನೇ ಉಸಿರಾಗಿಸಿದ ಸಂಘಟನೆಗಳನ್ನು ಬಹುತೇಕ ಭಾರತೀಯರು ತಿರಸ್ಕರಿಸುತ್ತಲೇ ಬಂದಿದ್ದಾರಾದರೂ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಹಿತಾಸಕ್ತಿಗಾಗಿ ಮುಸ್ಲಿಮರ ಬಗ್ಗೆ ವ್ಯಾಪಕ ಅಪಪ್ರಚಾರ ಮಾಡಿ ದೇಶದ ಜಾತ್ಯಾತೀತ ಪರಂಪರೆಗೆ ದಕ್ಕೆ ತಂದಿರುವುದು ಸ್ಮರಣೀಯವಾಗಿದೆ. ಆದಾಗ್ಯೂ ಇಲ್ಲಿನ ಬಹುತೇಕ ಜನರು ದೇಶದ ಸಂವಿಧಾನಕ್ಕೆ ಬದ್ದರಾಗಿ ಬದುಕುತ್ತಿರುವುದರಿಂದದೇಶ ಇಷ್ಟಾದರೂ ಸುವ್ಯವಸ್ಥೆಯಲ್ಲಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷ ಭೇದ ಮೆರೆತು ಹಿಂದೂ ಮುಸ್ಲಿಮರು ಅಭಿವೃದ್ದಿಯ ಮಾನದಂಡವನ್ನು ಮುಂದಿಟ್ಟು ಕೆಲಸ ಮಾಡಿದರೆ ಒಂದು ಹೊಸ ಯುಗವನ್ನು ಸೃಷ್ಟಿಸಬಹುದು.
ಹಿಂದಿನ ಕಹಿ ಘಟನೆಗಳನ್ನು ಮೆರೆತು ಮುಂದೆ ಎಲ್ಲಾರೂ ಶಾಂತಿ ಪ್ರೀತಿಯಿಂದ ಬದುಕುವ ಕಲೆಯನ್ನು ರೂಪಿಸಿ ಕೊಳ್ಳಬೇಕಾಗಿದೆ. ಈ ಬಗ್ಗೆ ಉಭಯ ಕಡೆಯ ನಾಯಕರೂ ಪರಸ್ಪರ ಸಂವಹನ ನಡೆಸಿ ತೀರ್ಮಾನಕ್ಕೆ ಬಂದರೆ ಅದೊಂದು ಐತಿಹಾಸಿಕ ಹೆಜ್ಜೆಯಾಗಿತ್ತದೆ. ಇದಲ್ಲದೇ ಧರ್ಮದ ಹೆಸರಲ್ಲಿ ಇನ್ನೆಷ್ಟು ಕಾಲ ಕಚ್ಚಾಟ ನಡೆಸುವುದು? ಎಂದು ಅವರು ಪ್ರಶ್ನಿಸಿದ್ದಾರೆ. ಜಗತ್ತು ನವ ನಾಗರಿಕತೆಗೆ ತೆರೆದು ಕೊಂಡ ನಂತರ ನಿಜವಾಗಿಯೂ ಧರ್ಮದ- ಜಾತಿಯ ಹೆಸರಲ್ಲಿ ದ್ವೇಷ ಕಟ್ಟಿ ಕೊಳ್ಳುವುದಕ್ಕೆ ಯಾವುದೇ ಅರ್ಥ ಇಲ್ಲ ಎಂದು ದಾರಿಮಿಯವರು ತಿಳಿಸಿದ್ದಾರೆ.
ಅದೇ ರೀತಿ ಸಾಮಾಜಿಕ ನ್ಯಾಯಕ್ಕೆ ಬದ್ದರಾಗಿದ್ದು ಕೊಂಡು ಎಲ್ಲಾ ಪಕ್ಷಗಳು ಎಲ್ಲಾ ಜಾತಿ ಜನಾಂಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅಧಿಕಾರದಲ್ಲಿ ಪಾಲು ನೀಡಲು ಮುಂದೆ ಬಂದರೆ ಭಾರತವನ್ನು ಇನ್ನಷ್ಟು ಬಲಿಷ್ಟವಾಗಿ ಕಟ್ಟಲು ಸಾದ್ಯವಾಗುತ್ತದೆ ಎಂದು ದಾರಿಮಿಯವರು ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.