ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ಜಿ.ಇ.ರಾಮೇಗೌಡ ರವರ ಕಚೇರಿಯ ಸಮೀಪ ಜೆ.ಡಿ.ಎಸ್ ಪಕ್ಷದ ವತಿಯಿಂದ ಕೋವಿಡ್-19 ಪ್ರಯುಕ್ತ ಕರೋನಾ ಸೋಂಕಿನಿಂದ ಮೃತಪಟ್ಟ ಬಡ ಕುಟುಂಬಕ್ಕೆ ಧನ ಸಹಾಯ ಹಾಗೂ ಸಂಕಷ್ಟದಲ್ಲಿರುವ ಕಲಾವಿದರು, ಅತಿಥಿ ಉಪನ್ಯಾಸಕರಿಗೆ ದಿನಸಿ ಪದಾರ್ಥಗಳ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಶ್ರೀ ಮಂಗಳಾನಂದ ಸ್ವಾಮಿಜಿ ರವರು ಪ್ರಾರಂಭಿಕವಾಗಿ ಆಶಿರ್ವಾಚನ ನೀಡಿ ಮಾತನಾಡುತ್ತಾ “ಸೇವೆ ಎಂಬುದು ಸಾರ್ವಕಾಲಿಕವಾಗಿಯೂ ಸತ್ಯವಾಗಿರಬೇಕು, ಬಡವರ ಹಸಿವು ನಿಗಿಸುವ, ಅವರ ಸಮಸೈಗಳಿಗೆ ದನಿಯಾಗುವ ಮೂಲಕ ಭಗವಂತ ರಾಮನ ಪ್ರತಿರೂಪದಲ್ಲಿ ಸೇವೆ ಮಹತ್ತರವಾಗಿರಬೇಕು. ಆ ಹಾದಿಯಲ್ಲಿ ಮಾಲೂರಿನ ಮಾಣಿಕ್ಯ, ಸಮಾಜ ಸೇವಕ ಜಿ.ಇ.ರಾಮೇಗೌಡ ರವರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಉತ್ತಮ ಸೇವೆಯನ್ನು ಸುಮಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ, ಇವರಿಗೆ ಭಗವಂತ ಆರೋಗ್ಯ ಭಾಗ್ಯ ನೀಡಿ ತಾಲ್ಲೂಕಿನ ಬಡವರ ಸೇವೆ ಮಾಡಲು ಸದಾ ಹೀಗೆ ಮುಖ್ಯವಾಹಿನಿಯಲ್ಲಿರಿ ಎಂದು ಗುಣಗಾನ” ಮಾಡಿದರು.
ಮಾಲೂರಿನ ಸಮಾಜ ಸೇವಕರು, ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾದ ಜಿ.ಇ.ರಾಮೇಗೌಡ ರವರು ಮಾತನಾಡಿ “ಸುಮಾರು ವರ್ಷಗಳಿಂದ ನನ್ನ ಸೇವೆ ಪ್ರಮಾಣಿಕವಾಗಿ ಬಡವರ ಪರವಾಗಿ ಮಾಡುತ್ತಾ ಬಂದಿದ್ದೇನೆ ಹಾಗೇ ಎರಡು ವರ್ಷಗಳಿಂದ ಆವರಿಸುವ ಕರೋನಾ ಸಂಕಷ್ಟದ ಕಾಲದಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಆಶಾಭಾವನೆಯಿಂದ ಇಂದು ಶ್ರೀ ಶ್ರೀ ಶ್ರೀ ಮಂಗಳಾನಂದ ಸ್ವಾಮಿಜಿ ರವರ ಮಾರ್ಗದರ್ಶನದಲ್ಲಿ ಕರೋನಾ ಸೋಂಕಿನಿಂದ ಮೃತಪಟ್ಟವರಿಗೆ ಧನಸಹಾಯ ಹಾಗೂ ಕಲಾವಿದರು ಹಾಗೂ ಅತಿಥಿ ಉಪನ್ಯಾಸಕರಿಗೆ ದಿನಸಿ ಪದಾರ್ಥಗಳ ಆಹಾರ ಕಿಟ್ ಗಳ ವಿತರಣೆ ಮಾಡುವ ಮೂಲಕ ಸ್ಪಂದಿಸಿದ್ದೇವೆ, ಇನ್ನೂ ತಾಲ್ಲೂಕಿನ ಜನರ ಎಲ್ಲಾ ರೀತಿಯ ಕಷ್ಟಗಳಿಗೂ ನಾನು ಭಾಗಿಯಾಗುವ ಮೂಲಕ ಸೇವೆಯನ್ನು ನಿರಂತರವಾಗಿ ಮುಂದುವರೆಸುವೆ” ಎಂದರು.
ಕಾರ್ಯಕ್ರಮದಲ್ಲಿ ಜಿ.ಇ.ರಾಮೇಗೌಡ ರವರ ಪತ್ನಿ ಶ್ರೀಮತಿ ರಶ್ಮಿ, ಮಾಲೂರು ಜೆ.ಡಿ.ಎಸ್ ಪಕ್ಷದ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ ರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪರಮೇಶ್, ವಕೀಲರಾದ ಆನಂದ್ ಕುಮಾರ್, ಬಲ್ಲಹಳ್ಳಿ ನಾರಾಯಣಸ್ವಾಮಿ, ವೆಂಕಟೇಶ್, ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ದೊಮ್ಮಲೂರು ದೇವರಾಜ್, ರಾಘವೇಂದ್ರ, ವರದಾರಾಜ್, ಜಯಕರ್ನಾಟಕ ಸಂಘನೆಯ ಅಧ್ಯಕ್ಷ ದಿನೇಶ್ ಗೌಡ, ಡಾ.ರಮೇಶ್, ಹಾಗೂ ಮಾಲೂರು ತಾಲ್ಲೂಕಿನ ಎಲ್ಲಾ ಜೆ.ಡಿ.ಎಸ್ ಮುಖಂಡರು, ಕಲಾವಿದರು, ಅತಿಥಿ ಉಪನ್ಯಾಸಕರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.