ದೊಡ್ಡಬಳ್ಳಾಪುರ (ವಿಶ್ವ ಕನ್ನಡಿಗ ನ್ಯೂಸ್): ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿಯ ಭಕ್ತರ ಹಳ್ಳಿ ಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿ ನ ಕಾರ್ಯಕ್ರಮದಲ್ಲಿ , ದಲಿತ ಕವಿ ಸಿದ್ದಲಿಂಗಯ್ಯ ನವರ ಬಗ್ಗೆ ಉಪನ್ಯಾಸ ಹಾಗೂ ಪತ್ರಿಕಾ ದಿನಾಚರಣೆ ಪ್ರಯುಕ್ತ ಡಾ.ಕೃಷ್ಣಮೂರ್ತಿ ನಾಡಿಗ್ ಅವರ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪಂಚಾಯತಿಯ ಅಧ್ಯಕ್ಷರಾದ ಬಿ.ಆರ್.ಸಿದ್ಧಲಿಂಗಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ರಾಷ್ತ್ರೀಕೃತ ಹಾಗು ವಾಣಿಜ್ಯ ಬ್ಯಾಂಕುಗಳಲ್ಲಿ ಕನ್ನಡ ಬಾರದ ಅಧಿಕಾರಿಗಳು, ಸಿಬ್ಬಂದಿ ಯವರು ನೇಮಕ ಗೊಂಡು ಗ್ರಾಮೀಣ ಜನರಿಗೆ ವ್ಯವಹರಿಸಲು ತುಂಬ ತೊಂದರೆ ಆಗುತ್ತಿದೆ. ಕನ್ನಡ ಸಂಘಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಕನ್ನಡಗರನ್ನೇ ಬ್ಯಾಂಕು ಗಳಲ್ಲಿ ನೇಮಿಸಿ ಕನ್ನಡಿಗರಿಗೆ ಉದ್ಯೋಗ ಮತ್ತು ಗ್ರಾಮೀಣ ರಿಗೆ ಉಪಯೋಗ ವಾಗುವಂತೆ ಮಾಡಬೇಕು ಎಂದರು.
ಪಿ.ಡಿ.ಓ. ಎನ್.ತ್ರಿವೇಣಿ ಅವರು ಕಾರ್ಯಕ್ರಮನ್ನು ಉದ್ಘಾಟಿಸಿದರು ತಾ ಕಸಾಪ ಅಧ್ಯಕ್ಷರಾದ ಪ್ರಮೀಳಮಹಾದೇವ್ ಪ್ರಾಸ್ತಾವಿಕವಾಗಿ ಮಾತನಾಡಿದರು . ಡಾ. ಸಿದ್ಧಲಿಂಗಯ್ಯ ಅವರ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಗಂಗ ಹನುಮಯ್ಯ ರವರು ಸಾಮಾಜಿಕ ನ್ಯಾಯದ ಪರಿಕಲ್ಪನೆ ಯಲ್ಲಿ ಶೋಷಿತರ ದನಿಯಾಗಿದ್ದ ಸಿದ್ದಲಿಂಗಯ್ಯರವರ ತುಡಿತ ಅನನ್ಯವಾದುದು ಎಂದರು .
ಡಾ.ಕೃಷ್ಣ ಮೂರ್ತಿ ನಾಡಿಗರ್ ಅವರ ಬಗ್ಗೆ ನಗರ ಕಸಾಪ ಅಧ್ಯಕ್ಷರಾದ ಬಿ.ಪಿ.ಹರಿಕುಮಾರ್ ಮಾತನಾಡಿ “ಪತ್ರಿಕೋದ್ಯಮದ ಪಿತಾಮಹ ಎನಿಸಿರುವ ಇವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ” ಎಂದರು .
ದೊಡ್ಡ ಬೆಳವಂಗಲ ಹೋಬಳಿಯ ಕಸಾಪ ಅಧ್ಯಕ್ಷ ಸಂತೋಷ್ ಕಾರ್ಯಕ್ರಮದ ನಿರೂಪಣೆ ನಿರ್ವಹಣೆ ಮಾಡಿದರು . ಭಕ್ತರ ಹಳ್ಳಿ ಪಂಚಾಯತಿ ಸದಸ್ಯರಾದ ರವಿಕುಮಾರ್, ಪ್ರತಿಮಾ ಉಮೇಶ್,ಗಂಗ ಹನುಮಯ್ಯ, ಶ್ರೀ ಲತಾ, ವೆಂಕಟ ಲಕ್ಷ್ಮಮ್ಮ,ರಾಜಣ್ಣ, ಅವರೊಂದಿಗೆ ಸಿಬ್ಬಂದಿ ವರ್ಗದವರು , ಗ್ರಾಮಸ್ಥರು ಹಾಗೂ ತಾ.ಕಸಾಪ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್ , ಸೂರ್ಯನಾರಾಯಣ್ ಇತರರು ಭಾಗವಹಿಸಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.