ಲಕ್ಕೂರು (ವಿಶ್ವ ಕನ್ನಡಿಗ ನ್ಯೂಸ್): ಕೋಲಾರ ಜಿಲ್ಲೆ ಮಾಲೂರಿಗೆ ಸಮೀಪದಲ್ಲೇ ಇರುವ ಶ್ರೀ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯ ಚಿಕ್ಕ ತಿರುಪತಿಯಲ್ಲಿದ್ದು ನಾಲ್ಕು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಇರುವ ಪವಿತ್ರ ಪುಣ್ಯಕ್ಷೇತ್ರ. ಚಿಕ್ಕತಿರುಪತಿಗೆ ಪೌರಾಣಿಕ ಹಿನ್ನೆಲೆಯೂ ಇದೆ. ಇಲ್ಲಿರುವ ದಿವ್ಯ ವಿಗ್ರಹವನ್ನು ಸ್ವತಃ ಪಂಚಭೂತಗಳಲ್ಲಿ ಒಬ್ಬನಾದ ಪ್ರತಿಷ್ಠಾಪಿಸಿ, ಪೂಜಿಸಿದ ಎನ್ನುತ್ತದೆ ಸ್ಥಳ ಪುರಾಣ.
ಕರೋನಾ ಮಹಾಮಾರಿಯ ಸಂದಿಗ್ದ ಪರಿಸ್ಥಿತಿಯಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ಶ್ರೀ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯವನ್ನು ಲಾಕ್ ಡೌನ್ ಪರಿಣಾಮ ಮುಚ್ಚಲಾಗಿತ್ತು. ಇದೀಗ ಕೋವಿಡ್ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ದೇವಾಲಯಗಳನ್ನು ತೆರೆಯುವ ಕುರಿತು ಧಾರ್ಮಿಕ ದತ್ತಿ ಇಲಾಖೆಯೂ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯದ ನಿವೃತ್ತ ಪ್ರಧಾನ ಆಚರ್ಕರಾದ ನಾರಾಯಣಚಾರ್ ರವರು ಮಾತನಾಡುತ್ತಾ “ಪುಣ್ಯಕ್ಷೇತ್ರ ಚಿಕ್ಕತಿರುಪತಿಗೆ ಆಗಮಿಸುತ್ತಿರುವ ಪ್ರವಾಸಿ ಯಾತಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ದೇವಾಲಯ ಆರಂಭವಾಗಿದ್ದೆ ತಡ ಎಂದು ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಭಕ್ತಧಿಗಳು ದೇವಾಲಯಕ್ಕೆ ಬಂದು ಮಂಗಳರಾತಿ ಹಾಗೂ ದರ್ಶನ ಮಾಡಿಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಕೋವಿಡ್ ನಿಯಾಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಎಲ್ಲಾರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ” ಎಂದರು.
ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದ ಧಾರ್ಮಿಕ ದತ್ತಿ ಇಲಾಖೆ ದೇವಾಲಯದ ಕಾರ್ಯನಿರ್ವಹಣಧಿಕಾರಿಗಳಾದ ಮಂಜುಳ ರವರು ಮಾತನಾಡಿ ” ಕೋವಿಡ್ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಭಕ್ತಧಿಗಳಿಗೆ ದೇವಾಲಯ ಪ್ರವೇಶ, ದೇವರ ದರ್ಶನ, ಆರತಿ ಸೇವೆಗೆ ಮಾತ್ರ ಸೀಮಿತಗೋಳಿಸಿ ನಮಗೆ ಆದೇಶ ನೀಡಿರುವ ಕಾರಣ ಎಲ್ಲಾ ರೀತಿಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಭಕ್ತಧಿಗಳಿಗೆ ದೇವಾಲಯಕ್ಕೆ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ” ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.