ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ತ್ಯಾಗ ಬಲಿದಾನಗಳ ಈದುಲ್ ಅಝ್ಹಾ ಹಬ್ಬ ನಾಡಿನಾದ್ಯಂತ ಬುಧವಾರ ಆಚರಿಸಲಿದೆ. ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿದ ಜನತೆ ಪೂರ್ಣವಾಗಿ ಇನ್ನೂ ಚೇತರಿಸಿಲ್ಲ ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಗಾಗಿ ಈದ್ ಆಚರಣೆಗೆ ಸರಕಾರವು ಕಟ್ಟುನಿಟ್ಟಿನ ಕೋವಿಡ್ ಮಾರ್ಗ ಸೂಚಿ ಹೊರಡಿಸಿದೆ.
ಪ್ರಸ್ತುತ ಮಾರ್ಗ ಸೂಚಿಗಳನ್ನು ಪಾಲಿಸಿ ಭಕ್ತಿ ಪೂರ್ವಕವಾಗಿ ಸರಳವಾಗಿ ಈದ್ ಆಚರಿಸಲು ಸುನ್ನೀ ಮಾನೇಜ್ ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ಕರೆ ನೀಡಿದೆ.
ಪ್ರತಿ ಯೊಬ್ಬರು ಮೂಗು ಬಾಯಿ ಮುಚ್ಚಿಕೊಂಡು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹಸ್ತಲಾಘವ ಆಲಿಂಗನ ಮಾಡದಿರುವುದು ಗುಂಪು ಗೂಡದಿರುವುದು ಹಾಗೂ ಪ್ರತಿಯೊಂದು ಹೆಜ್ಜೆಯಲ್ಲೂ ಜಾಗ್ರತೆ ವಹಿಸಿ ಈದ್ ಆಚರಿಸಿ ನಾಡಿನ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಮಾಡಬೇಕಾಗಿ ಎಸ್ ಎಂ ಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.