ಪುತ್ತೂರು (www.vknews.com) : ಹಲವಾರು ರಾಜಕೀಯ ಪಕ್ಷಗಳ ಜನ ಪ್ರತಿನಿಧಿಗಳನ್ನು ನೀವು ನೋಡಿರಬಹುದು ಆದರೆ ಇಲ್ಲೊಬ್ಬ ಬಡ ಕೂಲಿ ಕಾರ್ಮಿಕ ತನ್ನ ಪಕ್ಷವಾದ SDPI ಪಕ್ಷದಿಂದ ಗ್ರಾಮ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ನಂತರದಿಂದ ನಿರಂತರವಾಗಿ ಸಾಮಾಜಿಕ ಕೆಲಸಗಳಲ್ಲಿ ಹಾಗೂ ತನ್ನ ವಾರ್ಡಿನಲ್ಲಿ ನಿರಂತರವಾಗಿ ಶ್ರಮದಾನ ಮಾಡುತ್ತ ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಗಳನ್ನು ತನ್ನ ವಾರ್ಡಿನಲ್ಲಿ ಸದ್ದಿಲ್ಲದೆ ಮಾಡುತ್ತಿದ್ದಾರೆ.
ಹೌದು ನಾಗೇಶ್ ಕುರಿಯ ರವರು ಕೇವಲ ಪಂಚಾಯತ್ ಸದಸ್ಯ ಎಂಬ ಹೆಸರಿಗಷ್ಟೆ ಸೀಮಿತವಾಗದೆ ತನ್ನಲ್ಲಿ ಸಾಧ್ಯವಿರುವಷ್ಟು ಸಮಯಗಳನ್ನು ಊರಿನ ಅಭಿವೃದ್ಧಿಗೆ ಮೀಸಲಿಟ್ಟು ನಿರಂತರವಾಗಿ ಸಮಾಜಮುಖಿ ಕೆಲಸಗಲ್ಲಿ ತೊಡಗಿಸಿಕೊಂಡು ಇಡೀ ಊರಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಿನಾಂಕ 19/07/2021 ಸೋಮವಾರ ದಂದು ಕೂಡ ತನ್ನ ದೈನಂದಿನ ಕೆಲಸಕ್ಕೆ ರಜಾ ಮಾಡಿ ಅಜಲಾಡಿಯಿಂದ ಓಟೆತ್ತಿಮ್ಮಾರ್ ವರೆಗೂ ರಸ್ತೆಯ ಎರಡೂ ಬದಿಯಲ್ಲಿ ಕೂಡ ಅಡ್ಡವಾಗಿ ಇದ್ದ ಪೊದರುಗಳನ್ನು ಶುಚಿತ್ವಗೊಳಿಸಿದರು…
ಈ ಸಂದರ್ಭದಲ್ಲಿ SDPI ಬ್ರಾಂಚ್ ಸದಸ್ಯರಾದ ಸಮೀರ್ ಕುರಿಯ ಬೇಟಿ ನೀಡಿದರು ಹಾಗೂ ಊರಿನವರಾದ ಬಾಬು ಇನ್ನಿತರರು ಜೊತೆಯಲ್ಲಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.