ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲೂಕು ಛಾಯಾಗ್ರಾಹಕ ಸಂಘದ ನೂತನ ಅಧ್ಯಕ್ಷರಾಗಿ ಜಿಲ್ಲಾಧ್ಯಕ್ಷರಾಧ ಕೃಷ್ಣಣ್ಣನವರ ನೇತೃತ್ವದಲ್ಲಿ ಮಾಲೂರು ತಾಲೂಕು ಛಾಯಾಗ್ರಾಹಕರ ಸಂಘದ ಸರ್ವಸದಸ್ಯರ ತೀರ್ಮಾನದಂತೆ ಮಾಲೂರು ತಾಲೂಕು ಛಾಯಾಗ್ರಾಹಕ ಸಂಘದ ತಾಲ್ಲೂಕು ಅಧ್ಯಕ್ಷರನ್ನಾಗಿ ಪ್ರಗತಿ ಸ್ಟುಡಿಯೋ ರವಿ ಅವರನ್ನು ಆಯ್ಕೆ ಮಾಡಲಾಯಿತು.
ಛಾಯಗ್ರಾಹಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೃಷ್ಣಣ್ಣ ರವರು ಮಾತನಾಡಿ “ಛಾಯಗ್ರಾಹಕರು ಈ ಸಮಾಜದ ಬದಲಾವಣೆ ಮಾಡುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ನಿಜವಾದ ಸೇವಕರು.ಛಾಯಗ್ರಾಹಕರು ಸಂಘಟನಾ ಶಕ್ತಿಯೊಂದಿಗೆ ಪ್ರಾಮಾಣಿಕವಾಗಿ ದುಡಿದು ಸಮಾಜದ ಅಭಿವೃದ್ದಿಗೆ ಹಾಗೂ ಎಲ್ಲಾ ಛಾಯಗ್ರಾಹಕರ ಒಳಿತಿಗೆ ಶ್ರಮಿಸಬೇಕು” ಎಂದರು.
ನೂತನವಾಗಿ ಮಾಲೂರು ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಗತಿ ಡಿಜಿಟಲ್ ಸ್ಟೂಡಿಯೋ ಮಾಲೀಕರಾದ ರವಿ ರವರು ಮಾತನಾಡಿ “ಛಾಯಗ್ರಾಹಕರ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಹಿರಿಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ತಾಲ್ಲೂಕಿನ ಎಲ್ಲಾ ಛಾಯಗ್ರಾಹಕರ ಉತ್ತಮ ಒಡನಾಟದೊಂದಿಗೆ ಸಂಘವನ್ನು ಬಲ್ಯಾಢಗೋಳಿಸಿ, ಅವರ ಸಮಸೈಗಳನ್ನು ಪಟ್ಟಿ ಮಾಡಿ ನಮ್ಮಿಂದಾಗುವ ಸಹಕಾರವನ್ನು ನೀಡುವ ಮೂಲಕ ಸದಾ ಛಾಯಗ್ರಾಹಕರ ಒಳಿತಿಗೆ ಶ್ರಮಿಸುವ ಕಾರ್ಯವನ್ನು ಮಾಡುತ್ತೇವೆ. ಹಾಗೇ ಸರ್ಕಾರಗಳು ಛಾಯಗ್ರಾಹಕರ ಸಮಸೈಗಳಿಗೂ ಸ್ಪಂದಿಸುವ ಮೂಲಕ ವಿಶೇಷ ಸಹಕಾರ ನೀಡಬೇಕು” ಎಂದರು.
ಇದೇ ಸಂದರ್ಭದಲ್ಲಿ ಮಾಲೂರು ತಾಲ್ಲೂಕು ಛಾಯಗ್ರಾಹಕರ ಸಂಘದ ಗೌರವಾಧ್ಯಕ್ಷರಾಗಿ ಪಿ. ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೋಲಾರ ತಾಲೂಕು ಅಧ್ಯಕ್ಷರಾದ ಸ್ಪಂದನ ರಂಗನಾಥ್, ಮಾಲೂರು ತಾಲೂಕಿನ ಛಾಯಾಗ್ರಾಹಕರಾದ ಗೆಶ್, ಮಂಜುನಾಥ್ ,ನಟರಾಜ್,ಎಸ್ ನಾರಾಯಣ್ ,ರಾಮಕೃಷ್ಣಪ್ಪ, ಅಲಂಕಾರ್ ರಾಮು,ಶಿವಮೂರ್ತಿ, ಶಾಂತಮೂರ್ತಿ ,ವೇಣುಗೋಪಾಲ್,ಶ್ರೀನಿವಾಸ್ ,ಜಗ್ಗೇಶ್ ,ಚಿನ್ನುನಾಗೇಂದ್ರ, ಶಿವು, ರಘು, ವಿಕ್ಟರಿ ಚಂದು, ಲೋಕಿ, ಸತೀಶ್, ಹಾಗೂ ಹಲವಾರು ಸದಸ್ಯರು ಭಾಗವಹಿಸಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.