ಸುಳ್ಯ(ವಿಶ್ವಕನ್ನಡುಗ ನ್ಯೂಸ್): ಸಾಹಿತಿಕ, ಸಾಂಸ್ಕೃತಿಕ, ಕ್ರೀಡೆ, ರಸಪ್ರಶ್ನೆ…… ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ.) ಇದರ “ಕಾರ್ಯಕ್ರಮ ಸಂಯೋಜಕರಾಗಿ” ಹರ್ಷಿತ ಆಡೀಲು ನೇಮಕರಾಗಿರುತ್ತಾರೆ.
ಹರ್ಷಿತಾ ಇವರು ಮೂಲತಃ ಪುತ್ತೂರು ತಾಲೂಕಿನವರಾಗಿದ್ದು, ಕಳೆದ 12 ವರ್ಷಗಳಿಂದ ಬೆಂಗಳೂರಿನ ವಿವಿಧ ಸರ್ಕಾರೇತರ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿ, ಪ್ರೋಗ್ರಾಮ್ ಆಫೀಸರಾಗಿ, ಪ್ರೋಗ್ರಾಮ್ ಮ್ಯಾನೇಜರಾಗಿ, ಹೀಗೆ ವಿವಿಧ ರೀತಿಯ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುತ್ತಾರೆ, ಇವರು ಮಂಗಳೂರಿನ ಪ್ರತಿಷ್ಠಿತ ರೋಶನಿ ನಿಲಯ ವಿದ್ಯಾಸಂಸ್ಥೆಯಿಂದ “ಸಮಾಜಸೇವೆಯ” ವಿಷಯದಲ್ಲಿ “ಸ್ನಾತಕೋತ್ತರ” ಪದವಿಯನ್ನು ಪಡೆದುಕೊಂಡಿರುತ್ತಾರೆ.
ಇವರ ನೇಮಕವು ಜುಲೈ 20, 2021 ರಂದು ಜಾರಿಗೆ ಬರುವಂತೆ ಮಾಡಲಾಗಿದೆ ಎಂದು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಇದರ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.