ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪುರಸಭೆಗೆ ನಾಮಿನಿ ಸದಸ್ಯರನ್ನು ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಅವಧಿಯಲ್ಲಿ ಇಲ್ಲುಯವರೆಗೂ ಮಾಲೂರು ಪಟ್ಟಣ್ಣದ ಪುರಸಭೆಗೆ ನಾಮಿನಿ ಸದಸ್ಯರ ನೇಮಕ ಮಾಡದೇ ತಡ ಮಾಡಿದ್ದರು. ಆದರೆ ಅಂತೂ ಇಂತೂ ರಾಜ್ಯ ಪೌರಡಾಳಿತ ಸಚಿವರಾದ ನಾರಾಯಣಗೌಡ ರವರ ಆದೇಶದ ಮೇರೆಗೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಗಳಾದ ಕೆ.ಎಲ್.ಪ್ರಸಾದ್ ಅವರು ಪಟ್ಟಣ್ಣದ ಪುರಸಭೆಗೆ ಬಿ.ಜೆ.ಪಿ ಪಕ್ಷದ ಶ್ರೇಯಸ್ಸಿಗೆ ಸದಾ ದುಡಿಯುವ ಮೂಲಕ, ಪಕ್ಷ ನಿಷ್ಟೆ ತೋರಿರುವ ಸಿ.ಸುರೇಶ್, ಕೆ.ಲಕ್ಷ್ಮಿಕಾಂತ್ (ಕುಟ್ಟಿ), ವೆಂಕಟೇಶಪ್ಪ, ಎಂ.ಗೋಪಾಲ್, ಹಾಗೂ ಸೌಭಾಗ್ಯಮ್ಮ ರವರನ್ನು ನೇಮಕಗೋಳಿಸಿ ಆದೇಶಿಸಿದ್ದಾರೆ.
ಈ ಆದೇಶದಲ್ಲಿ ಸಿ.ಸುರೇಶ್ ಎಂಬುವವರು ಪಕ್ಷದ ನಿಷ್ಟಾವಂತ, ಕಾರ್ಯಕರ್ತ ಇವರು ಇತ್ತಿಚೀಗೆ ಮರಣವಾದುದ್ದರಿಂದ 4 ಮಂದಿ ನೂತನ ಸದಸ್ಯರಾಗಿ ಮಾಲೂರು ಪಟ್ಟಣ್ಣದ ಸಮಗ್ರ ಅಭಿವೃದ್ದಿಯ ದೆಸೆಯಲ್ಲಿ ಹೆಜ್ಜೆ ಹಾಕಲಿದ್ದೇವೆ ಎಂದಿದ್ದಾರೆ.
ನಾಮಿನಿ ಸದಸ್ಯರಾಗಿ ನೇಮಕಗೊಂಡಿರುವ ಬಿ.ಜೆ.ಪಿಯ ನಿಷ್ಟಾವಂತ ಕಾರ್ಯಕರ್ತರು, ಸದಾ ಪಕ್ಷ ನಿಷ್ಠೆ ಮೂಲಕ ಸೇವೆ ಸಲ್ಲಿಸುತ್ತಿದ್ದ ಎಂ.ಗೋಪಾಲ್ ರವರು ಮಾತನಾಡುತ್ತಾ ” ಪಕ್ಷದಲ್ಲಿ ಅವರು ನೀಡಿದ ಕಾರ್ಯಗಳನ್ನು ನಿಷ್ಠೆಯಿಂದ ನಾವು ಮಾಡುವ ಮೂಲಕ ಪಕ್ಷದ ಅಭಿವೃದ್ದಿಗೆ ಶ್ರಮಿಸಿದ್ದೀವಿ, ನಮ್ಮ ಪ್ರಮಾಣಿಕ ಕಾರ್ಯವನ್ನು ಗುರ್ತಿಸಿ ನಮಗೆ ಸೂಕ್ತ ಸ್ಥಾನವನ್ನು ನೀಡುವ ಮೂಲಕ ಹಾರೈಸುತ್ತಿರುವ ಎಲ್ಲಾ ಬಿ.ಜೆ.ಪಿ ಪಕ್ಷದ ಮುಖಂಡರುಗಳಿಗೆ, ಮುಖ್ಯಮಂತ್ರಿಗಳಿಗೆ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಂಸದ ಮುನಿಶ್ವಾಮಿ, ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ಪುರ ನಾರಾಯಣಸ್ವಾಮಿ, ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಮಾಜಿ ಶಾಸಕ ಎ.ನಾಗರಾಜ್, ಸಮಾಜ ಸೇವಕ ಹೂಡಿ ವಿಜಯ್ ಕುಮಾರ್, ಆರ್, ಪ್ರಭಾಕರ್, ಹಾಗೂ ಸಮಸ್ತ ಬಿ.ಜೆ.ಪಿ ಪಕ್ಷದ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುವೆವು” ಎಂದರು.
ಈ ಸಮಯದಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾದ ಎಂ.ರಾಮಮೂರ್ತಿ, ಬಿ.ಜೆ.ಪಿ ಯುವ ಮೋರ್ಚಾದ ವೆಂಕಟೇಶ್, ಶಶಿ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.