ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು-ಹೊಸಕೋಟೆ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ಬಾರಿ ಪ್ರಮಾಣದ ಲಾರಿಗಳ ಸಂಖ್ಯೆ, ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಂಚರಿಸುವ ಖಾಸಗಿ ಹಾಗೂ ಸರ್ಕಾರಿ ಬಸ್ಸ್ ಗಳ ಸಂಖ್ಯೆ, ಅನೇಕ ಕೈಗಾರಿಗಳಿಗೆ ಓಡಾಡುವ ವಾಹನಗಳು,ರೈತರು, ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ಅಧಿಕವಾಗಿ ಸಂಚರಿಸುವ ಪ್ರಮುಖ ಮಾಲೂರು ಮಾರ್ಗದ ಹೊಸಕೋಟೆ ರಸ್ತೆ ಆಗಿದೆ.
ಈ ರಸ್ತೆ ದುರಸ್ಥಿ ಆಗಿ ಸುಸಜ್ಜಿತವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಉದ್ಘಾಟನಾ ಭಾಗ್ಯ ಕಂಡರು ಸಹ, ಕೆಲವೇ ವರ್ಷಗಳಲ್ಲಿ ಈ ರಸ್ತೆ ಅಲ್ಲಲ್ಲಿ ಹಳ್ಳ-ಕೊಳ್ಳಗಳಿಂದ ಕೂಡಿದ್ದು ಅನೇಕ ಜನರ ಸಾವಿಗೆ ಕೈ ಬೀಸಿ ಕರೆಯುವ ಹಾಗೆ ಗುಂಡಿಗಳು ಬಾಯ್ದೆರೆದು ನಿಂತಿವೆ. ಈ ಗುಂಡಿಗಳಿಂದ ಅನೇಕ ಮಂದಿ ಬಿದ್ದು ಕೈ ಕಾಲು ಮುರಿದು ಆಸ್ಪತ್ರೆ ಸೇರುವ ಮೂಲಕ ಹಿಡಿಶಾಪ ಹಾಕುತ್ತಿದ್ದಾರೆ. ಮಳೆ ಬಂದಾಗ ಈ ಗುಂಡಿಗಳು ಕಾಣಿಸದೇ ಇರುವಾಗ ಅನೇಕ ಮಂದಿ ಹಳ್ಳದಲ್ಲಿ ಬಿದ್ದು ಗಾಯ ಮಾಡಿಕೊಂಡಿರುವ ನಿದರ್ಶನಗಳು ಇವೆ.
ಈ ಬಗ್ಗೆ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಸಂಚಾಲಕರು ಹಾಗೂ ಕನ್ನಡ ಹೋರಾಟಗಾರರಾದ ದೊಡ್ಡಕಲ್ಲಹಳ್ಳಿ ಮಂಜುನಾಥ್ ರವರು ಮಾತನಾಡುತ್ತಾ “ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪದಲ್ಲಿರುವ ಮಾಲೂರು ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ತಾಲ್ಲೂಕು, ಈ ಮಾಲೂರಿನಿಂದ ಹೊಸಕೋಟೆ ಮಾರ್ಗವಾಗಿ ಸಂಚರಿಸುವ ಪ್ರಮುಖ ರಸ್ತೆ, ಅತಿ ಹೆಚ್ಚು ಹಳ್ಳಕೊಳ್ಳಗಳಿಂದ ಕೂಡುವ ಮೂಲಕ ಅನೇಕ ರೀತಿಯ ದೊಡ್ಡ ಮಟ್ಟದ ಅಪಘೌತಗಳಾಗುವ ಮೂಲಕ ಜನರ ಜೀವಕ್ಕೆ ಆಪತ್ತು ಬಂದು ಎರಗಿದೆ. ಈ ರೀತಿಯ ಹಳ್ಳಬಿದ್ದಿರುವ ಗುಂಡಿಗಳಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಥವಾ ತಾಲ್ಲೂಕಿನ ಶಾಸಕರು ಈ ಕೂಡಲೇ ತಾವು ತಮ್ಮ ಗಮನವನ್ನು ಇತ್ತ ಹರಿಸುವ ಮೂಲಕ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ, ಜನರ ಜೀವ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡುತ್ತಿದ್ದೇವೆ” ಎಂದು ಹೇಳುತ್ತಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.