(www.vknews.in) : ರಾಜ್ಯ ಮುಸ್ಲಿಂ ಮುಖ್ಯ ಧರ್ಮ ಗುರುಗಳಾದ ಅಮೀರೆ ಶರೀಅತ್ ಸಗೀರ್ ಅಹ್ಮದ್ ರಷಾದಿಯವರು, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಸದಸ್ಯರಾದ ಮೌಲಾನಾ ಸಯೀದ್ ಮುಸ್ತಫಾ ರಿಫಾಯೀ ,ಬೆಂಗಳೂರು ಜಾಮಿಯಾ ಮಸೀದಿ ಖತೀಬರಾದ ಮೌಲಾನಾ ಮಕ್ಸೂದ್ ಇಮ್ರಾನ್ ರಷಾದಿ, ಶಿಯಾ ಜಮಾಅತ್ ಇಮಾಂ ಮೌಲಾನಾ ಸಯೀದ್ ಇಬ್ರಾಹಿಂ, ಸುನ್ನೀ ಬಿಲಾಲ್ ಮಸೀದಿ ಇಮಾಂ ಮೌಲಾನಾ ಝುಲ್ಫಿಕಾರ್ ನೌರಿ, ಮಿಲ್ಲಿ ಕೌನ್ಸಿಲ್ ಕರ್ನಾಟಕದ ಅಧ್ಯಕ್ಷರಾದ ಮುಫ್ತಿ ಸಯ್ಯದ್ ಬಖಾರ್ ಅಹ್ಮದ್, ಅಹ್ಲೆ ಹದೀಸ್ ಮಸೀದಿ ಇಮಾಂ ಶೇಖ್ ಇಜಾಝ್ ನದ್ವಿ ,ಮೌಲಾನಾ ಮುಝಮ್ಮಿಲ್ ರಷಾದಿ ಸೇರಿದಂತೆ ಅನೇಕ ಮುಸ್ಲಿಂ ಧರ್ಮ ಗುರುಗಳು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹ್ಮದ್ ರವರ ಜೊತೆಗೆ ಮುಸ್ಲಿಂ ಸಮುದಾಯದ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿ, ಶುಭ ಕೋರಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಟಿ.ಎಂ ಶಹೀದ್ ತೆಕ್ಕಿಲ್, ಮಿಲ್ಲಿ ಕೌನ್ಸಿಲ್ ನ ಶಾಹಿದ್, ಕೆಪಿಸಿಸಿ ಮಾಧ್ಯಮ ವಕ್ತಾರರಾದ ಚಾಂದ್ ಪಾಷಾ, ಶಬ್ಬೀರ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.