ಉಡುಪಿ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕೋವಿಡ್- 19 ನಿಮಿತ್ತ ಉಡುಪಿ ಜಿಲ್ಲೆಯ ಕ್ಷೌರಿಕ ವೃತ್ತಿ ನಿರತರಿಗೆ ಕೊಡಮಾಡಿದ ಸುಮಾರು 1800 ಆಹಾರ ಸಾಮಗ್ರಿ ಕಿಟ್ ಗಳ ವಿತರಣಾ ಸಮಾರಂಭ ಜಿಲ್ಲಾ ಸವಿತಾ ಸಮಾಜದ ಸಹಭಾಗಿತ್ವದಲ್ಲಿ ಸವಿತಾ ಸಮಾಜ ಸಮುದಾಯ ಭವನದಲ್ಲಿ ಉಡುಪಿಯಲ್ಲಿ ನಡೆಯಿತು.
ಶಾಸಕರಾದ ರಘುಪತಿ ಭಟ್ ಹಾಗೂ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರ ಸಹಕಾರದಿಂದ ಜರಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವಿಶ್ವನಾಥ್ ಭಂಡಾರಿ ನಿಂಜೂರು ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಗೌರವಾನ್ವಿತ ಶ್ರೀಮತಿ ಶರ್ಮಿಳಾ ಎಸ್. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಎಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ಜಿಲ್ಲೆ ಮತ್ತು ಕುಮಾರ್ ಬಿ ಆರ್ ಜಿಲ್ಲಾ ಕಾರ್ಮಿಕ ಅಧಿಕಾರಿ ಉಡುಪಿ ಜಿಲ್ಲೆ ಸಮಾರಂಭ ಉದ್ಘಾಟಿಸಿ ಸಾಂಕೇತಿಕವಾಗಿ ಆಹಾರ ಸಾಮಗ್ರಿ ಕಿಟ್ ಗಳನ್ನು ವಿತರಿಸಿದರು.
ನವೀನ್ ಚಂದ್ರ ಭಂಡಾರಿ ಅಧ್ಯಕ್ಷರು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ ) ಉಡುಪಿ, ಪ್ರವೀಣ್ ಕುಮಾರ್ ಕಾರ್ಮಿಕ ಉಪನಿರೀಕ್ಷಕರು ಕಾರ್ಮಿಕ ಇಲಾಖೆ, ಗೋವಿಂದ ಭಂಡಾರಿ ಗೌರವ ಅಧ್ಯಕ್ಷರು,, ಶೇಖರ್ ಸಾಲಿಯಾನ್ ಆದಿಉಡುಪಿ ಕೋಶಾಧಿಕಾರಿ ಜಿಲ್ಲಾ ಸವಿತಾ ಸಮಾಜ, ರಾಜು ಭಂಡಾರಿ ಕಿನ್ನಿಮೂಲ್ಕಿ ಅಧ್ಯಕ್ಷರು ಉಡುಪಿ ತಾಲೂಕು ಸಹಿತ ಸಮಾಜ, ನಾಗೇಶ್ ಭಂಡಾರಿ ಬಜಗೋಳಿ ಅಧ್ಯಕ್ಷರು ಕಾರ್ಕಳ ತಾಲೂಕು ಸವಿತಾ ಸಮಾಜ, ಶಿವರಾಮ್ ಭಂಡಾರಿ ಹಂದಾಡಿ ಅಧ್ಯಕ್ಷರು ಬ್ರಹ್ಮಾವರ ತಾಲೂಕು ಸವಿತಾ ಸಮಾಜ, ವೇದಿಕೆಯಲ್ಲಿದ್ದರು.
ವಂದನಾ ರಾಜೇಶ್ ಪ್ರಾರ್ಥಿಸಿದರು, ಸದಾಶಿವ ಬಂಗೇರ ಕುರ್ಕಾಲು ಪ್ರಧಾನ ಕಾರ್ಯದರ್ಶಿ ಉಡುಪಿ ಜಿಲ್ಲಾ ಸವಿತಾ ಸಮಾಜ ಸ್ವಾಗತಿಸಿದರು ಮಂಜುನಾಥ್ ಭಂಡಾರಿ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು ರಾಜು ಭಂಡಾರಿ ಕಿನ್ನಿಮುಲ್ಕಿ ಧನ್ಯವಾದ ಗೈದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.