ನೆಲ್ಲಿಯಹುದಿಕೇರಿ;(www.vknews.com) SKSSF ನೆಲ್ಲಿಯಹುದಿಕೇರಿ ಶಾಖೆಯ ವತಿಯಿಂದ ಸಿದ್ದಾಪುರ – ನೆಲ್ಲಿಯಹುದಿಕೇರಿ ರಾಜ್ಯ ಹೆದ್ದಾರಿಯಲ್ಲಿನ ಸೇತುವೆಯ ಇಕ್ಕೆಲಗಳಲ್ಲಿ ತುಂಬಿಕೊಂಡ ಕೆಸರು ಹಾಗೂ ಮರದ ಕೊಂಬೆಗಳನ್ನು ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಖಾಯ ಕಾರ್ಯಕರ್ತರು ಶುಚಿಗೊಳಿಸಿದರು.
ಕೋವಿಡ್ ವಾರಾಂತ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಳೀಯ ಆರಕ್ಷಕ ಠಾಣೆ ಹಾಗೂ ಪಂಚಾಯಿತಿ ವತಿಯಿಂದ ಅನುಮತಿ ಪಡೆದು ಶುಚೀಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೆಲ್ಲಿಯಹುದಿಕೇರಿ ಶಾಖಾಧ್ಯಕ್ಷರಾದ ಕೆ. ಮೊಯಿನುದ್ದೀನ್ ಅವರ ನೇತೃತ್ವದಲ್ಲಿ ಶುಚೀಕರಣ ಕಾರ್ಯಕ್ರಮ ನಡೆಯಿತು. ಶಾಖೆಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್, ಕೋಶಾಧಿಕಾರಿ ಜಂಶೀರ್ ಹಾಗೂ ವಿಖಾಯ ನೇತಾರರು, ಕಾರ್ಯಕರ್ತರು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.