(WWW.VKNEWS.COM) ಮಡಿಕೇರಿ, ಆಗಸ್ಟ್ 11: 75ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಸ್ನೇಹಧಾರ ಕನ್ನಡ ಮಾಸಿಕ ವತಿಯಿಂದ “ಜಾತ್ಯಾತೀತ ಭಾರತದಲ್ಲಿನ ನಿರೀಕ್ಷೆಗಳು” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಮುಕ್ತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಮೂರು ಪುಟಗಳು ಮೀರದಂತೆ ಕನ್ನಡ ಭಾಷೆಯಲ್ಲಿ ಸ್ಫುಟವಾಗಿ,ಚೊಕ್ಕಟವಾಗಿ ಬರೆದಿರಬೇಕು. ಸ್ಪರ್ಧೆಯಲ್ಲಿ ಯಾವುದೇ ವಯಸ್ಸಿನವರು ಭಾಗವಹಿಸಬಹುದು. ಹಾಗೆಯೇ ಪ್ರಬಂಧವು ಈ ಮೊದಲು ಯಾವುದೇ ಪತ್ರಿಕೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿರಬಾರದು ಎಂಬ ನಿಯಮವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ವಿಜೇತ ಸ್ಪರ್ಧಾಳುಗಳಿಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಅದರಂತೆಯೇ ಪ್ರಥಮ ಬಹುಮಾನ ಪಡೆದ ಲೇಖನವನ್ನು ಸ್ನೇಹಧಾರ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
ಪ್ರಬಂಧಗಳನ್ನು ಕಳುಹಿಸಬೇಕಾದ ಸಂಖ್ಯೆ +971523734021 ಹಾಗೂ ಕೊನೆಯ ದಿನಾಂಕ 25-08-2021 ಸಮಯ 06:00 ಗಂಟೆ ಆಗಿರುತ್ತದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.