ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಜನಪ್ರತಿನಿಧಿಗಳಿಗೆ ಇಂದು ನಮ್ಮಲ್ಲಿ ನೀಡುವ ಅಮಿತ ಗೌರವಾದರಗಳು ಮತ್ತು ಅದಕ್ಕೆ ಪೂರಕವಾಗಿರುವ ಹಲವು ನಿಯಮಗಳು ಪ್ರಜಾಪ್ರಭುತ್ವದಲ್ಲಿನ ಮೌಲ್ಯಗಳನ್ನು ಅಪಹಾಸ್ಯಕ್ಕೀಡು ಮಾಡುವಂತಹಷ್ಟರ ಮಟ್ಟಿಗೆ ಬೆಳೆದಿದ್ದು, ಅಷ್ಟೊಂದು ಅನಗತ್ಯ ರಿವಾಜುಗಳನ್ನು ಮೊಟಕುಗೊಳಿಸಲು ಮುಂದಾಗಿರುವ ನಮ್ಮ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಯವರ ನಿಲುವು ನಿಜಕ್ಕೂ ಅಭಿನಂದನಾರ್ಹವಾಗಿದ್ದು, ಇಷ್ಟೊಂದು ಅನಪೇಕ್ಷಣೀಯತೆ ಗಳೊಲ್ಲೊಂದಾಗಿರುವ ಗಾರ್ಡ್ ಆಪ್ ಹಾನರ್ ಬೇಡ ಎನ್ನುವ ಸೂಚನೆಯನ್ನು ಪೊಲೀಸ್ ಇಲಾಖೆಗೆ ನೀಡುವ ಮೂಲಕ ಪ್ರಜಾಸತ್ತೆಯ ಗೌರವವನ್ನವರು ಎತ್ತಿಹಿಡಿದಿದ್ದಾರೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ಎಸ್. ಎಮ್. ಮುತ್ತಲಿಬ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವರು.
ಅದೇ ರೀತಿಯಲ್ಲಿ ಸಾರ್ವಜನಿಕರಿಗೆ ಅಡ್ಡಿಪಡಿಸಿ ಝೀರೋ ಟ್ರಾಫಿಕ್ ಮಾಡಿಕೊಂಡು ರಾಜಕಾರಣಿಗಳು ಹೋಗುವುದರ ಬಗ್ಗೆಯೂ ರಾಜ್ಯದ ಗೃಹ ಸಚಿವರು ಇನ್ನು ಮುಂದೆ ಸಲ್ಲದು ಎಂದು ಹೇಳಿರುವುದು ಗಮನಾರ್ಹವಾಗಿದ್ದು, ಹೀಗೆ ರಾಜ್ಯದ ಖಜಾನೆಗೆ ಆಗುವ ಪ್ರತಿಯೊಂದು ಅನಗತ್ಯ ವೆಚ್ಚಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಮಯ ಪೋಲು ಮಾಡುವುದನ್ನು ನಿವಾರಿಸಿದಲ್ಲಿ ಪ್ರಜಾಪ್ರಭುತ್ವದ ನೀತಿಗೆ ಮಹತ್ವ ಕಲ್ಪಿಸಿ ಕೊಟ್ಟಂತಾಗುತ್ತದೆ. ಮಾತ್ರವಲ್ಲದೆ ಜನನಾಯಕರುಗಳಿಗೆ ಸ್ವಾಗತ ನೀಡುವ ನೆಪದಲ್ಲಿ ವ್ಯರ್ಥಗೊಳಿಸುವ ಹೂವು, ಹಾರ ತುರಾಯಿಗಳನ್ನು ಕೂಡಾ ಕಡಿತಗೊಳಿಸುವಂತೆ ಸನ್ಮಾನ್ಯ ಮುಖ್ಯಮಂತ್ರಿಯವರು ಸಲಹೆ ನೀಡಿದ್ದು ಬಹಳ ಪ್ರಶಂಸನಾರ್ಹವಾಗಿದೆಯೆಂದವರು ಇದೇ ಸಂದರ್ಭದಲ್ಲಿ ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.