ಸಿರುಗುಪ್ಪ (www.vknews.in): ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಆಶ್ರಯದಲ್ಲಿ “75” ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಗೋಪಿ ಬ್ಲಡ್ ಬ್ಯಾಂಕ್ ಸಹಭಾಗಿತ್ವದಲ್ಲಿ ಸಿರುಗುಪ್ಪ ದಲ್ಲಿ ನಡೆಸಿದ ಯಶಸ್ವೀ ರಕ್ತದಾನ ಶಿಬಿರ..
“75” ನೇ ಸ್ವಾತಂತ್ರ್ಯದ ಅಮ್ರತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಾದ್ಯಂತ 75 ಕಡೆಗಳಲ್ಲಿ ರಾಜ್ಯದ ಹಲವಾರು ಆಸ್ಪತ್ರೆಗಳ ರಕ್ತನಿಧಿಗಳ ಸಹಕಾರದಿಂದ ಆಯೋಜಿಸಿದ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರದ ಮುಂದುವರಿದ ಭಾಗವಾಗಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಿರುಗುಪ್ಪ ಬಳ್ಳಾರಿ ಜಿಲ್ಲೆ ಇದರ ಆಶ್ರಯದಲ್ಲಿ ಗೋಪಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಯಶಸ್ವಿ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 15/08/2021 ರ ಆದಿತ್ಯವಾರ ಬೆಳಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 2 :00 ರ ತನಕ ಜಿಲ್ಲೆಯ ಸಿರುಗುಪ್ಪ ದಲ್ಲಿ ಯಶಸ್ವಿಯಾಗಿ ನಡೆಯಿತು ಒಟ್ಟು 143 ಯೂನಿಟ್ ರಕ್ತ ನೀಡುವ ಮೂಲಕ ಶಿಬಿರ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ ಸಮೀವುಲ್ಲಾ, ಜನಾಬ್ ಅಬ್ದುಲ್ ರಜಾಖ್ ಖಾದ್ರಿ ಖಾಜಿ ಸಿರುಗುಪ್ಪ,ಮೌಲಾನಾ ಮುಫ್ತಿ ಅಬ್ದುಲ್ ಖಾದಿರ್ ಸಾಬ್, ಪರಮ ಪೂಜ್ಯ ಶ್ರೀ ಬಸವ ಭೂಷಣ ಸ್ವಾಮಿ, ಫಾದರ್ ಜೆ.ಸಿ. ಪೌಲ್ , ಜನಾಬ್ ಹಜ್ರತ್ ಸೈಯದ್ ಹಸನ್ ಬಸ್ರಿ ಖಾದ್ರಿ ಸಾಹೇಬ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಿರುಗುಪ್ಪ ಗೌರವಾಧ್ಯಕ್ಷ ಚಿಟ್ಕಿ ಹುಸೇನ್ ಬಾಷ , ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್ ಸಮಿತಿ ಅಧ್ಯಕ್ಷ ಹಂಡಿ ಹಾಶಿಮ್ ಹಾಗೂ ಮುಂತಾದ ಗಣ್ಯರು ಭಾಗವಹಿಸಿದ್ದರು. ರಕ್ತ ದಾನ ಮಾಡಿದ ಸಹೃದಯೀ ದಾನಿಗಳಿಗೂ,ಗೋಪಿ ಬ್ಲಡ್ ಬ್ಯಾಂಕ್ ಸಿಬ್ಬಂಧಿಗಳಿಗೂ,ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಿರುಗುಪ್ಪ, ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.