ಲಕ್ಕೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಪುರ ಗ್ರಾಮದ ಡಾ||ಬಿ.ಆರ್.ಅಂಬೇಡ್ಕರ್ ಯುವಕರ ಸಂಘ (ರಿ) ಪುರ, ಇವರ ವತಿಯಿಂದ 2020-21ನೇ ಸಾಲಿನ SSLC ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕುಮಾರಿ ವರ್ಷಿಣಿ.ವಿ ರವರನ್ನು ಹಾಗೂ ಅತ ಹೆಚ್ಚು ಅಂಕಗಳನ್ನು ಪಡೆದ ಕುಮಾರಿ ಶ್ರಾವಣಿ.ಆರ್ ಮತ್ತು ಮಧುಶ್ರಿ.ಆರ್ ರವರನ್ನು “75ನೇ ಸ್ವಾತಂತ್ರ ದಿನಾಚರಣೆ” ಅಂಗವಾಗಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರಮೇಶ್ ರವರು ಮಾತನಾಡಿ “ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆ ಭವಿಷ್ಯದ ಪ್ರತಿಯೊಂದು ಮಗುವಿನ ಸಾಧನೆಗೆ ಸ್ಪೂರ್ತಿ, ಮಾಲೂರು ತಾಲ್ಲೂಕಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ವರ್ಷೀಣಿ.ವಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಂಬುದು ಬಹಳ ಪ್ರಮುಖ, ಈ ವಿದ್ಯಾರ್ಥಿಯ ಸಾಧನೆ ಗುರ್ತಿಸಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಅಭಿನಂದಿಸುತ್ತಿರುವುದು ಸಂತಸ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷರಾದ ಕೆ.ಮುರಳಿ ರವರು ಮಾತನಾಡಿ “ನಮ್ಮೂರಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ಮಟ್ಟದ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿ ಆಗಿರುವುದು ನಿಜಕ್ಕೂ ನಮ್ಮೂರಿಗೆ ಬಂದ ಸೌಭಾಗ್ಯವೇ ಸರಿ, ಈ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನಮ್ಮಿಂದಾಗುವ ಸಹಕಾರ ಸದಾ ನಾವು ನೀಡಲು ಸಿದ್ದ, ಇವರನ್ನು ಸನ್ಮಾನಿಸಿ ಹಾರೈಸುತ್ತಿರುವುದು ನಿಜಕ್ಕೂ ಹೆಮ್ಮೆ” ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ ವರ್ಷಿಣಿ.ವಿ, ಶ್ರಾವಣಿ, ಹಾಗೂ ಮಧುಶ್ರೀ, ಆರ್. ರವರಿಗೆ ಅಭಿನಂದನೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಮುರಳಿ,ಸ||ಕಿ||ಪ್ರಾ|| ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್, ಸಂಘದ ಪದಾಧಿಕಾರಿಗಳಾದ ದೇವೇಂದ್ರ, ಸುರೇಶ್ ಬಾಬು, ಶ್ರೀನಾಥ್, ಅನಿಲ್, ಚಂದ್ರಶೇಖರ್, ಶಿವು, ಪುನೀತ್, ನಾಗೇಶ್ ಬಾಬು, ಮಧು, ಮಂಜುನಾಥ್, ವೆಂಕಟೇಶ್, ಪ್ರದೀಪ್, ಹರೀಶ್, ವಿಜಯ ಭಾಸ್ಕರ್, ಶ್ರೀನಿವಾಸ್, ಹಾಗೂ ಇತರೆ ಸದಸ್ಯರು ಮತ್ತು ಪೋಷಕರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.