ಕುಶಾಲನಗರ(www.vknews.in): ಎಸ್.ವೈ.ಎಸ್ ಕೊಡಗು ಜಿಲ್ಲಾ ಸಮಿತಿಯ ಅಂಗ ಸಂಸ್ಥೆಯಾದ ಆಮಿಲ ತುರ್ತು ಸೇವಾ ತಂಡದ ಕುಶಾಲನಗರ ವಲಯ ಸಮಿತಿಯ ವತಿಯಿಂದ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಆವರಣವನ್ನು ಸಂಪೂರ್ಣವಾಗಿ ಶುಚಿಗೊಳಿಸುವ ಕಾರ್ಯಕ್ರಮ ಮಂಗಳವಾರದಂದು ನಡೆಯಿತು. ನಲವತ್ತಕ್ಕಿಂತ ಅಧಿಕ ಸದಸ್ಯರನ್ನೊಳಗೊಂಡ ಕುಶಾಲನಗರ ವಲಯ ಆಮಿಲ ತಂಡವು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಾ ಬರುತ್ತಿದ್ದು, ಇನ್ನೂ ಹಲವಾರು ಯೋಜನೆಗಳನ್ನು ಸಹ ಹಮ್ಮಿಕೊಂಡಿದೆ.
ಸರ್ಕಾರಿ ಆಸ್ಪತ್ರೆಯ ಆವರಣ ಶುಚೀಕರಣಕ್ಕೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾಕ್ಟರ್ ಮಧುಸೂದನ್ ರವರು ಸಲಹೆ ಸೂಚನೆಗಳನ್ನು ನೀಡಿದರು. ಹಾಗೆಯೇ ತಂಡದ ಸರ್ವ ಸದಸ್ಯರನ್ನೂ ಸಹ ಅಭಿನಂದಿಸಿದರು. ಶ್ರಮದಾನದ ನಂತರ ಕೊಡಗು ಜಿಲ್ಲಾ ಎಸ್.ವೈ.ಎಸ್ ಸಮಿತಿಯ ವತಿಯಿಂದ ಒಂದು ಬಡ ಹೆಣ್ಣು ಮಗಳ ವಿವಾಹಕ್ಕಾಗಿ 25000/- ರೂಪಾಯಿ ಧನಸಹಾಯವನ್ನು ಎಸ್.ವೈ.ಎಸ್ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಬಶೀರ್ ಹಾಜಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕುಶಾಲನಗರ ವಲಯ ಆಮಿಲ ತಂಡದ ನಾಯಕರಾದ ಸಿ.ಎಂ ಹಮೀದ್ ಮುಸ್ಲಿಯಾರ್, ಕೊಡಗು ಜಿಲ್ಲಾ ಎಸ್ ವೈ ಎಸ್ ಸಮಿತಿಯ ಅಧ್ಯಕ್ಷರಾದ ಬಶೀರ್ ಹಾಜಿ, ವೈ ಎಂ ಉಮರ್ ಫೈಝಿ, ಕುಶಾಲನಗರ ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಇನ್ನಿತರ ಜಿಲ್ಲಾ ಹಾಗೂ ವಲಯ ಸಮಿತಿಯ ನಾಯಕರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.