ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಚ್ಚೊಕ್ಕಂಡಹಳ್ಳಿ ಗ್ರಾಮದ ತೇಜಸ್ ಬ್ಯೂಟಿ ಪಾರ್ಲರ್ ಮಾಲೀಕರಾದ ನಂದಕುಮಾರ್ ಹಾಗೂ ಶ್ರೀಮತಿ ಸುಮ ರವರ ಪುತ್ರನಾದ ದೆಶ್ವಂತ್.ಎನ್ ರವರು ಎಸ್.ಎಲ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸ್ಪೂರ್ತಿ ಆಗಿದ್ದಾನೆ.
ಮಾಲೂರು ತಾಲ್ಲೂಕಿನ ಉಜ್ವಲ ವಿದ್ಯಾಮಂದಿರದಲ್ಲಿ ವಿದ್ಯಾಭ್ಯಾಸ ಮಾಡಿದ ಹಳ್ಳಿ ಹುಡುಗ ಎಸ್.ಎಸ್.ಎಲ್.ಸಿ ಯಲ್ಲಿ ಅಧಿಕ ಅಂಕ ಪಡೆದು ಇತರೆ ಮಕ್ಕಳಿಗೆ ಸ್ಪೂರ್ತಿ ಆಗಿದ್ದಾನೆ.
ದೆಶ್ವಂತ್ ರವರ ತಂದೆ ನಂದಕುಮಾರ್ ರವರು ಮಾತನಾಡಿ “ನಮ್ಮ ಮಗುವಿನ ಶಿಕ್ಷಣದಲ್ಲಿನ ಪ್ರಗತಿ, ಗ್ರಾಮೀಣ ಪ್ರದೇಶದಲ್ಲಿನ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಲಿ” ಎಂದು ಹಾರೈಸಿದರು.
ತಾಯಿ ಶ್ರೀಮತಿ ಸುಮ ರವರು ಮಾತನಾಡಿ ” ನಮ್ಮ ಮಗ ಎಸ್.ಎಲ್.ಎಲ್.ಸಿ ಪರೀಕ್ಷೆಯಲ್ಲಿನ ಉತ್ತಮ ಸಾಧನೆ ಹಾಗೂ ವಿದ್ಯಾಭ್ಯಾಸ ನಮಗೆ ಬಹಳ ಗೌರವ ತಂದಿದೆ. ಉಜ್ವಲ ವಿದ್ಯಾಮಂದಿರದಲ್ಲಿನ ಎಲ್ಲಾ ಶಿಕ್ಷಕ ವರ್ಗದ ಉತ್ತಮ ಭೋದನೆ ನಮ್ಮ ಮಗನ ಸಾಧನೆಗೆ ಶಕ್ತಿಯಾಗಿದೆ” ಎಂದರು.
ಉಜ್ವಲ ವಿದ್ಯಾಮಂದಿರದ ಸಂಸ್ಥಾಪಕರಾದ ತ.ರಾ.ವೆಂಕಟೇಶ್ ರವರು “ನಮ್ಮ ಶಾಲೆಯ ಮಗುವಿನ ಉತ್ತಮ ಅಂಕ ಪಡೆದು ಸಾಧನೆ ಮಾಡಿರುವುದು ಗ್ರಾಮೀಣ ಪ್ರದೇಶದಲ್ಲಿ ಬಹಳ ಹೆಮ್ಮೆ, ಇದು ಎಲ್ಲಾರಿಗೂ ಮಾದರಿ” ಎಂದರು.
ಈ ಸಂದರ್ಭದಲ್ಲಿ ದೆಶ್ವಂತ್ ತಾತಾ ಜಿ.ವಿ.ವೆಂಕಟೇಶಪ್ಪ, ತಂದೆ ನಂದಕುಮಾರ್, ತಾಯಿ ಸುಮ, ತೇಜಸ್, ಸಂತೋಷ್, ಪ್ರಸನ್ನ ಕುಮಾರ್, ದೀಪು, ಶಿಕ್ಷಕರಾದ ಶಶಿ, ವೆಂಕಟೇಶ್, ಮಂಜುನಾಥ್ ಇತರರು ಶುಭ ಹಾರೈಸಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.