ಬೆಂಗಳೂರು (www.vknews in): ವೈವಾಹಿಕ ಜೀವನ ಸಮೂಹದ ಅಡಿಪಾಯವಾಗಿದೆ ಎಂದು ಸಮಸ್ತ ಕೇರಳ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಆಲಿಕುಟ್ಟಿ ಮುಸ್ಲಿಯಾರ್ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯಮಾನಿಟಿ ಸಮುಚ್ಚಯದಲ್ಲಿ ನಡೆಯುತ್ತಿರುವ ಹತ್ತು ದಿನ ಸಾಮೂಹಿಕ ವಿವಾಹ ಕಾರ್ಯಕ್ರಮದ ಮೊದಲನೇಯ ದಿನ ಭಾಗವಹಿಸಿ ಮಾತನಾಡಿದರು.
ಎಲ್ಲಾ ನವದಂಪತಿಗಳು ಮುಂದಿನ ತಲೆಮಾರುಗಳಿಗೆ ಮಾದರಿಯಾಗಬೇಕಾಗಿದೆ. ಸುಭದ್ರವಾದ ಕುಟುಂಬ ಸಂಬಂಧದಿಂದ ಮಾತ್ರ ಒಳ್ಳೆಯ ದೇಶವನ್ನು ಕಟ್ಟಬಹುದಾಗಿದೆ ಎಂದು ನವ ದಂಪತಿಗಳಿಗೆ ಶುಭ ಹಾರೈಸಿದರು.
ಈ ಒಂದು ಕೊರೋನಾ ಸಮಯದಲ್ಲೂ ಎಐಕೆಎಂಸಿಸಿ ಬೆಂಗಳೂರು ನಡೆಸುತ್ತಿರುವ ಇಂತಹಾ ಕಾರ್ಯಗಳು ಶ್ಲಾಘನೀಯ ಎಂದ ಅವರು, ಕೇರಳ ಸಮುದಾಯದ ಐಕ್ಯತೆಯನ್ನು ಹಾಗೂ ಸೌಹಾರ್ದತೆಯನ್ನು ಇತರ ಊರುಗಳಿಗೆ ಪ್ರಚಾರಪಡಿಸುವುದರಲ್ಲಿ ಎಐಕೆಎಂಸಿಸಿಯ ಒಳ್ಳೆಯ ನಡೆಯಾಗಿದೆ ಎಂದು ಶ್ಲಾಘಿಸಿದರು. ಯಾವ ಜೀವನ ಪರಿಸರದಲ್ಲಾದರೂ ಧಾರ್ಮಿಕ ಮೌಲ್ಯವನ್ನು ಗಟ್ಟಿ ಹಿಡಿದು ನವದಂಪತಿಗಳಿಗೆ ಜೀವಿಸಲು ಸಾಧ್ಯವಾಗಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಾಸಕ ರಾಮಲಿಂಗಾರೆಡ್ಡಿ ಭಾಗವಹಿಸಿದರು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇಂದ್ರ ಸಮಿತಿ ಕಾರ್ಯದರ್ಶಿ ಇಬ್ರಾಹಿಂ ಸೇಠ್ ಮುಖ್ಯ ಭಾಷಣ ಮಾಡಿದರು. ಪ್ರಸಾರ ಭಾರತಿ ಬೆಂಗಳೂರು ಸ್ಟೇಷನ್ ಅಸಿಸ್ಟೆಂಟ್ ಡೈರೆಕ್ಟರ್ ಶಾಹಿದ್ ತಿರುವಲ್ಲೂರ್, ಸಿ ಕರೀಂ ಸದಕತುಲ್ಲಾ ಮಾತನಾಡಿದರು. ವಿವಾಹ ಕಾರ್ಯಕ್ರಮಕ್ಕೆ ಮೌಲಾನಾ ಅಶ್ರಫ್ ಅಲಿ ಹಾಜೀಬಾ ನೇತೃತ್ವ ವಹಿಸಿದರು. ಮಸ್ಜಿದ್ ಇಮಾಂ ಮೌಲಾನಾ ಮುಫ್ತಿ ಇರ್ಶಾದ್ ಅಹಮ್ಮದ್ ನಿಕಾಹ್ ಕಾರ್ಯಗಳಿಗೆ ನೇತೃತ್ವವಹಿಸಿದರು.
ಜಯನಗರ ಗೌರಿಪಾಲ್ಯ ಶಾಖೆಯ ಕಾರ್ಯಕರ್ತರು ಸ್ವಯಂಸೇವಕರಾಗಿ ಸಹಕರಿಸಿದರು. ಎಐಕೆಎಂಸಿಸಿ ಬೆಂಗಳೂರು ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ. ಉಸ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ. ಕೆ ನೌಶಾದ್ ಸ್ವಾಗತ ಭಾಷಣ ಮಾಡಿದರು. ಕಾರ್ಯದರ್ಶಿ ಡಾ|| ಅಮೀರಲಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.