ಕಟ್ಟತ್ತಾರು(ವಿಶ್ವಕನ್ನಡಿಗ ನ್ಯೂಸ್): ಎಸ್ ಎಸ್ ಎಫ್ ಕಟ್ಟತ್ತಾರು ಇದರ ರೈನ್ ಬೋ ಟೀಂ ರಚನೆ ಕಾರ್ಯಕ್ರಮವು ಇತ್ತೀಚೆಗೆ ನಿಡ್ಯಾಣದಲ್ಲಿ ನಡೆಯಿತು. ಕಟ್ಟತ್ತಾರು ಎಸ್ ವೈ ಎಸ್ ಅಧ್ಯಕ್ಷ ಅಬೂಬಕರ್ ನಂಜೆ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶರೀಫ್ ಕಟ್ಟತ್ತಾರು ಸ್ವಾಗತಿಸಿದರು. ಜಾಮಿಯ ಮರ್ಕಝ್ ವಿದ್ಯಾರ್ಥಿ ಅನೀಸ್ ನಿಡ್ಯಾಣ ಉದ್ಘಾಟಿಸಿದರು.
ಕರೀಂ ಸಖಾಫಿ ಕಟ್ಟತ್ತಾರು ರೈಂಬೋ ವಿದ್ಯಾರ್ಥಿಗಳಿಗೆ ತರಗತಿ ನಡೆಸಿ ಕೊಟ್ಟರು. ಎಸ್ ಎಸ್ ಎಫ್ ಕುಂಬ್ರ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಅನಸ್ ನೇರೊಲ್ತಡ್ಕ, ನಾಸಿರ್ ಸಖಾಫಿ,ಇಲ್ಯಾಸ್ ಕಟ್ಟತ್ತಾರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ರೈಂಬೋ ಕಾರ್ಯದರ್ಶಿಯಾಗಿ ಶರೀಫ್ ಕಟ್ಟತ್ತಾರು ಚಯರ್ಮೇನ್ ಆಗಿ ಝಮೀಲ್ ಕೆ ಪಿ ,ಕನ್ವೀನರ್ ಆಗಿ ಇಬ್ರಾಹಿಂ ಶಾಹಿದ್, ಉಪ ಚಯರ್ಮೇನ್ಗಳಾಗಿ ಫರಾಝ್, ಮುಹಮ್ಮದ್ ಶರೀಕ್ ,ಉಪ ಕನ್ವೀನರಾಗಿ ಮುಹಮ್ಮದ್ ಶೈಬಾನ್,ಮುಹಮ್ಮದ್ ಶಫೀಕ್ ಎಂಬುವರನ್ನು ಆರಿಸಲಾಯಿತು.
ಚಿತ್ರ ಕಲಾ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಎಸ್ ವೈ ಎಸ್ ನೇತಾರರಾದ ಅಹ್ಮದ್ ಹಾಜಿ,ಅಬೂಬಕರ್ ನಿಡ್ಯಾಣ,ರಫೀಕ್ ನಿಡ್ಯಾಣ, ಎಸ್ ಎಸ್ ಎಫ್ ಕಟ್ಟತ್ತಾರು ಕಾರ್ಯದರ್ಶಿ ಸಹದ್ ಕಟ್ಟತ್ತಾರು,ಕೋಶಾಧಿಕಾರಿ ಮುಸ್ತಫ ಕೆ ಎಂ, ಎಸ್ ಎಸ್ ಎಫ್ ಜಿ ಸಿ ಸಿ ನೇತಾರರಾದ ಅಝೀಝ್ ಕೆ ಎಂ, ಶಾಕಿರ್ ಎನ್ ಹಾಗೂ ಇತರರು ಉಪಸ್ಥಿತರಿದ್ದರು. ಶರೀಫ್ ಕೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.