ಧಾರವಾಡ (ವಿಶ್ವ ಕನ್ನಡಿಗ ನ್ಯೂಸ್) : ತಹಶೀಲ್ದಾರ ಕಛೇರಿ ರಸ್ತೆಯಲ್ಲಿರುವ, ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಮೃತ ಮಹೋತ್ಸವ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಅಂಗವಾಗಿ ನಿವೃತ್ತ ವೀರಯೋಧರಿಗೆ ಸತ್ಕಾರ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಧ್ವಜಾರೋಹಣ ನಿವೃತ್ತ ಯೋದರಾದಂತಹ ಶ್ರೀ ಶಂಕ್ರಪ್ಪ ಸಂಶಿ, ಶ್ರೀ ಮಾರುತಿ ಚವ್ಹಾಣ, ಶ್ರೀ ಮಾತಾನಂದ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀಮತಿ ವೀಣಾ ಬಿರಾದಾರ ಅವರು ನೆರವೇರಿಸಿದರು. ನಂತರ ಮಾತನಾಡಿದ ಡಾ. ಶ್ರೀಮತಿ ವೀಣಾ ಬಿರಾದಾರ ಅವರು ಸ್ವಾತಂತ್ರ್ಯ ಹೋರಾಟ ನಡೆದು ಬಂದ ಹಾದಿಯನ್ನು ವಿವರಿಸಿ, ನಿಸ್ವಾರ್ಥದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯವರ,ನೇತಾಜಿ ಸುಭಾಸ್ ಚಂದ್ರ ಭೋಸ್, ವಲ್ಲಭಾಯಿ ಪಟೇಲ್, ಜವಾಹರಲಾಲ್ ನೆಹರು ಮುಂತಾದ ಮಹನೀಯರ ತ್ಯಾಗ ಬಲಿದಾನವನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳಸಿಕೊಂಡು, ದೇಶದ ಸತ್ಪ್ರಜೆಗಳಾಗಿ ರಾಷ್ಟ್ರದ ನವನಿರ್ಮಾಣದ ಕಾರ್ಯದಲ್ಲಿ ಕೈ ಜೋಡಿಸಬೇಕೆಂದು ಹಾಗೂ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವಿರತ ಪರಿಶ್ರಮ, ಸತತ ಪ್ರಯತ್ನ, ದೃಢ ನಿರ್ಧಾರ, ಸಮಯದ ಸದುಪಯೋಗ, ಒಳ್ಳೆಯ ಮನೋಭಾವ, ರಾಷ್ಟ್ರಪ್ರೇಮ ಹಾಗೂ ದೇಶಭಕ್ತಿ ಬೆಳಸಿಕೊಂಡು ದೇಶದ ಪ್ರಗತಿಗಾಗಿ ದುಡಿದು ಮಹಾವಿದ್ಯಾಲಯಕ್ಕೆ, ರಾಷ್ಟ್ರಕ್ಕೆ ಹಾಗೂ ಪಾಲಕರಿಗೆ ಗೌರವವನ್ನು ತರಬೇಕೆಂದು ನುಡಿದರು. ಹಾಗೂ ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧರಾದ ಶ್ರೀ ಶಂಕ್ರಪ್ಪ ಸಂಶಿ, ಮಾತನಾಡಿ ದೇಶದ ಬಗ್ಗೆ ತಾವುಗಳು ಸೈನಿಕರಾಗಿ ಸೇವೆಸಲ್ಲಿಸದ ತರಬೇತಿಯನ್ನು ನೆನಪಿಸಿಕೊಂಡು, ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಂತರ ಮಾತನಾಡಿದ ಶ್ರೀ ಮಾರುತಿ ಚವ್ಹಾಣ, ನಿವೃತ್ತ ಹವಾಲ್ದಾರರು, ಅವರು ಮಾತನಾಡಿ ದೇಶ ನಿಷ್ಠೆ, ಶಿಸ್ತು, ಹಿರಿಯರಿಗೆ ಗೌರವ ಕೊಡುವುದು ಹಾಗೂ ದೇಶಾಭಿಮಾನ ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು ಹಾಗೂ ತಮ್ಮ ಜೀವನ ಬಗ್ಗೆ ವಿವರಿಸಿದರು.
ಕೇಂದ್ರ ಕಾರಾಗೃಹದ ವೀಕ್ಷಕರಾದ ಶ್ರೀ ಮಾತಾನಂದ ಅವರು ಮಾತನಾಡಿ ಸೇನೆಯಲ್ಲಿ ಸಮಯ ಪ್ರಜ್ಞೆ ಹಾಗೂ ಜಮ್ಮು-ಕಾಶ್ಮೀರ ಇಂತಹ ತಂಪಾದ ಪ್ರದೇಶಗಳಲ್ಲಿ ಸೇವೆಸಲ್ಲಿಸುವ ಕಠಿಣ ಅನುಭವಗಳನ್ನು ಮತ್ತು ಪ್ರಸ್ತುತ ದಿನಮಾನಗಳಲ್ಲಿ ಅಪರಾದಗಳಿಗೆ ಯಾವ ರೀತಿಯ ಶಿಕ್ಷೆಗಳನ್ನು ನೀಡಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ನನ್ನ ಸೇವೆಯನ್ನು ಗುರುತಿಸಿ ಸತ್ಕಾರ ಮಾಡಿದ್ದಕ್ಕೆ ಶ್ರೀ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದರು.
ಶ್ರೀ ಕೊನೂರ ಸರ್ ಅವರು ಮಾತನಾಡಿ ದೇಶ ಹಾಗೂ ಸೈನಿಕರ ತ್ಯಾಗ ಬಲಿದಾನವನ್ನು ಜೈ ಜವಾನ್ ಜೈ ಕೀಸಾನ್ ಎಂದು ಘೋಷಣೆÉ ಕುಗೂವ ಮೂಲಕ ವಿದ್ಯಾರ್ಥಿಗಳಿಗೆ ದೇಶದ ಪ್ರತಿ ನಿಷ್ಠೆ ತ್ಯಾಗ ಮನೋಭಾವನೆ ಮನವರಿಕೆ ಮಾಡಿಕೊಟ್ಟರು.
ನಿವೃತ್ತ ವೀರಯೋಧರಾದಂತಹ ಸತ್ಕಾರ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳಲಾಗಿತ್ತು.
ಸತ್ಕರಿಸಿಕೊಂಡ ಯೋಧರು : ಶ್ರೀ ಶಂಕ್ರಪ್ಪ ಸಂಶಿ, ಶ್ರೀ ಮಾರುತಿ ಚವ್ಹಾಣ, ಹಾಗೂ ಶ್ರೀ ಮಾತಾನಂದ
ಕಾರ್ಯಕ್ರಮದಲ್ಲಿ ಡಾ. ಎಸ್, ಬಿ, ಗಾಡಿ ಹಾಗೂ ಪ್ರಾಚಾರ್ಯರಾದ ಶ್ರೀ ನಾಗರಾಜ ಶಿರೂರ, ಶ್ರೀ ಬಿ ವಿ ಮೊರಂಕರ್, ಶ್ರೀಮತಿ ಸುಧಾ ಹೀರೆಮಠ ಶ್ರೀ ನಿಕಿತ ಸರ್ ಶ್ರೀ ಕರೆಪ್ಪಾ ಮೇಟಿ, ಹಾಗೂ ವಿಜಯ ಹರಿಜನ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀ ಮೊರಂಕರ್À ಕಾರ್ಯಕ್ರಮ ನಿರೂಪಿಸಿದರು, ಶ್ರೀ ಎಸ್ ಎಮ್ ತಾರಿಹಾಳ ಸ್ವಾಗತಿಸಿದರು ಶ್ರೀ ಮೌನೇಶ್ವರ್ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.