ಕೋಲಾರ (ವಿಶ್ವಕನ್ನಡಿಗ ನ್ಯೂಸ್) : – ಕೋವಿಡ್ ಮುಕ್ತ ಶಾಲೆಗಾಗಿ ಪ್ರತಿ ವಿದ್ಯಾರ್ಥಿಯೂ ಮಾಸ್ಕ್ ಧರಿಸಿ , ಸಾಮಾಜಿಕ ಅಂತರ ಕಾಪಾಡಿ , ಸ್ವಚ್ಛತೆಗೆ ಒತ್ತು ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಕರೆ ನೀಡಿದರು. ತಾಲ್ಲೂಕಿನ ಅರಾಬಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಹೆಮಾರಿಯಾಗಿ ಪ್ರಪಂಚವನ್ನು ಕಾಡಿದೆ , ಮಕ್ಕಳು ಕಲಿಕೆಯಿಂದ ದೂರವಾಗಲೂ ಕಾರಣವಾಗಿದೆ . ಆನ್ಲೈನ್ ಕ್ಲಾಸ್ಗಳಿಂದ ಮಕ್ಕಳ ಕಲಿಕೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂಬ ಕಾರಣದಿಂದ ಇದೀಗ ಶಾಲೆಗಳ ಭೌತಿಕ ತರಗತಿ ತೆರೆಯಲಾಗಿದೆ ಎಂದರು. ಪ್ರೌಢಶಾಲೆಗಳ ೯ ಮತ್ತು ೧೦ ನೇ ತರಗತಿ ವಿದ್ಯಾರ್ಥಿಗಳು ಕೋಎಡ್ ಮಾರ್ಗಸೂಚಿಯಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಕೋಡ್ಗೆ ಸಡ್ಡು ಹೊಡೆದು ಕೋವಿಡ್. ಮುಕ ಶಾಲೆಯಾಗಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ೧ ರಿಂದ ೮ ನೇ ತರಗತಿ ಮಕ್ಕಳಿಗೂ ಧೈರ್ಯದಿಂದ ಶಾಲೆ ಆರಂಭಿಸಲು ಸಹಕಾರಿಯಾಗಲಿದೆ ಎಂದರು.
ಹೊಸ ಪಠ್ಯಪುಸ್ತಕಗಳ ಸರಬರಾಜಿಗೆ ಇಲಾಖೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತಿದೆ . ಅದುವರೆಗೂ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಪ್ರತಿ ಶಾಲೆಯಲ್ಲಿ ಬುಕ್ ಬ್ಯಾಂಕ್ ಮಾಡಿದ್ದು , ಹಳೆಯ ಪುಸ್ತಕಗಳನ್ನು ನೀಡಿ ಕಲಿಕೆ ಮುಂದುವರೆಸಲಾಗಿದೆ ಎಂದರು . ಆರಾಧಿ ಕೊತ್ತನೂರು ಪೌಢಶಾಲೆ ಜಿಲ್ಲೆಯಲ್ಲಿ ಮಾದರಿ ಶಾಲೆಗಳ ಪಟ್ಟಿಯಲ್ಲಿದೆ. ಇಲ್ಲಿನ ಕಂಪ್ಯೂಟರ್ ಲ್ಯಾಬ್ ವಿಜ್ಞಾನ ಪ್ರಯೋಗಾಲಯ, ಸುಂದರ ಪರಿಸರ ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಅಭಿನಂದಿಸಿದರು.
ಬಿಸಿನೀರು ಕುಡಿಯಲು ಮಕ್ಕಳಿಗೆ ಸಲಹೆ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಬಿಸಿನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ , ಮಕ್ಕಳು ಬಿಸಿನೀರನ್ನೇ ಕುಡಿಯಿರಿ , ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಿ , ಶೌಚಾಲಯ ಬಳಸಿದ ಮೇಲೆ ನೀರು ಹಾಕಿ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದರು. ಕೊವಿಡ್ನಿಂದಾಗಿ ಪರೀಕ್ಷೆ ಇಲ್ಲದೇ ಪಾಸಾಗಬಹುದು ಎಂಬ ಉದಾಸೀನತೆ ಬೇಡ , ಅಂತಹ ನಿರೀಕ್ಷೆ ಮಾಡದಿರಿ , ಈ ಬಾರಿ ಕೋವಿಡ್ ಹೆಮ್ಮಾರಿ ದೇಶದಿಂದ ತೊಲಗಲಿದ್ದು , ಶೈಕ್ಷಣಿಕ ಪ್ರಕ್ರಿಯೆಗಳಾದ ತರಗತಿ , ಪರೀಕ್ಷೆಗೆ ಯಾವುದೇ ಆತಂಕ ಇಲ್ಲವಾಗಲಿ ಎಂಬ ಆಶಯ ಹೊಂದಲಾಗಿದೆ ಎಂದು ತಿಳಿಸಿದರು.
ಶಾಲೆಗೆ ಅಗತ್ಯವಾದ ಆಟದ ಮೈದಾನ , ಬೆಟ್ಟದಿಂದ ಚೌಗು ನೀರು ತಡೆಯಲು ಕ್ರಮವಹಿಸಲು ಇದೇ ಸಂದರ್ಭದಲ್ಲಿ ಅರಾಬಿಕೊತ್ತನೂರು ಗ್ರಾಮ ಪಂಚಾಯಿತಿ ಪಿಡಿಒ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸೂಚಿಸಿದರು.
ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ , ಶಿಕ್ಷಕರಾದ ಸಚ್ಚಿದಾನಂದಮೂರ್ತಿ , ಭವಾನಿ , ಕೆ.ಲೀಲಾ , ಶ್ವೇತಾ , ಸುಗುಣ , ಫರೀದಾ , ವೆಂಕಟರೆಡ್ಡಿ , ಶ್ರೀನಿವಾಸಲು , ಚಂದ್ರಶೇಖರ್ ಮತ್ತಿತರರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.