ಉಡುಪಿ ( ವಿಶ್ವ ಕನ್ನಡಿಗ ನ್ಯೂಸ್ ) :ಆಗುಂಬೆ ಘಾಟಿಯ ಏಳನೇ ಸುತ್ತಿನಲ್ಲಿ ಕಂಟೈನರ್ ಲಾರಿಯೊಂದು ಬ್ರೇಕ್ ಫೇಲಾಗಿ ರಸ್ತೆಯ ತಡೆಗೋಡೆಗೆ ನುಗ್ಗಿದ ಘಟನೆ ನಡೆದಿದೆ.ಬೆಂಗಳೂರಿನಿಂದ ಮಂಗಳೂರಿಗೆ ಸರಕುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಲಾರಿಯ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಘಾಟಿಯ ಏಳನೇ ತಿರುವಿನಲ್ಲಿ ರಸ್ತೆಯ ತಡೆಗೋಡೆಗೆ ಗುದ್ದಿದೆ. ಲಾರಿಯಲ್ಲಿ ಚಾಲಕನು ಒಬ್ಬನೇ ಇದ್ದನೆಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಇದೇ ತಿರುವಿನ ಪಕ್ಕದಲ್ಲಿ ಲಾರಿಯೊಂದು ರಸ್ತೆ ತಡೆಗೋಡೆಗೆ ಗುದ್ದಿದ ಘಟನೆ ನಡೆದಿತ್ತು.ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸ್ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು. ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.