ಕೋಲಾರ (ವಿಶ್ವಕನ್ನಡಿಗ ನ್ಯೂಸ್) : – ಜಿಲ್ಲೆಯಲ್ಲಿ ಕೆಲವು ಪದವಿ ಪೂರ್ವ ಕಾಲೇಜುಗಳು ಅನುಮತಿ ಸಿಗುವ ಮುನ್ನವೇ ದಾಖಲಾತಿ ಆರಂಭಿಸಿರುವ ಕುರಿತು ಗಮನಕ್ಕೆ ಬಂದಿದ್ದು , ಅಂತಹ ಕಾಲೇಜುಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲೆಯ ಮುಳಬಾಗಿಲಿನ ಎಸ್.ಇ.ಟಿ ಪಿಯು ಕಾಲೇಜು , ಬೇತಮಂಗಲದ ದತ್ತಸಾಯಿ ಪಿಯು ಕಾಲೇಜು , ಕೋಲಾರದ ಬಿಎಂಎಸ್ ಪದವಿ ಪೂರ್ವ ಕಾಲೇಜು , ಆಚಾರ್ಯ ಪಿಯು ಕಾಲೇಜು , ವಕ್ಕಲೇರಿಯ ಗೆಲಾಕ್ಸಿ ಪಿಯು ಕಾಲೇಜು ಹಾಗೂ ಮಾಲೂರಿನ ಗುರುಸದನ ಪಿಯು ಕಾಲೇಜುಗಳು ಈ ಪಟ್ಟಿಗೆ ಸೇರಿವೆ ಎಂದು ತಿಳಿಸಿದ್ದಾರೆ.
ಈ ಸಂಸ್ಥೆಗಳ ಆಡಳಿತ ಮಂಡಳಿಗಳು ಪದವಿ ಪೂರ್ವ ಕಾಲೇಜು ಆರಂಭಿಸಲು ಇಲಾಖೆಗೆ ಮನವಿ ಸಲ್ಲಿಸಿವೆ ಆದರೆ ಈ ಅರ್ಜಿಗಳು ಪರಿಶೀಲನಾ ಹಂತದಲ್ಲಿದ್ದು , ಇನ್ನೂ ಮಂಜೂರಾತಿ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಜೂರಾತಿ ಆದೇಶ ಇಲ್ಲದಿದ್ದರೂ ಈ ಕಾಲೇಜುಗಳು ದಾಖಲಾತಿ ಆರಂಭಿಸಿರುವ ಕುರಿತು ದೂರುಗಳು ಬಂದಿರುವ ಹಿನ್ನಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದ್ದು , ಇಂತಹ ಕಾಲೇಜುಗಳಿಗೆ ಮಂಜೂರಾತಿ ನೀಡುವವರೆಗೂ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಬಾರದು ಮತ್ತು ದಾಖಲಿಸಿದರೆ ಮುಂದೆ ಎದುರಾಗುವ ಸಮಸ್ಯೆಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಜವಾಬ್ದಾರವಲ್ಲ ಎಂದು ಪಿಯು ಡಿಡಿ ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.