ಕೋಲಾರ (ವಿಶ್ವಕನ್ನಡಿಗ ನ್ಯೂಸ್): – ರಾಷ್ಟ್ರೀಯತೆ , ಶಿಸ್ತು ಕಲಿಸುವ ಭಾರತ ಸೇವಾದಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ವೇತನದಲ್ಲಿ ಇಂಕ್ಲಿಮೆಂಟ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಭಾರತ ಸೇವಾದಳ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ಕೆ.ವೆಂಕಟನಾರಾಯಣ್ ತಿಳಿಸಿದರು.
ನಗರದ ಖಾದಿಪುರದಲ್ಲಿರುವ ನಲ್ಲೂರಮ್ಮದೇವಿ ಅನಾಥ ಮಕ್ಕಳ ಶಾಲೆಯಲ್ಲಿ ಭಾರತ ಸೇವಾದಳದಿಂದ ಹಮ್ಮಿಕೊಳ್ಳಲಾಗಿದ್ದ ಡಾ.ನಾ.ಸು ಹರ್ಡೀಕರ್ ಅವರು ೪೬ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು , ಅನಾಥ ಮಕ್ಕಳಿಗೆ ಬಟ್ಟೆ ವಿತರಿಸಿ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಆತ್ಮೀಯ ಸ್ನೇಹಿತರಾಗಿದ್ದು , ಅವರಿಂದ ಭಾರತ ಸೇವಾದಳ ಚಟುವಟಿಕೆಗಳನ್ನು ವೃದ್ಧಿಸಲು ಅಗತ್ಯ ನೆರವನ್ನು ಮುಂದಿನ ಬಜೆಟ್ಗೆ ಮುನ್ನಾ ಬೆಟಯಾಗಿ ಮಂಡಿಸುವುದಾಗಿ ತಿಳಿಸಿದರು.
ನಿಸ್ವಾರ್ಥ ಸೇವೆಯ ಹರ್ಡೀಕರ್ ದಾರಿಯನ್ನು ಮಕ್ಕಳಿಗೆ ತೋರೋಣ , ಮಕ್ಕಳಿಗೆ ಶಿಕ್ಷಕರ ಮೂಲಕ ಸೇವಾದಳದ ಧೈಯೋದ್ದೇಶಗಳನ್ನು ತಲುಪಿಸೋಣ ಎಂದರು. ರಾಜ್ಯ ಕಾರ್ಯಕಾರಿ ಸದಸ್ಯರಾಗಲು ನನಗೆ ನೆರವಾದ ಮುಭಾರಕ್ ನಗರಸಭಾ ಸದಸ್ಯರಾಗಿದ್ದಾರೆ. ಅವರ ನೆರವಿಂದ ಭಾರತ ಸೇವಾದಳ ಘಟಕಕ್ಕೆ ಅಗತ್ಯವಾದ ನಿವೇಶನ ಪಡೆದುಕೊಳ್ಳಿ , ಜಿಲ್ಲೆಯಲ್ಲಿ ಸೇವಾದಳ ಭವನ ನಿರ್ಮಿಸಲು ೨೫ ಲಕ್ಷ ರೂ ಅನುದಾನ ಮೀಸಲಿದ , ಜನಪ್ರತಿನಿಧಿಗಳ ಸಹಕಾರ ಪಡೆದು ಭವನ ನಿರ್ಮಿಸೋಣ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ , ಪ್ರತಿ ಶಾಲೆಯಲ್ಲೂ ಸೇವಾದಳ ಘಟಕ ಆರಂಭಿಸಿ ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಿ , ಸಮಾಜಕ್ಕೆ ಭಾತೃತ್ವದ ಸಂದೇಶ ರವಾನಿಸಿ ಎಂದು ಕರೆ ನೀಡಿ , ದೇಶದ ಸ್ವಾತಂತ್ರ್ಯಕ್ಕಾಗಿ ಸಂಘಟಿತವಾದ ಈ ಸಂಸ್ಕೃ ನಿರಂತರವಾಗಿ ಮಕ್ಕಳಲ್ಲಿ ಸಂಸ್ಕಾರತುಂಬಿ ಉತ್ತಮ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ ಎಂದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಹಾಗೂ ಸಮಾಜಸೇವಕ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ , ಸ್ವಾರ್ಥ ಬಿಟ್ಟು ಮಕ್ಕಳಲ್ಲಿ ಶಿಸ್ತುಸಂಯಮ , ದೇಶ ಪ್ರೇಮ ಮೂಡಿಸುವ ಇಂತಹ ಸಂಘಟನೆಗಳನ್ನು ಮತ್ತಷ್ಟು ಜನರ ಹತ್ತಿರಕ್ಕೆ ಕೊಂಡೊಯ್ಯಬೇಕು , ಸುಭದ್ರ ಭಾರತ ನಿರ್ಮಾಣಕ್ಕಾಗಿ ಮಕ್ಕಳನ್ನು ಭಾರತ ಸೇವಾದಳದ ಅಡಿಯಲ್ಲಿ ಮುನ್ನಡೆಸುವ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ನಗರಸಭಾ ಸದಸ್ಯ ಬಿ.ಎಂ.ಮುಬಾರಕ್ ಸಿಎಂ ಬೊಮ್ಮಯಿ ಅವರಿಗೆ ನಿಕಟರಾಗಿರುವ ವೆಂಕಟನಾರಾಯಣ್ ಅವರು ಮನಸ್ಸುಮಾಡಿದರೆ ಸೇವಾದಳಕ್ಕೆ ಹೊಸ ಹುರುಪು ತರಬಹುದು , ಕೋವಿಡ್ನಿಂದಾಗಿ ಸ್ಥಗಿತಗೊಂಡಿರುವ ಶಿಕ್ಷಕರ , ವಿದ್ಯಾರ್ಥಿಗಳ ಮಿಲಾಪ್ ಶಿಬಿರಗಳನ್ನು ಮತ್ತೆ ಆರಂಭಿಸಬಹುದು ಎಂದರು. ರೆಡ್ಕಾಸ್ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣಗೌಡ , ಸೇವಾದಳದ ಜತೆಗೂಡಿ ಜಿಲ್ಲೆಯಲ್ಲಿ ಕೋವಿಡ್ನಿಂದ ಎದುರಾಗಿರುವ ರಕ್ತದ ಸಮಸ್ಯೆ ನೀಗಿಸಲು ಮಘಾ ರಕ್ತದಾನ ಶಿಬಿರ ನಡೆಸಲು ಉದ್ದೇಶಿಸಲಾಗಿದ್ದು , ಎಲ್ಲರ ಸಹಕಾರ ಕೋರಿದರು.
ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ , ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ ಭಾರತ ಸೇವಾದಳ ಹೆಸರೇ ಸೂಚಿಸುವಂತೆ ನಿಸ್ವಾರ್ಥತೆ , ದೇಶ ಭಕ್ತಿಗೆ ಸಾಕ್ಷಿಯಾಗಿದೆ. ಈ ಸಂಸ್ಥೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರ ಬೆಳೆಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ , ಸೇವೆಗಾಗಿ ಬಾಳು ಎಂಬುದನ್ನು ಕಲಿಸಿಕೊಟ್ಟಿದ್ದೇ ಸೇವಾದಳ , ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಹರ್ಡೀಕರ್ ಅವರ ಪುಣ್ಯಸ್ಮರಣೆಯನ್ನು ಈ ಅನಾಥ ಮಕ್ಕಳೊಂದಿಗೆ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು. ಸೇವಾದಳದ ಕಾರ್ಯದಲ್ಲಿ ಸಕ್ರಿಯವಾಗಿದ್ದ ಕೋಲಾರಮ್ಮ ಡ್ರೈವಿಂಗ್ ಶಾಲೆಯ ಗೋಪಾಲ್ ಅವರನ್ನು ಸ್ಮರಿಸಿದ ಅವರು , ಭಾರತ ಸೇವಾದಳಕ್ಕೆ ನಗರದಲ್ಲಿ ಸಿಎ ನಿವೇಶನ ಒದಗಿಸಲು ಮನವಿ ಮಾಡುವುದಾಗಿಯೂ ತಿಳಿಸಿ , ಅತಿಶೀಘ್ರ ಭವನ ನಿರ್ಮಾಣಕ್ಕೆ ಕಾಯಕಲ್ಪ ಹಾಕುವುದಾಗಿ ನುಡಿದರು.
ಸೇವಾದಳ ಸಂಘಟಕ ದಾನೇಶ್ ನಿರೂಪಿಸಿ , ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸೇವಾದಳ , ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್ , ರೆಡ್ಕ್ರಾಸ್ ಉಪಾಧ್ಯಕ್ಷ ಆರ್.ಶ್ರೀನಿವಾಸನ್ , ಸೇವಾದಳ ಕೋಲಾರ ತಾಲ್ಲೂಕು ಅಧ್ಯಕ್ಷ ವೈ.ಶಿವಕುಮಾರ್ , ಶ್ರೀನಿವಾಸಪುರ ತಾಲ್ಲೂಕು ಕೋಶಾಧ್ಯಕ್ಷ ರವಿಕುಮಾರ್ , ಮುಳಬಾಗಿಲು ಅಧ್ಯಕ್ಷ ರೆಡ್ಡಪ , ಮಾಲೂರು ಅಧ್ಯಕ್ಷ ಬಹುದೂರ್ ಸಾಬ್ , ಮುಖಂಡರಾದ ಖಾದಿಪುರ ಬಾಬು , ಗೋಕುಲ ಚಲಪತಿ , ಶಾಲೆ ಕಾರ್ಯದರ್ಶಿ ಭುವನೇಶ್ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.