ಪುತ್ತೂರು(www.vknews.in): ಭಾರತ ಐತಿಹಾಸಿಕ ಸಂಶೋಧನೆ ಮಂಡಳಿ ರಚಿಸಿದ ಸ್ವಾತಂತ್ರ್ಯ ಹೋರಾಟ ರಕ್ತ ಸಾಕ್ಷಿಗಳು ಎಂಬ ಪುಸ್ತಕದಿಂದ ವಾರಿಯಂ ಕುನ್ನತ್ ಕುಂಙ ಅಹ್ಮದ್ ಹಾಜಿ, ಆಲಿ ಮುಸ್ಲಿಯಾರ್ ಒಳಗೊಂಡಂತೆ 387 ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ತೆಗೆದು ಹಾಕುವ ತೀರ್ಮಾನ ಖಂಡನಾರ್ವಾಗಿದೆ ಎಂದು ಮಿತ್ತೂರು ಸಿರಾಜುಲ್ ಹುದಾ ಮಸೀದಿಯ ಖತೀಬರಾದ ಕೆ.ವಿ.ಮಜೀದ್ ದಾರಿಮಿ ಹೇಳಿದ್ದಾರೆ.
ಜುಮುಅಃ ಕುತುಬಾ ನೆರವೇರಿಸಿ ಮಾತನಾಡಿದ ಅವರು ‘ಇತಿಹಾಸ ಚರಿತ್ರೆಯನ್ನು ತಿರುಚುವ ಮೂಲಕ ನೈಜ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹಾಗೂ ಸ್ಮಾರಕಗಳನ್ನು ನಾಶಪಡಿಸಬಹುದೇ ಹೊರತು ರಾಷ್ಟದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ವಾರಿಯಂ ಕುನ್ನತ್ ಕುಂಙ ಅಹ್ಮದ್ ಹಾಜಿ, ಆಲಿ ಮುಸ್ಲಿಯಾರ್ ಅವರಂತಹ ಅಪರಂಜಿಗಳನ್ನು ಜನತೆಯ ಮನಸ್ಸಿನಿಂದ ಅಳಿಸಿ ಹಾಕಲು ಪ್ಯಾಶಿಸ್ಟ್ ಗಳಿಗೆ ಎಂದೆಂದಿಗೂ ಅಸಾಧ್ಯ ಎಂದು ಹೇಳಿದರು. ಪದೇ ಪದೇ ಇತಿಹಾಸವನ್ನು ತಿರುಚಿ ಕೇಸರೀಕರಣ ಗೊಳಿಸಲು ಪ್ರಯತ್ನಿಸಿದರೆ ಚರಿತ್ರೆ ಪುನರಾವರ್ತನೆಯಾಗಲೂಬಹುದು ಎಂದು ಎಚ್ಚರಿಸಿದ ಅವರು ಚರಿತ್ರೆಯನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಹೆಸರುಗಳನ್ನು ಪುಸ್ತಕದಿಂದ ಕೈ ಬಿಡಬಹುದು ಆದರೆ ಚರಿತ್ರೆಯು ಈ ಭೂಲೋಕ ಇರುವವರೆಗೂ ಚರಿತ್ರೆಯಾಗಿ ಉಳಿಯುತ್ತದೆ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.