ಕೋಲಾರ (ವಿಶ್ವಕನ್ನಡಿಗ ನ್ಯೂಸ್) : ನಾಗನಾಳ ಗ್ರಾಮದ ಸರ್ಕಾರಿ ಕಣವನ್ನು ಬಚ್ಚೆಪ್ಪ ಮತ್ತು ಈತನ ಮಕ್ಕಳಾದ ಮುನೇಗೌಡ ಮತ್ತು ಬೈರೇಗೌಡ ಅಕ್ರಮವಾಗಿ ಖಾತೆ ಮಾಡಿಕೊಂಡು ಮಾರಾಟ ಮಾಡಿರುವ ಹಾಗೂ ಗುಂಡುತೋಪಿನಲ್ಲಿ ಅಕ್ರಮವಾಗಿ ಮರಗಳನ್ನು ಕಠಾವು ಮಾಡಿರುವ ವಿಚಾರವಾಗಿ ನಾಗನಾಳ ಶಂಕರ್ ರವರ ದೂರಿನಂತೆ ಇಂದು ನಾಗರೀಕ ಹಕ್ಕು ಜಾರಿ ನಿರ್ದೇಶನಲಾದ ಪೊಲೀಸ್ ಉಪಾಧೀಕ್ಷಕರು ಗ್ರಾಮಕ್ಕೆ ಆಗಮಿಸಿ ಸ್ಥಳ ತನಿಖೆ ಮಾಡಿದರು.
ಕೋಲಾರ ತಾಲ್ಲೂಕು ಸುಗಟೂರು ಹೋಬಳಿ , ಉರಿಗಿಲಿ ಗ್ರಾಮ ಪಂಚಾಯಿತಿಗೆ ಬರುವ ನಾಗನಾಳ ಗ್ರಾಮದ ಸರ್ವೇ ನಂಬರ್ 1 ಕ್ಕೆ ಹೊಂದಿಕೊಂಡಿರುವ ಸರ್ಕಾರಿ ಕಣಗಳು ಎಂಬ ಸರ್ಕಾರಿ ಸ್ವತ್ತನ್ನು ಬಚ್ಚೆಪ್ಪ ಮತ್ತು ಈತನ ಮಕ್ಕಳಾದ ಮುನೇಗೌಡ ಮತ್ತು ಬೈರೇಗೌಡ ಎಂಬುವರು ಅಕ್ರಮವಾಗಿ ಪ್ರವೇಶ ಮಾಡಿ 30 + 28 ವಸ್ತೀರ್ಣವುಳ್ಳ 7 ನಿವೇಶನಗಳಿಗೆ ಅಕ್ರಮವಾಗಿ ಉರಿಗಿಲಿ ಗ್ರಾಮ ಪಂಚಾಯಿತಿಯಲ್ಲಿ ನಮೂನೆ 9 10 ನ್ನು ಸೃಷ್ಟಿಸಿಕೊಂಡಿದ್ದು , ಈ ನಿವೇಶನಗಳಲ್ಲಿ ಕೆಲವೊಂದು ನಿವೇಶನಗಳನ್ನು ಸುಮಾರು ಲಕ್ಷಾಂತರ ರೂಗಳಿಗೆ ಕ್ರಯ ಮಾಡಿ ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ. ಈ ಕಣದ ಜಾಗ ಸಾರ್ವಜನಿಕರ ಉದ್ದೇಶಕ್ಕಾಗಿ ಮೀಸಲಿಡಬೇಕಾಗಿದ್ದ ಈ ಸ್ವತ್ತನ್ನು ಕಬಳಿಸಿರುವ ಮತ್ತು ಈ ಸ್ವತಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ದೂರಿನಲ್ಲಿ ತಿಳಿದರು.
ಕರ್ನಾಟಕ ಭೂ ಕಂದಾಯ ನಿಯಮಗಳು 1966 ರ ನಿಯಮ 21 ( 2 ) ( ಬಿ ) ರ ವಿವರಣೆಯಂತೆ ಬಿ ಖರಾಬ್ ಜಮೀನುಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿರಿಸಿದ ಜಮೀನುಗಳಾಗಿರುತ್ತವೆ. ಹಾಗೂ ಇದೇ ನಿಯಮಗಳ ನಿಯಮ – 108 – ಐ ವಿವರಣೆಯಂತೆ ದೇವರ ಕಾಡು , ಉರ್ದುವೆ , ಗುಂಡುತೋಪು ಕೆರೆಯ ತಲಪಾಯ , ಷಟ್ ಖರಾಬ್ ಹಳ್ಳ , ಸ್ಮಶಾನಗಳು ಎಂಬುದಾಗಿ ಕಮದಾಯ ದಾಖಲೆಗಳಲ್ಲಿ ವರ್ಣಿಸಲಾದ ಭೂಮಿಗಳು ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕರದ ಅಭಿಪ್ರಾಯದಲ್ಲಿ ಅಗತ್ಯ ಅಂಥ ಭೂಮಿಗಳನ್ನು ಮಂಜೂರಾತಿ ಮಾಡತಕ್ಕದ್ದಲ್ಲವೆಂದು ತಿಳಿಸಲಾಗಿದೆ.
ಈ ಸರ್ಕಾರಿ ಆದೇಶವನ್ನು ಉಲ್ಲಂಘನೆ ಮಾಡಿರುವರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರು . ನಾಗನಾಳ ಗ್ರಾಮದ ಸರ್ವೇ ನಂ . 25 ಕ್ಕೆ ಸಂಬಂಧಪಟ್ಟಂತೆ ಗುಂಡುತೋಪು ಮತ್ತು ಮರಗಿಗಳ ಅಕ್ರಮ ಕಟಾವಿಗೆ ಸಂಬಂಧಿಸಿದಂತೆ ಇದೇ ಗ್ರಾಮದ ಮುನೇಗೌಡ , ಮಂಜುನಾಥ್ , ಬೈರೇಗೌಡ ಇನ್ನು ಮುಂತಾದವರ ವಿರುದ್ಧ ನಾಗನಾಳ ಶಂಕರ್ ರವರು ದೂರು ನೀಡಿದ್ದರು ಸ್ಥಳ ಪರಿಶೀಲನೆ ಮಾಡಿದ ಪೊಲೀಸ್ ಅಧೀಕ್ಷಕರು ಸಂಬಂಧಟ್ಟ ಇಲಾಖೆಗಳಿಂದ ವರದಿಗಳನ್ನು ತರಿಸಿಕೊಂಡು ಮುಂದಿನ ಕ್ರಮ ಜರುಗಿಸಲು ತಹಶೀಲ್ದಾರ್ , ಎ.ಎ. ಆರ್ .ಐ . ರವರುಗಳು ಸೂಚನೆ ನೀಡಿದರು. ಸರ್ಕಾರಿ ಕಣಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಲಯಂ , ಆರ್.ಐ. ಆನಂದ ಬಾಬು , ವಿ.ಎ. ಅಮೃತ , ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್ಪೆಕ್ಟರ್ ರಘು , ಪಿ.ಎಸ್.ಐ ನಾರಾಯಣಸ್ವಾಮಿ , ಸಿಬ್ಬಂದಿ ಹಾಗೂ ನಾಗನಾಳ ಗ್ರಾಮಸ್ಥರು ಹಾಜರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.