(www.vknews.in) ಬಂಟ್ವಾಳ ತಾಲೂಕಿನ ಪುಣಚ ಗ್ರಾಮ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜೇರು ನಲ್ಲಿ ಪೋಷಕರಿಂದ ಶಾಲೆಯ ಸುತ್ತಮುತ್ತ ಶ್ರಮದಾನ ನಡೆಯಿತು.
ಮಕ್ಕಳ ಕಲರವ ಇಲ್ಲದೆ ಶಾಲೆಗಳು ಮುಚ್ಚಿ 2 ಶೈಕ್ಷಣಿಕ ವರ್ಷವು ಮುಗಿಯುತ್ತಾ ಬಂದಿರುವಾಗ ಆವರಣವು ಹುಲ್ಲಿನಿಂದ ಆವೃತವಾಗುವುದು ಸಹಜ ವಾಗಿದೆ. ಇದನ್ನು ಮನಗಂಡ ಶಾಲಾ ಶಿಕ್ಷಕ ವೃಂದ, ಎಸ್ಡಿಎಂಸಿ,ಪೋಷಕರು ,ಅಡುಗೆ ಸಹಾಯಕರು ಎರಡನೇ ಬಾರಿ ಶಾಲೆಯ ಆವರಣವನ್ನು ಸ್ವಚ್ಚ ಗೊಳಿಸುವುದರೊಂದಿಗೆ ,ತೆಂಗಿನ ಗಿಡಗಳಿಗೆ ಸೊಪ್ಪನ್ನು ಇಟ್ಟು ,ಅಪಾಯಕಾರಿ ಮರಗಳ ಗೆಲ್ಲನ್ನು ಕಡಿದು, ಈ ಶೈಕ್ಷಣಿಕ ವರ್ಷ ಪ್ರಾರಂಭ ವಾಗುವ ಸಮಯಕ್ಕೆ ಮಕ್ಕಳಿಗೆ ಅನುಕೂಲ ವಾಗುವ ರೀತಿಯಲ್ಲಿ ಶ್ರಮದಾನವನ್ನು ಮಾಡಲಾಯಿತು.
ಪೋಷಕರೊಂದಿಗೆ ಸ್ಥಳೀಯ ಮಕ್ಕಳು ಕೂಡ ಭಾಗವಹಿಸಿ ಆಟದೊಂದಿಗೆ ಕೆಲಸದಲ್ಲಿ ಕೂಡ ಪಾಲ್ಗೊಂಡು ತುಂಬಾ ಸಂತೋಷವನ್ನು ಅನುಭವಿಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ಪೋಷಕರೊಂದಿಗೆ ಶಾಲಾ ಶಿಕ್ಷಕ ವೃಂದ ಕೂಡ ಕೆಲಸದಲ್ಲಿ ಭಾಗಿ ಆಗಿದ್ದು ತಮ್ಮ ಮನೆಯ ಕೆಲಸದಲ್ಲಿ ಪಾಲ್ಗೊಂಡ ಪ್ರತೀತಿಯಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡಿರುವುದು ಎಲ್ಲರಿಗೂ ಮಾದರಿ ಆಗಿದೆ.
ಇಲ್ಲಿ ನಡೆದ ಶ್ರಮದಾನ ದಲ್ಲಿ ಮುಂಚೂಣಿಯಲ್ಲಿ ಇದ್ದ ಎಸ್ಡಿಎಂಸಿ ಅಧ್ಯಕ್ಷರಾದ ವೆಂಕಟರಮಣ ಅಜೇರು ರವರು ಪಾಲ್ಗೊಂಡ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ತಿಳಿಸುತ್ತಾ ಗ್ರಾಮೀಣ ಪ್ರದೇಶದ ಶಾಲೆಗಳು ಬೆಳವಣಿಗೆಯಲ್ಲಿ ಶಾಲೆಯ ಪೋಷಕರ ಪಾತ್ರ ಮಹತ್ವ ವಾಗಿದ್ದು ಅದಕ್ಕೆ ನಮ್ಮ ಶಾಲೆಯು ಉದಾಹರಣೆ ಯಾಗಿದೆ ಎಂದು ತಿಳಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.