ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್): ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕೆಮ್ಮಾಯಿ ಘಟಕದ ಪದಗ್ರಹಣದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಸೈಫುಲ್ ಹುದಾ ಮದ್ರಸ ದಾರಂದಕುಕ್ಕುವಿನಲ್ಲಿ ನಡೆಯಿತು.
ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ದಾರಂದಕುಕ್ಕು ಅಧ್ಯಕ್ಷರಾದ ಶರೀಫ್ ಸಮೂನು ಸ್ಟೈಲ್ ಪಾರ್ಕ್ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು, ಮದ್ರಸ ಸದರ್ ಉಸ್ತಾದರಾದ ಝಕರಿಯಾ ಸಅದಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ ಮಾತನಾಡಿ , ಕೊರೋನದ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಜನರ ಆರೋಗ್ಯ ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅಭಿನಂದನಾರ್ಹ ಎಂದರು.
ದೇಶದಲ್ಲಿ ಕೋವಿಡ್-ನ ಮೊದಲ ಅಲೆಯ ಸಂದರ್ಭ ಸೋಂಕಿತ ವ್ಯಕ್ತಿ ಮರಣಹೊಂದಿದರೆ ಅವರನ್ನು ಜೆಸಿಬಿ ಮೂಲಕ ಗುಂಡಿಗೆ ಹಾಕುವ ಪರಿಸ್ಥತಿ ಇತ್ತು, ಇದನ್ನು ಅರಿತ ಪಾಪ್ಯುಲರ್ ಫ್ರಂಟ್ ದೇಶಾದ್ಯಂತ ತನ್ನ ಕಾರ್ಯಕರ್ತರಿಗೆ ಮೃತ ಶರೀರವನ್ನು ಆಯಾ ಧರ್ಮಕ್ಕೆ ಅನುಸಾರವಾಗಿ ಗೌರವಯುತವಾಗಿ ಅಂತಿಮ ಸಂಸ್ಕಾರ ನೇರವೇರಿಸುವ ತರಬೇತಿಯನ್ನು ನೀಡಿ ಸುಮಾರು 3000 ಕ್ಕಿಂತಲೂ ಹೆಚ್ಚಿನ ದಫನ ಕಾರ್ಯ ನೆರವೇರಿಸಿದೆ ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಝನ್ ಕಾರ್ಯದರ್ಶಿ ಅಥಾವುಳ್ಳ ಮಾತನಾಡಿ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕರ್ನಾಟಕದಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಾಚರಿಸುತ್ತಿದೆ. ರಕ್ತದಾನ ಮಾತ್ರವಲ್ಲದೆ, ರೋಗಿಗಳಿಗೆ ಅವಶ್ಯಕತೆ ಇರುವ ಮೆಡಿಕಲ್ ನೆರವನ್ನು ಕೂಡ ನೀಡುತ್ತಿದೆ ಎಂದರು.
ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕೆಮ್ಮಾಯಿಯ ಗೌರವಾಧ್ಯಕ್ಷರಾದ ಅರಮನೆ ಅಬ್ದುಲ್ ರಹಿಮಾನ್ ಹಾಜಿ, ಕೆಮ್ಮಾಯಿ ಜಮಾಅತ್ ಕಮಿಟಿಯ ಮಾಜಿ ಅಧ್ಯಕ್ಷರಾದ ಬಶೀರ್ ಹಾಜಿ ಎಕೆ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕೋಆರ್ಡಿನೇಟರ್ ಪ್ರವೀನ್ ಸಂದರ್ಬೋಚಿತವಾಗಿ ಮಾತನಾಡಿದರು.
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ನರ್ಸ್ ದಮಯಂತಿ, ಚಿಕ್ಕಮುಡ್ನೂರು, ದಾರಂದಕುಕ್ಕು ವ್ಯಾಪ್ತಿಯ ಆಶಾಕಾರ್ಯಕರ್ತೆಯರಾದ ಸಂದ್ಯಾ, ಚಂದ್ರಾವತಿ ಅವರನ್ನು ಶಾಲು ಹೊದಿಸಿ, ಹಣ್ಣುಹಂಪಲು ನೀಡಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನರ್ಸ್ ದಮಯಂತಿ ಅವರು ಆರೋಗ್ಯ ವಿಷಯದಲ್ಲಿ ಚಿಕ್ಕಮುಡ್ನೂರು ಬನ್ನೂರು ಗ್ರಾಮ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿದ ಪಾಪ್ಯುಲರ್ ಫ್ರಂಟ್ ಸಂಘಟಕರಿಗೆ ಆಭಾರಿಯಾಗಿದ್ದೇನೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳಾದ ಮಾನಸ, ಅಶ್ವಿನಿ, ಆಯಿಷಾ ಸನ್ಮಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದಾರಂದಕುಕ್ಕು ಮದ್ರಸ ಕಮಿಟಿ ಅಧ್ಯಕ್ಷರಾದ ಹಾಜಿ ಅಶ್ರಫ್ ಡಿಕೆ, ಸ್ವಲಾತ್ ಕಮಿಟಿ ಅಧ್ಯಕ್ಷರಾದ ನೌಷಾದ್ ಎಕೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಿಟಿ ಡಿವಿಝನ್ ಅಧ್ಯಕ್ಷರಾದ ಉಮರ್ ಕೂರ್ನಡ್ಕ, ಉದ್ಯಮಿ ಹಂಝ ಹಾಜಿ ದಾರಂದಕುಕ್ಕು, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಪುತ್ತೂರು ಜಿಲ್ಲಾ ಸಂಯೋಜಕರಾದ ಅಶ್ರಫ್ ಬಾವ ಉಪಸ್ಥಿತರಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಾರಂದಕುಕ್ಕು ಯುನಿಟ್ ಸದಸ್ಯರಾದ ನಿಶಾದ್ ಡಿಕೆ ಸ್ವಾಗತಿಸಿ, ಹಕೀಂ ಡಿಕೆ ಧನ್ಯವಾದ ಸಲ್ಲಿಸಿದರು. ಅಝೀಝ್ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.