ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಕೋಲಾರ ಜಿಲ್ಲೆಯ ಪ್ರಭೋಧ ಸೇವಾ ಸಮಿತಿ ವತಿಯಿಂದ, ಶ್ರೀ ಶ್ರೀ ಶ್ರೀ ಆಚಾರ್ಯ ಪ್ರಬೋಧಾನಂದ ಯೋಗಿಶ್ವರರ ದಿವ್ಯ ಆಶಿರ್ವಾದಿಂದ ಮಾಲೂರು ತಾಲ್ಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ನಾಳೆ ಶ್ರೀ ಕೃಷ್ಣಜನ್ಮಾಷ್ಟಾಮಿ ಮಹೋತ್ಸಾವದ ಪ್ರಯುಕ್ತ ಶ್ರೀ ಕೃಷ್ಣನ ಹಾಡುಗಳು, ನೃತ್ಯ ಕಾರ್ಯಕ್ರಮಗಳು, ಪ್ರವಚನಗಳನ್ನು ಏರ್ಪಡಿಸಲಾಗಿದೆ.
ಈ ಬಗ್ಗೆ ಇಂದೂ ಜ್ಞಾನ ವೇದಿಕೆ-ಪ್ರಭೋದ ಸೇವಾ ಸಮಿತಿಯ ಭೈರನಹಳ್ಳಿ ಚಂದ್ರಶೇಖರ್ ರವರು ಮಾತನಾಡಿ “ಈ ವರ್ಷ ಮಾಲೂರು ತಾಲ್ಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಕೃಷ್ಣಜನ್ಮಾಷ್ಟಾಮಿ ಹಬ್ಬದ ಪ್ರಯುಕ್ತ ಶ್ರೀ ಶ್ರೀ ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರ ಆಶಿರ್ವಾದದಿಂದ ಭಗವದ್ಗೀತೆ ಪ್ರವಚನದೊಂದಿಗೆ ಶ್ರೀ ಕೃಷ್ಣನ ಪಲ್ಲಕ್ಕಿಯ ಅದ್ದೂರಿ ಉತ್ಸಾವವನ್ನು ಶ್ರೀಮತಿ ನಂಜಮ್ಮ ಮತ್ತು ಶ್ರೀ ಶಾಳಪ್ಪ ಕುಟುಂಬದವರು, ಭೈರನಹಳ್ಳಿ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಲಾಗಿದೆ ಎಲ್ಲಾರೂ ಬಂದು ಭಾಗವಹಿಸಿ” ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.