ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮೂರು ರಾಜ್ಯಗಳಲ್ಲಿ ಸದಾ ರಕ್ತದಾನ, ನೇತ್ರದಾನ, ಹಾಗೂ ಸಮಾಜಸೇವೆ ಎಂಬ ಮೂರು ತ್ರಿರತ್ನಗಳ ಹಾದಿಯಲ್ಲಿ ಸಾಗುತ್ತಿರುವ ರಾಷ್ಟ್ರಕವಿ, ಯುಗದ ಕವಿ, ಜಗದ ಕವಿ, ವಿಶ್ವಮಾನವ ಕುವೆಂಪುರವರ ಆಶಯದ ಅಡಿಯಲ್ಲಿ ಸಾವಿರಾರು ಜನರಿಗೆ ರಕ್ತ ನೀಡಿ ಜೀವ ಉಳಿಸಿರುವ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF 2021-2022 ನೇ ಸಾಲಿನ “ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿಗೆ” ಸಾಹಿತ್ಯ ಆಸಕ್ತರು, ನವಜಾತ ಶಿಶು ತಜ್ಞರು, ಮಕ್ಕಳ ವೈದ್ಯಾಧಿಕಾರಿಗಳಾದ ಮಾಲೂರಿನ ಡಾ.ಕಿರಣ್ ಸೋಮಣ್ಣ ರವರನ್ನು ಆಯ್ಕೆ ಮಾಡಲಾಗಿದೆ.
ಮಾಲೂರಿನ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಕೇಂದ್ರ ಕಚೇರಿಯಲ್ಲಿ ಈ ಸಾಲಿನ “ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ” ಆಯ್ಕೆ ಬಗ್ಗೆ ಸಮಿತಿಯ ಎಲ್ಲಾ ಸರ್ವ ಸದಸ್ಯರು ಒಪ್ಪಿಗೆ ಮೇರೆಗೆ ಡಾ.ಕಿರಣ್ ಸೋಮಣ್ಣ ರವರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ “ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಇವರ ಕಾರ್ಯ ಅತಿ ಹೆಚ್ಚು ಜನಮನ್ನಣೆಗೆ ಪಾತ್ರವಾಗಿದೆ. ಅದರ ಜೊತೆಗೆ ಇವರ ಸಮಾಜಮುಖಿ ಚಿಂತನೆ, ಉತ್ತಮ ಸಮಾಜಸೇವಾ ಕಾರ್ಯಗಳು, ಸಾಹಿತ್ಯದ ಪರ ಒಲವು, ಇವುಗಳನ್ನೆಲ್ಲಾ ಪರಿಗಣಿಸಿ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಈ ಬಾರಿ ಜನಪ್ರಿಯ ಮಕ್ಕಳ ವೈದ್ಯಾಧಿಕಾರಿಗಳಾದ ಡಾ.ಕಿರಣ್ ಸೋಮಣ್ಣ ರವರನ್ನು ಆಯ್ಕೆ ಮಾಡಿದ್ದೀವಿ” ಎಂದರು.
ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷರಾದ ಲಕ್ಕೂರು ಎಂ ನಾಗರಾಜ್ ಮಾತನಾಡಿ “ವೈದ್ಯಕೀಯ, ಸಮಾಜಮುಖಿ ಕಾರ್ಯ, ಬಡವರ ಬಗ್ಗೆಗಿನ ಕಾಳಜಿ, ಯುವಕರ ನಡುವಿನ ಉತ್ತಮ ಒಡನಾಟದ ಮೂಲಕ ಸದಾ ಕ್ರೀಯಾಶೀಲವಾಗಿರುವ, ಖ್ಯಾತ ಮಕ್ಕಳ ವೈದ್ಯಾಧಿಕಾರಿಗಳಾದ ಡಾ.ಕಿರಣ್ ಸೋಮಣ್ಣನವರಿಗೆ ಈ ನಾಡಿನ ಮಹಾನ್ ಕವಿ ಕುವೆಂಪುರವರ ಆಶಯದಿಂದ ಸಾಗುತ್ತಿರುವ VKF “ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿಗೆ” ಆಯ್ಕೆ ಮಾಡಲಾಗಿದೆ. ಇವರಿಗೆ ಪ್ರಶಸ್ತಿಯನ್ನು ಸೆಪ್ಟೆಂಬರ್ ತಿಂಗಳ 19 ರಂದು ಭಾನುವಾರ ಅವರ ನಿವಾಸದಲ್ಲಿ ಸರಳ ಕಾರ್ಯಕ್ರಮದ ಮೂಲಕ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ನೀಡಿ ಗೌರವಿಸಲಾಗುವುದು” ಎಂದಿದ್ದಾರೆ.
ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ನ “ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ” ಆಯ್ಕೆ ಸಮಿತಿ ಸಭೆಯಲ್ಲಿ ಶ್ರೀಮತಿ ಶ್ವೇತನಾಗರಾಜ್, ಲಕ್ಕೂರು ಎಂ.ನಾಗರಾಜ್, ದೊಡ್ಡಕಲ್ಲಹಳ್ಳಿ ಮಂಜುನಾಥ್, ಹರೀಶ್ ಕುಮಾರ್.ಎಸ್.ಜಿ, ಇಮ್ರಾನ್, ಶ್ರೀಮತಿ ವರಲಕ್ಷ್ಮೀ, ದುನ್ನಸಂದ್ರ ಸುನೀಲ್ ಕುಮಾರ್, ಮಾಲೂರು ಸುನೀಲ್ ಕುಮಾರ್, ದೊಡ್ಡಿ ಪ್ರವೀಣ್, ರಂಗನಾಥ್, ಆದರ್ಶ, ಲಕ್ಕೂರು ಸುನೀಲ್ (ಕೆ.ಇ.ಬಿ), ಕೆ.ಟಿ.ಮುನಿರಾಜ್ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.