ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದಿಂದ ಹಾದು ಹೋಗುವ ಮಾಲೂರು-ಹೊಸೂರು ಮುಖ್ಯರಸ್ತೆಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದ ರೈಲ್ವೇ ಸೇತುವೆ ಪ್ರಾರಂಭದಲ್ಲಿ ದೊಡ್ಡ ಚರಂಡಿ ಕಾಮಗಾರಿಯನ್ನು ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ ರವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಕಾಮಗಾರಿಯ ಪೂರ್ಣಗೋಳಿಸಿ, ಜನರ ವಾಹನಗಳ ಒಡಾಟಕ್ಕೆ ಅನುವು ಮಾಡಿಕೊಟ್ಟಿರುವುದಕ್ಕೆ ನಮ್ಮ VKF ಅಭಿನಂದನೆ ಅರ್ಪಿಸುತ್ತಿದೆ.
ದಿನಾಂಕ: 21-08-2021 ರಂದು VKF ಮನವಿ ಮಾಡಿತ್ತು. ಮಾಲೂರು ರೈಲ್ವೇ ಸೇತುವೆ ಮೇಲೆ ಇದ್ದಕ್ಕಿದಂತೆ ಟ್ರಾಫಿಕ್ ಜಾಮ್ ಸಾರ್ವಜನಿಕರಿಗೆ ಕಿರಿ ಕಿರಿ ಎಂದು ಹಾಗೇ ದಿನಾಂಕ 29-08-2021 ರಂದು ಮುಖಪುಟದಲ್ಲಿ ನೇರ ಲೈವ್ ಮೂಲಕ ಸೇತುವೆ ಮೇಲೆ ಟ್ರಾಫಿಕ್ ಸಮಸೈಗೆ ಚರಂಡಿ ಕಾಮಗಾರಿ ಪೂರ್ಣ ಆಗಿರುವುದನ್ನು ತೆರವುಗೋಳಿಸದೇ ಇರುವುದೇ ಆಗಿದೆ, ಕೂಡಲೇ ಚರಂಡಿ ಕಾಮಗಾರಿ ಪೂರ್ಣ ಮಾಡಿ, ಸಾರ್ವಜನಿಕರ ವಾಹನಗಳ ಒಡಾಟಕ್ಕೆ ಅನುಕೂಲ ಕಲ್ಪಿಸಿಕೋಡಿ, ಎಂದು ಇದಕ್ಕೆ ಸ್ಪಂದಿಸಿದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ರವರ ಮಗ ಸುನೀಲ್ ನಂಜೇಗೌಡ ರವರು ಕಾಳಜಿ ವಹಿಸಿ ಚರಂಡಿ ತೆರವುಗೋಳಿಸುವ ಮೂಲಕ ಸಹಕರಿಸಿದ್ದಾರೆ.
ಈ ಬಗ್ಗೆ ಶಾಸಕ ಕೆ.ವೈ.ನಂಜೇಗೌಡ ಪುತ್ರ ಸುನೀಲ್ ನಂಜೇಗೌಡ ಮಾತನಾಡಿ “ಮೂರು ದಿನಗಳ ಹಿಂದೆ ಮಾಲೂರು ರೈಲ್ವೇ ಸೇತುವೆ ಮೇಲೆ ಆಗುತ್ತಿರುವ ಟ್ರಾಫಿಕ್ ಸಮಸೈಯ ಬಗ್ಗೆ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ನಮ್ಮ ಗಮನ ಸೆಳೆದಿದ್ದರು ಆ ನಿಟ್ಟಿನಲ್ಲಿ ನಾನು ನಮ್ಮ ತಂದೆಯವರ ಬಳಿ ಮಾತನಾಡಿ ಚರಂಡಿ ಕಾಮಗಾರಿ ಪೂರ್ಣಗೋಳಿಸಿ ವಾಹನಗಳ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡಲು ತಿಳಿಸಿದ್ದೆ ಅದಕ್ಕೆ ಸ್ಪಂದಿಸಿ ತೆರವು ಮಾಡಿಸಿದ್ದಾರೆ. ತಾಲ್ಲೂಕಿನ ಜನರ ಸಮಸೈಗಳ ಪರಿಹಾರಕ್ಕೆ ನಾವು ಸದಾ ಮುಂದೆ ಇರುತ್ತೇವೆ” ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ನಮ್ಮ ತಾಲ್ಲೂಕಿನ ಬಹುಮುಖ್ಯವಾದ ಸಮಸೈಯ ದನಿಗೆ ಧ್ವನಿಯಾಗುವ ಮೂಲಕ ಸ್ಪಂದಿಸಿದ ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಪುತ್ರರಾದ ಸುನೀಲ್ ನಂಜೇಗೌಡ ರವರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇವೆ, ಸೇತುವೆ ಮೇಲಿನ ರಸ್ತೆ ಮಾಡುವವರೆಗೂ ಅದರ ಮೇಲಿರುವ ದೊಡ್ಡ ದೊಡ್ಡ ಹಳ್ಳಗಳನ್ನು ಮುಚ್ಚಿ ಅಪಘೌತ ರಹಿತ ಸಂಚಾರಕ್ಕೆ ಸಹಕರಿಸಿ” ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.