ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕಲ್ಲಡ್ಕ ಪ್ರಭಾಕರ ಭಟ್ಟರು ‘ಹಿಂದು ಸಮಾಜೋತ್ಸವ’ ಸಭೆಯನ್ನು ಆಯೋಜಿಸಿರುವುದು ನೋಡಿದರೆ, ನಿರುದ್ಯೋಗದ ಭೀಕರ ಹೊಡೆತದಿಂದಾಗಿ ಬೀದಿಗೆ ಬಿದ್ದಿರುವ ಹತಾಶ ಯುವಕ, ಯುವತಿಯರ ಉದ್ಯೋಗದ ಕುರಿತು ಮಾತಾಡುತ್ತಾರೆ ಎಂದು ಕೊಂಡಿದ್ದೇವು. ಆದರೆ, “ಕನಿಷ್ಟ ಹಿಂದು ಯುವಕ ಯುವತಿಯರಿಗಾದರು ಕೆಲಸ ಕೊಡಿ” ಎಂದು ಸರಕಾರಗಳ ವಿರುದ್ದ ಮಾತನಾಡುತ್ತೇವೆಂದು ಎಂದು ಭಾವಿಸಲಾಗಿತ್ತು ಆದರೆ ಆದದ್ದೂ ಬೇರೆಯದೇʼʼ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ಅದೇ ಮಕ್ಕಳು ಹುಟ್ಟಿಸುವುದು, ಜಾನುವಾರು ರಕ್ಷಣೆ, ಸಾಬರು, ತಾಲಿಬಾನು ಅಂತ ಮಾತಾಡಿದ್ರು, ಅವರದ್ದೇ ಜಿಲ್ಲೆಯಲ್ಲಿ ಸರಗಳ್ಳತನ, ಮನೆಗಳ್ಳತನ ಸರಣಿಯಾಗಿ ನಡೆಯುತ್ತಿರುವುದು, ಅದರಲ್ಲಿ ಈವರಗೆ ಅಂತಹ ಕೃತ್ಯಗಳ ಹಿನ್ನಲೆ ಇಲ್ಲದ ಹೊಸ ಯುವಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು, ಅವರೆಲ್ಲರೂ ಉದ್ಯೋಗ ಪಡೆಯಲು ವಿಫಲರಾಗಿರುವ ಹತಾಶ ನಿರುದ್ಯೋಗಿ ಗಳಾಗಿರುವುದು ಕಲ್ಲಡ್ಕ ಭಟ್ಟರಿಗೆ ಅರಿವಿಗೇ ಬಂದಿಲ್ಲ ಎಂಬುವುದೇ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಭಟ್ಟರೇ, ಬೇರೇನೂ ಬೇಡ ನಿಮ್ಮದೇ ದಿನ ಪತ್ರಿಕೆಗಳ ಅಪರಾಧ ಸುದ್ದಿಗಳ ಕಡೆ ಒಂದಷ್ಟು ಕಣ್ಣಾಡಿಸಿ ನೋಡಿ ಓದಿರಿ, ಪೊಲೀಸ್ ಠಾಣೆಗಳಲ್ಲಿ ವರದಿಯಾದ ಕಳ್ಳತನ ಪ್ರಕರಣ, ಆರೋಪಿಗಳ ವಿವರ ಪಡೆದುಕೊಳ್ಳಿ. ಉದ್ಯೋಗದಿಂದ ವಂಚಿತ ಹತಾಶ ನಿರುದ್ಯೋಗಿ ಯುವಜನತೆಯ ಪಾಡು ತಿಳಿಯುತ್ತದೆ ಎಂದು ಮುನೀರ್ ಕಾಟಿಪಳ್ಳ ಅವರು ವಿವರಿಸಿದ್ದಾರೆ.
ಆರ್ಥಿಕ ಸಂಕಷ್ಟ, ನಿರುದ್ಯೋಗದಿಂದಾಗಿ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಮಂಗಳೂರಿನ ಮಾನಸಿಕ ತಜ್ಞ ವೈದ್ಯರೇ, ಹೇಳುತ್ತಿದ್ದಾರೆ. ಸಾಧ್ಯವಾದರೆ ಅವರನ್ನೊಮ್ಮೆ ಕಂಡು ಮಾತಾಡಿಸಿಕೊಂಡು ಬನ್ನಿ. ಹಾಗೆಯೇ ಆತ್ಮಹತ್ಯೆ ಪ್ರಕರಣಗಳು ಕೊರೊನಾ ಸಾವಿಗಿಂತಲೂ ಹಲವು ಪಟ್ಟು ಹೆಚ್ವುತ್ತಿದೆಯಲ್ಲ? ಅದರಲ್ಲಿ ಉದ್ಯೋಗ, ವ್ಯಾಪಾರ ಕಳಕೊಂಡವರು ಎಷ್ಟು ಅಂತ ತಿಳಿದುಕೊಳ್ಳಿ ಆಗ ನಿಜವಾದ ಹಿಂದೂ ಸಮಾಜದ ಯುವಜನತೆಯ ನಿಜಸ್ವರೂಪ ತಿಳಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಸಾಬರನ್ನು ಬಿಡಿ, ನತದೃಷ್ಟ ಹಿಂದೂ ಯುವಕ ಯುವತಿಯರ ಉದ್ಯೋಗದ ಕುರಿತಾದರು ಮಾತಾಡಿ, ಸಾಧ್ಯವಾದರೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಮುಖಾಮುಖಿ ಭೇಟಿಗೆ ನಾನು ಸಿದ್ದ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.