ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಸಮೂಹದಲ್ಲಿ ಹಿಂದುಳಿದವರ ಕಣ್ಣೀರೊರೆಸುವವರು ಸಮೂಹದ ಕ್ರಿಯಾತ್ಮಕ ಸೇವೆ ನೀಡುವವರು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಪಿ ಕೆ ಕುಂಙಾಲಿಕ್ಕುಟ್ಟಿ ಆಲ್ ಇಂಡಿಯಾ ಕೆಎಂಸಿಸಿ ಬೆಂಗಳೂರು ಕೇಂದ್ರ ಸಮಿತಿ ವತಿಯಿಂದ ನಡೆಯುತ್ತಿರುವ ಹತ್ತು ದಿನದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸಮೂಹದ ಬಡವರ ನಿರ್ಗತಿಕರ ನೋವಿನಲ್ಲಿ ಸ್ಪಂದಿಸುವವರಾಗಿದ್ದಾರೆ. ಎಐಕೆಎಂಸಿಸಿ ಕೇಂದ್ರ ಸಮಿತಿ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯಮಾನಿಟಿ ಕೇಂದ್ರೀಕರಿಸಿ ನಡೆಸುತ್ತಿರುವ ಜೀವ ಕಾರುಣ್ಯ ಸೇವೆಯು ಮಾನವೀಯತೆಯ ಹೊಸದೊಂದು ಅದ್ಯಾಯವಾಗಿ ಸಮೂಹದ ಮುಂದೆ ತೆರೆದಿಟ್ಟಿದೆ, ಕಾರುಣ್ಯ ಸೇವಾರಂಗದಲ್ಲಿ ಕೆಎಂಸಿಸಿಯ ಪಾತ್ರ ವಿರಾಮವಿಲ್ಲದ್ದಾಗಿದೆ, ರಾತ್ರಿ ಹಗಲೆನ್ನದ ವೆತ್ಯಾಸವಿಲ್ಲದೇ ಆಶ್ರಯ ಸಹಾಯ ಯಾಚಿಸಿ ಶಿಹಾಬ್ ತಂಙಲ್ ಸೆಂಟರ್ಗೆ ಆಗಮಿಸುತ್ತಾರೆ. ಉದ್ಯಾನ ನಗರಿಯ ಅತೀ ದೊಡ್ಡ ಸೌಂದರ್ಯ ಸ್ನೇಹದ ಸೌಹಾರ್ದತೆಯ ಮಾನವೀಯತೆಯ ಹೂಗುಚ್ಚವಾಗಿದೆ ಎಂದು ಅವರು ಹೇಳಿದರು.
ಟಿ ಉಸ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯೂಮಾನಿಟಿ ಮಾಡುತ್ತಿರುವ ಸೇವೆಯ ವಿವರವನ್ನ ಡಾಕ್ಟರ್ ಅಮೀರಲಿ ವಿವರಿಸಿದರು.
ಹತ್ತು ದಿವಸದ ಹತ್ತು ಜೋಡಿಯಂತೆ ನಡೆದ ವಿವಾಹ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶದ ನೂರು ಜೋಡಿಗಳ ವಿವಾಹ ನೆರವೇರಿತು. ವಿವಾಹಿತರಾದ ದಂಪತಿಗಳ ಸಂಪೂರ್ಣ ಖರ್ಚು ವೆಚ್ಚಗಳನ್ನ ಎಐಕೆಎಂಸಿಸಿ ಬೆಂಗಳೂರು ಕೇಂದ್ರ ಸಮಿತಿ ವಹಿಸಿತು. ಮೂರು ಹಂತಗಳಾಗಿ 262 ಜೋಡಿ ವದುವರರ ವಿವಾಹ ನೆರವೇರಿಸಲಾಗಿದೆ.
ಎಂ ಕೆ ಮುನೀರ್, ನಜೀಬ್ ಕಾಂತಪುರಂ, ಎ ಕೆ ಎಂ ಅಶ್ರಫ್, ಆರ್ ವಿ ದೇವರಾಜ್, ರಾಶಿದ್ ಗಝ್ಝಾಲಿ, ಶ್ರೀದರ್, ಆರ್ ವಿ ಯುವರಾಜ್, ವಿನಯ ರೆಡ್ಡಿ, ಆರಿಫುಲ್ಲಾ ಮುಂತಾದವರು ಉಪಸ್ಥಿತರಿದ್ದರು.
ಕಲಾಸಿಪಾಳ್ಯ, ಶಿವಾಜಿನಗರ, ಬೆಲ್ಲಂದೂರು ಶಾಖೆಯ ಕಾರ್ಯಕರ್ತರು ಸಮಾರೋಪ ಸಮಾರಂಭದ ನೇತೃತ್ವ ವಹಿಸಿದ್ದರು.
ಎಂ ಕೆ ನೌಶಾದ್ ಸ್ವಾಗತಿಸಿ, ರಶೀದ್ ಮೌಲವಿ ವಂದಿಸಿದರು.
ವರದಿ : KHA ಈಶ್ವರಮಂಗಲ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.