ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರಿನ ಶ್ರೀಮತಿ ಶ್ವೇತನಾಗರಾಜ್ ಸಾರಥ್ಯದಲ್ಲಿನ “ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.)” ವತಿಯಿಂದ ನಡೆದ ರಾಜ್ಯ ಮಟ್ಟದ ರಾಧೆ-ಕೃಷ್ಣ ವೇಷಧಾರಿ ವಾಟ್ಸಪ್ ಸ್ಪರ್ಧೆಯಲ್ಲಿ ವಿಭಾಗವಾರು ಫಲಿತಾಂಶವನ್ನು ಘೋಷಿಸಲಾಗಿದೆ.
ಇಂದು ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಮಾಲೂರಿನಲ್ಲಿ ಶ್ರೀ ಕೃಷ್ಣಜನ್ಮಾಷ್ಟಾಮಿ ಹಬ್ಬದ ಪ್ರಯುಕ್ತ ಏರ್ಪಡಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿದ 150 ಕ್ಕೂ ಅಧಿಕ ಮಕ್ಕಳಲ್ಲಿ ಯಾರು ವಿಜೇತರು ಎಂಬುದನ್ನು ಆಯ್ಕೆ ಮಾಡಲಾಯಿತು.
ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ ” ಶ್ರೀ ಕೃಷ್ಣಜನ್ಮಾಷ್ಟಾಮಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದಲ್ಲಿ ಏರ್ಪಡಿಸಿದ ವಾಟ್ಸಪ್ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು, ಎಲ್ಲಾ ಮಕ್ಕಳು ಭಿನ್ನ-ವಿಭಿನ್ನ ಶೈಲಿಯಲ್ಲಿ ರಾಧೆ-ಕೃಷ್ಣರಾಗಿ ಕಾಣಿಸಿಕೊಂಡು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿ ಉತ್ತಮ ಸಂದೇಶ ಸಾರಿದ್ದಾರೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಹಾಗೂ ಸಹಕರಿಸಿದ ಪೋಷಕರಿಗೂ ನಮ್ಮ ಸಂಸ್ಥೆಯ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು” ಎಂದರು.
ಈ ಸಂದರ್ಭದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಯ ಪ್ರಧಾನ ಕಾರ್ಯದರ್ಶಿ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ನಮ್ಮ ಭಾರತೀಯ ಸಂಸ್ಕ್ರತಿಯ ರಕ್ಷಣೆಗಾಗಿ ಹಾಗೂ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳ ನೈಜ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಏರ್ಪಡಿಸಿದ ರಾಧೆ-ಕೃಷ್ಣ ವೇಷಧಾರಿ ಸ್ಪರ್ಧೆಯಲ್ಲಿ ಎಲ್ಲಾರೂ ಉತ್ತಮವಾಗಿ ಭಾವಹಿಸಿದ್ದರು, ಇದರಲ್ಲಿ ನಾವು 0 ಯಿಂದ 4 ಒಂದು ವಿಭಾಗ, 5 ಯಿಂದ 8 ಒಂದು ವಿಭಾಗ, ಹಾಗೂ ಅತಿ ಹೆಚ್ಚು ಲೈಕ್ ಪಡೆದ ಭಾವಚಿತ್ರಕ್ಕೆ ಬಹುಮಾನದ ಪ್ರಥಮ, ದ್ವೀತಿಯ, ತೃತೀಯ ಹಾಗೂ ಸಮಾಧಾನಕರ ಬಹುಮಾನದ ಫಲಿತಾಂಶ ಘೋಷಿಸಲಾಗಿದೆ, ಸ್ಪಂದಿಸಿದ ಮಕ್ಕಳಿಗೆ ಹಾಗೂ ಪೋಷಕರಿಗೆ ಧನ್ಯವಾದಗಳು” ಎಂದರು.
೦ ಯಿಂದ 4 ವರ್ಷ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಮಾಲೂರಿನ ಚರಣ್.ಎಸ್, ದ್ವೀತಿಯ ಬಹುಮಾನ ಬಂಗಾರಪೇಟೆಯ ತನೀಶ್ ಹೆಚ್ ರೆಡ್ಡಿ, ತೃತೀಯ ಬಹುಮಾನವನ್ನು ಶಿವಾರಪಟ್ಟಣದ ಚೇತನ್,ಎಸ್, ಹಾಗೂ ಸಮಾಧಾನಕರ ಬಹುಮಾನವನ್ನು ಶಿವಮೋಗ್ಗದ ತನುಶ್ರೀ ಪಡೆದಿದ್ದಾರೆ. ಹಾಗೇ 5 ಯಿಂದ 8 ವರ್ಷದ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಚಿಕ್ಕತಿರುಪತಿಯ ಜಾನವಿ ಪಿ.ರೆಡ್ಡಿ, ದ್ವೀತಿಯ ಬಹುಮಾನ ಪುರದ ಅಪೂರ್ವ, ತೃತೀಯ ಬಹುಮಾನ ಚಿಕ್ಕತಿರುಪತಿಯ ಐಸಿರಿ, ಸಮಾಧಾನಕಾರ ಬಹುಮಾನವನ್ನು ಬರಗೂರಿನ ರೀತುಗೌಡ ರವರು ಪಡೆದಿದ್ದಾರೆ.
ಅತಿ ಹೆಚ್ಚು ಲೈಕ್, ಷೇರ್, ಕಾಮೆಂಟ್ ವಿಭಾಗದಲ್ಲಿ ಪ್ರಥಮ ಬಹುಮಾನವ ಮಾಲೂರಿನ ಹರೀತ್ ಕುಮಾರ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾರಿಗೂ ಪ್ರಶಸ್ತಿ ನೀಡಲಾಗಿದೆ. ಬಹುಮಾನ ಪಡೆದ ಎಲ್ಲಾ ವೀಜೇತರ ಮನೆಗೆ ನೇರ ಕೋರಿಯರ್ ಮೂಲಕ ಅವಳ ವಿಳಾಸಕ್ಕೆ ಆಕರ್ಷಕ ಬಹುಮಾನವನ್ನು ಕಳುಹಿಸಿಕೋಡಲಾಗುವುದು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.