ಮಂಜನಾಡಿ (www.vknews.com): ಮಂಜನಾಡಿ ಯುವ ಕಾಂಗ್ರೆಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಭಾಗವಾಗಿ ಮಂಜನಾಡಿ ಗ್ರಾಮದ ನಿವಾಸಿಗಳಿಗೆ ಧಿರ್ಘಕಾಲ ಶೈಕ್ಷಣಿಕ ಸೇವೆ ಸಲ್ಲಿಸಿದ ದಿವಂಗತ ಮೂಸಬ್ಬ ಮಾಸ್ಟರ್ ರವರ ಸ್ಮರಣಾರ್ಥ ಸಾರ್ವಜನಿಕರಿಗೆ ಮತ್ತು ಮುಖ್ಯವಾಗಿ ವಿಧ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾಗುವ ಬೃಹತ್ ಗ್ರಂಥಾಲಯ ಮತ್ತು ವಾಚನಾಲಯವನ್ನು ತೆರೆಯಬೇಕೆಂದು ಪಂಚಾಯಿತ್ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮಂಜನಾಡಿ ಗ್ರಾಮದ ಅಧ್ಯಕ್ಷರಾದ ಅಶೀರುದ್ದೀನ್ ಸಾರ್ತಬೈಲ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಫಾ, ಉಪಾಧ್ಯಕ್ಷರಾದ ನಾಸಿರ್ ಮೈಸೂರು, ನಝೀರ್ ಮದ್ಪಾಡಿ, ನಿಝಾರ್ ಮಂಗಳಾಂತಿ, ಕಾರ್ಯದರ್ಶಿ ಸಫ್ವಾನ್ ಮಂಗಳ ನಗರ, ಮಂಗಳಾಂತಿ ಬೂತ್ ಅಧ್ಯಕ್ಷ ತಾಜುದ್ಶಾದೀನ್, ಬೂತ್ ಖಜಾಂಚಿ ಸಫ್ವಾನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಜೊತೆಗಿದ್ದರು. ವಾರ್ಡ್ ಸದಸ್ಯರಾದ ಮಹಮದ್ ಅಸೈ, ಬಶೀರ್ ಆರಂಗಡಿ, ಆಸಿಫ್ ಸಾಮಣಿಗೆ, ಮತ್ತು ಕಾಂಗ್ರೆಸ್ ಕಾರ್ಯಕರ್ತ ಇಕ್ಬಾಲ್ ಮಂಗಳಾಂತಿ ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.