ಪುತ್ತೂರು (ಸೆ.05. ವಿಶ್ವ ಕನ್ನಡಿಗ ನ್ಯೂಸ್): ವಳತ್ತಡ್ಕ ಮುರ್ಶಿದುಲ್ ಅನಾಂ ಯಂಗ್ ಮೆನ್ಸ್ ಅಸೋಸಿಯೇಶನ್ ಇದರ ವಾರ್ಷಿಕ ಮಹಾಸಭೆಯು ಸೆ.03 ರಂದು ಹಿದಾಯತುಲ್ ಇಸ್ಲಾಂ ಮದ್ರಸ ವಳತ್ತಡ್ಕದಲ್ಲಿ ಜಮಾಅತ್ ಅಧ್ಯಕ್ಷ ರಿಯಾಝ್.ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಸದರ್ ಮುಅಲ್ಲಿಂ ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ದುಆ ನೆರವೇರಿಸಿದರು. ಸ್ಥಳೀಯ ಖತೀಬರಾದ ಅಹ್ಮದ್ ಸ್ವಾಲಿಹ್ ಕೌಸರಿ ಯುವಕರ ಐಕ್ಯತೆಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಯಂಗ್ ಮೆನ್ಸ್ ಕಮಿಟಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ವಿವರ: 👇
ಅಧ್ಯಕ್ಷ : ರಫೀಕ್ ಬಳ್ಳೇರಿ ಉಪಾಧ್ಯಕ್ಷ : ಸಿರಾಜ್ ಪಂಜ ಪ್ರ.ಕಾರ್ಯದರ್ಶಿ: ಸಿಯಾಬುದ್ದೀನ್ ಪಂಜ ಜೊತೆ ಕಾರ್ಯದರ್ಶಿ: ತೌಸೀಫ್ ಅಹ್ಮದ್ ಕೋಶಾಧಿಕಾರಿ : ಮುಹಿಯುದ್ದೀನ್ ಬಳ್ಳೇರಿ
ಸದಸ್ಯರು :- ಉಮ್ಮರ್ ಬಳ್ಳೇರಿ ಇಸಾಕ್ ಇಸ್ಮಾಯಿಲ್ ನವಾಝ್ .ಕೆ ಖಾದರ್ ವಿ.ಕೆ ಮುನೀರ್ ಮಲಬಾರ್ ನಿಝಾಂ ಶಾಹಿಲ್ ಕೆ.ಪಿ ಶಕೀಲ್.ಡಿ ಫಯಾಝ್ ಝಾಹಿರ್.ಡಿ ಇವರು ಆಯ್ಕೆಯಾದರು. ಜಮಾಅತ್ ಕಮಿಟಿ ಕಾರ್ಯದರ್ಶಿ ಹನೀಫ್ , ಇಸ್ಮಾಯಿಲ್.ಡಿ, ಸುಲೈಮಾನ್.ಕೆ, ಶರೀಫ್ ಪಂಜ, ಬಾತಿಷ, ಅಬುತಾಹಿರ್, ನೌಫಲ್.ಕೆ.ಪಿ, ರಾಝ್ ಅಶ್ರಫ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಖಾದರ್ ವಿ.ಕೆ ಸ್ವಾಗತಿಸಿ, ಸಿಯಾಬುದ್ದೀನ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.