ಮಂಗಳೂರು (www.vknewes.com) : ಶಕ್ತಿನಗರದ ಕ್ಲಾಸಿಕ್ ಪರ್ಲ್ ಮತ್ತು ಕ್ಲಾಸಿಕ್ ರೂಬಿ ಅಪಾರ್ಟ್ಮೆಂಟ್, ಶಕ್ತಿ ವಿದ್ಯಾ ಸಂಸ್ಥೆ ಹಾಗೂ ಶಕ್ತಿನಗರದ ನಿವಾಸಿಗಳಿಗೆ ಇಂದು ಕ್ಲಾಸಿಕ್ ಪರ್ಲ್ ಅಪಾರ್ಟ್ಮೆಂಟ್ನಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರವನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪಡೀಲು ಇವರು ನಗರ ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿ ನೇತೃತ್ವದಲ್ಲಿ ಆಯೋಜಿಸಿದರು. ಈ ಲಸಿಕಾ ಶಿಬಿರವನ್ನು ಕ್ಲಾಸಿಕ್ ರೂಬಿ ಅಪಾರ್ಟ್ಮೆಂಟ್ ಮಾಲಕರ ಸಂಘದ ಅಧ್ಯಕ್ಷರಾದ ಡಾ. ಕೆ.ಸಿ ನಾೈಕ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಅವರು ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ ಶಕ್ತಿನಗರದ ಜನತೆ ಸುಮಾರು 95% ಲಸಿಕೆಯನ್ನು ಪಡೆದಿರುವುದಕ್ಕೆ ಇಲ್ಲಿಯ ಸ್ಥಳೀಯ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿಯವರ ಶ್ರಮವನ್ನು ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ದೇಶ ಜನತೆಗೆ ಕ್ಲಪ್ತ ಸಮಯದಲ್ಲಿ ಕೋವಿಡ್ ಲಸಿಕೆ ಒದಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿದೆ. ಯಾರು ಲಸಿಕೆ ಪಡೆಯುವಲ್ಲಿ ಭಯ ಪಡಬಾರದು. ಲಸಿಕೆ ಪಡೆಯುವುದರಿಂದ ಕೋವಿಡ್ನಂತಹ ಸಾಂಕ್ರಾಮಿಕ ರೋಗವನ್ನು ದೂರ ಮಾಡಬಹುದು. ಇಂತಹ ಲಸಿಕಾ ಶಿಬಿರವನ್ನು ಆಯೋಜಿಸಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗುವಂತೆ ನೋಡಿಕೊಂಡಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪಡೀಲು ಹಾಗೂ ಜಿಲ್ಲಾಡಳಿತವನ್ನು ಅಭಿನಂದಿಸಿದರು. ನಾವೆಲ್ಲರೂ ಕೋವಿಡ್ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಕೋವಿಡ್ ಮುಕ್ತ ಶಕ್ತಿನಗರದ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ 35ನೇ ವಾರ್ಡ್ನ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ ಮಾತನಾಡಿ ಶಕ್ತಿನಗರದಲ್ಲಿ 5ನೇ ದೊಡ್ಡ ಲಸಿಕಾ ಶಿಬಿರ ಇದಾಗಿದೆ ಎಂದರು. ಶಕ್ತಿನಗರದ ಜನತೆ ಕೋವಿಡ್ ಮುಕ್ತರಾಗುವ ಉದ್ದೇಶದೊಂದಿಗೆ ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ರ ಪ್ರಯತ್ನದಿಂದ ಇಂತಹ ಶಿಬಿರ ಆಯೋಜಿಸಲು ಅನುಕೂಲವಾಗಿದೆ.
ಶಕ್ತಿನಗರದ ಕ್ಲಾಸಿಕ್ ಪರ್ಲ್ ಮತ್ತು ಕ್ಲಾಸಿಕ್ ರೂಬಿ ಆಯೋಜಿಸಿರುವ ಇಂತಹ ಶಿಬಿರದಿಂದ ನೂರಾರು ಜನರಿಗೆ ಅನುಕೂಲವಾಗುತ್ತಿದೆ. ಮುಂದೆಯು ಇಂತಹ ಜನಪರ ಕಾರ್ಯವನ್ನು ಮಾಡುವುದಾಗಿ ತಿಳಿಸಿದರು. ಈ ಶಿಬಿರ ಆಯೋಜಿಸಲು ಸಹಕರಿಸಿರುವ ನಗರ ಪ್ರಾಥಮಿಕ ಆರೋಗ್ಯ ಪಡೀಲು ಇದರ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಾಸಿಕ್ ಪರ್ಲ್ ಅಪಾರ್ಟ್ಮೆಂಟ್ ಮಾಲಕರ ಸಂಘದ ಅಧ್ಯಕ್ಷರಾದ ಟಿನು ಸಿರೀಕ್ ಜೋಯಿ ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಶಕಿ ಸುಪ್ರಿಯ, ಬಿಜೆಪಿ ವಾರ್ಡ್ ಅಧ್ಯಕ್ಷರಾದ ಹರೀಶ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕ್ಲಾಸಿಕ್ ರೂಬಿ ಅಪಾರ್ಟ್ಮೆಂಟ್ ಮಾಲಕರ ಸಂಘದ ಕಾರ್ಯದರ್ಶಿ ರಮೇಶ ಕೆ. ನಿರೂಪಿಸಿ, ಕ್ಲಾಸಿಕ್ ಪರ್ಲ್ ಅಪಾರ್ಟ್ಮೆಂಟ್ ಮಾಲಕ ಸಂಘದ ಕಾರ್ಯದರ್ಶಿ ಅನೀತಾ ಮರ್ಥಿಶ್ ಸ್ವಾಗತಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.