ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ರಕ್ತದಾನ, ನೇತ್ರದಾನ ಹಾಗೂ ಸಮಾಜಸೇವೆಯ ಹಾದಿಯಲ್ಲಿ ಸಾಗುತ್ತಿರುವ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಕೋಲಾರ ಜಿಲ್ಲಾ ಅಧ್ಯಕ್ಷರಾಗಿ ಯುವ ಉತ್ಸಾಹಿ, ಲಕ್ಕೂರಿನ ಸುನೀಲ್ ಗೌಡ (ಕೆ.ಇ.ಬಿ) ಇವರನ್ನು ಕೂಡಲೇ ಆಸ್ತಿತ್ವಕ್ಕೆ ಬರುವಂತೆ ಆದೇಶಿಸಲಾಗಿದೆ.
ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ಚಿನ್ನದ ಜಿಲ್ಲೆಯಲ್ಲಿ ರಕ್ತದಾನ, ನೇತ್ರದಾನ, ಸಮಾಜ ಸೇವೆಯ ಹಾದಿಯಲ್ಲಿ ಸಾಗುವ ಯುವ ಉತ್ಸಾಹಿಗಳನ್ನು VKF ಗುರ್ತಿಸಿ ಅವರಿಗೆ ಉತ್ತಮ ಸ್ಥಾನ ನೀಡಿ ಗೌರವಿಸಿ, ಸೇವೆಗೆ ಅನುವು ಮಾಡಿಕೊಡುತ್ತಿದ್ದು, ಈ ನಿಟ್ಟಿನಲ್ಲಿ ಉತ್ಸಾಹಿ ಯುವಕ ಸುನೀಲ್ ಗೌಡ ರವರನ್ನು ಆಯ್ಕೆ ಮಾಡಲಾಗಿದೆ, ಉತ್ತಮ ಸೇವಾ ಕಾರ್ಯ ಹಾಗೂ ಫೌಂಡೇಶನ್ ಬಲಪಡಿಸುವ ಕಾರ್ಯ ಮಾಡಲಿ” ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.