ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಮಾಲೂರು ಸಾಹಿತ್ಯ ಬಳಗದಿಂದ, ಸ್ಥಳೀಯ ಅಂಬೇಡ್ಕರ್ ಉದ್ಯಾನ ವನದಲ್ಲಿ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ರವರ ಐದನೇ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಾಹಿತಿ ಮಾಸ್ತಿ ಕೃಷ್ಣಪ್ಪ “ಅಮಾನವೀಯತೆಯಿಂದ ಕೊಲ್ಲುವ ಕಟುಕತನ ಸ್ವಚ್ಛ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.ಈ ರೀತಿಯ ಕ್ರೂರತ್ವ ವ್ಯವಸ್ಥೆ ಮಹಾತ್ಮ ಗಾಂಧಿಯವರನ್ನೇ ಕೊಲ್ಲಲು ಪ್ರೇರೇಪಿಸಿತ್ತು. ಸತ್ಯ, ಶಾಂತಿ, ಅಹಿಂಸೆಯನ್ನು ಬೋಧಿಸಿದ ಬುದ್ಧನ ನಾಡು ನಮ್ಮದು ಇದನ್ನು ಮನನ ಮಾಡಿಕೊಂಡು ಬದುಕುವ ವ್ಯವಸ್ಥೆ ನಮ್ಮದಾಗಬೇಕಿದೆ” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ಡಾ.ಜಯಮಂಗಲ ಚಂದ್ರಶೇಖರ್ “ಗೌರಿ ಲಂಕೇಶ್ ಅವರು ಒಬ್ಬ ಪ್ರತಿಭಾನ್ವಿತ ಪತ್ರಕರ್ತೆಯಾಗಿದ್ದು ಹೊರದೇಶಗಳಲ್ಲೂ ತನ್ನ ವಿಚಾರ ಪೂರಿತ ಲೇಖನಗಳಿಂದ ಪ್ರಸಿದ್ಧರಾಗಿದ್ದರು. ಅವರಿಗೆ ಹಲವಾರು ಪ್ರಶಸ್ತಿಗಳು ಪ್ರಾಪ್ತವಾಗಿತ್ತು ಮಾನವೀಯ ದೃಷ್ಟಿಕೋನದಲ್ಲಿ ಸಮಾಜವನ್ನು ನೋಡುವ ಗುಣ ಅವರದು. ಅವರು ಎಲ್ಲರ ಮನಸ್ಸಲ್ಲೂ ಶಾಶ್ವತವಾಗಿ ಅಭಿಮಾನವನ್ನು ಪಡೆದುಕೊಂಡಿದ್ದಾರೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಂಜುಕನ್ನಿಕ ,ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಮಾ.ಚಿ. ನಾಗರಾಜು ಕ.ಸಾ.ಪ. ನಿಕಟಪೂರ್ವ ಕೋಶಾಧ್ಯಕ್ಷ ಪ್ರಶಾಂತ್, ಶಿಕ್ಷಕ ವೆಂಕಟೇಶಮೂರ್ತಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಕ್ಕೂರು ಆರ್ ವೆಂಕಟೇಶ್, ಅಜಯ್, ಪದ್ಮ, ಮಮತಾ, ತಿಮ್ಮರಾಜು, ಅಸ್ಲಮ್ ಪಾಶ ಮುಂತಾದವರು ಭಾಗವಹಿಸಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.