ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಮಾಲೂರು ವತಿಯಿಂದ ಇಂದು ಭಾನುವಾರ ಮಾಲೂರಿನ ಸಂಸ್ಥೆಯಲ್ಲಿ ಭರತನಾಟ್ಯಯ ಆದ್ಯ ಪರೀಕ್ಷೆಯನ್ನು ನಡೆಸಲಾಯಿತು.
ಮಾಲೂರಿನಲ್ಲಿ ಇಂದು ನಡೆದ ಭರತನಾಟ್ಯ ಆದ್ಯ ಪರೀಕ್ಷೆಯಲ್ಲಿ ಸರಿ ಸುಮಾರು 25 ಜನ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡರು. ಈ ಪರೀಕ್ಷೆಯಲ್ಲಿ ಕಿರಿಯರಿಂದ ಹಿರಿಯ ವಿಭಾಗದವರೆಗೆ ಪರೀಕ್ಷೆಯನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಯಶಸ್ವಿಯಾದ ಪರೀಕ್ಷೆಯನ್ನು ಸುಗಮವಾಗಿ ಪೂರೈಸಿದರು.
ಈ ಸಂದರ್ಭದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ “ನಮ್ಮ ಶಾಲೆಯ ವತಿಯಿಂದ ಇಂದು ಭರತನಾಟ್ಯ ನೃತ್ಯ ತರಬೇತಿ ಪಡೆದು ವಿಶೇಷವಾದ ಕಲಿಕೆಯ ಮಟ್ಟವನ್ನು ಪಡೆದ ಮಕ್ಕಳಿಗೆ ಭರತನಾಟ್ಯ ಆದ್ಯ ಪರೀಕ್ಷೆ ನಡೆಸಿದೆವು ಎಲ್ಲಾ ಮಕ್ಕಳು ಸಂತಸದಿಂದ ಬಂದು ಭಾಗವಹಿಸಿ ಯಶಸ್ವಿ ಮಾಡಿದ್ದಾರೆ. ಮಕ್ಕಳ ಕ್ರೀಯಾಶೀಲತೆ, ಆಸಕ್ತಿ ಇಂದು ಮಕ್ಕಳ ಪರೀಕ್ಷೆ ಉತ್ತಮ ರೀತಿಯಲ್ಲಿ ನಡೆಯಲು ಕಾರಣ” ಎಂದರು.
ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಯ ಪ್ರಧಾನ ಕಾರ್ಯದರ್ಶಿ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ನೈಜ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ನಮ್ಮ ಶಾಲೆ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಆ ನಿಟ್ಟಿನಲ್ಲಿ ಮಕ್ಕಳಿಗೆ ಆದ್ಯ ಪರೀಕ್ಷೆ ಮಾಡಿ ಯಶಸ್ವಿ ಮಾಡಿದ್ದೀವಿ” ಎಂದರು.
ಈ ಸಂದರ್ಭದಲ್ಲಿ ಭರತನಾಟ್ಯ ಆದ್ಯ ಪರೀಕ್ಷೆ ಬರೆದ ತನುಶ್ರೀ,ಆರ್. ಪ್ರತೀಕ್ಷಾ, ಉಷಾ, ಸನಯುಕ್ತ, ದಾಕ್ಷಯಿಣಿ, ಹರ್ಷಿತ, ಆರ್ಚನಾ, ಜಯಶ್ರೀ, ಧನುಶ್ರೀ, ವಿದ್ಯಾ, ಲಕ್ಷ್ಮೀ ಹಾಗೂ ಅನೇಕ ಶ್ವೇತಾಂಜಲಿ ಭರತನಾಟ್ಯ ಶಾಲೆ ಯ ಮಕ್ಕಳು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.