ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ವೃತ್ತಿ ನಿರತ ವೈದ್ಯರು ಹಾಗೂ ಸಾರ್ವಜನಿಕರು ಚಿಕಿತ್ಸೆ ಪ್ರಾರಂಭಿಸುವ ಮೊದಲು ಗಾಯಾಳು ಅಥವಾ ರೋಗಿಗೆ ಹಾರೈಕೆಯ ಪ್ರಥಮ ಚಿಕಿತ್ಸೆಯಾಗಿದ್ದು , ವ್ಯಕ್ತಿಯ ಜೀವ ಉಳಿಸುವಲ್ಲಿ ಪ್ರಥಮ ಚಿಕಿತ್ಸೆ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಇಲ್ಲಿ ಮಾನವೀಯ ದೃಷ್ಟಿ ಅಗತ್ಯವೆಂದು ಡಾ.ಚಿದಾನಂದ ತಿಳಿಸಿದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಭಾರತೀಯ ರೆಡ್ಕಾಸ್ ಜಿಲ್ಲಾ ಸಮಿತಿ ಏರ್ಪಡಿಸಿದ್ದ ವಿಶ್ವ ಪ್ರಥಮ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜೀವ ಉಳಿಸುವ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸೆಯು ತನ್ನದೇ ಆದ ಮಹತ್ವವನ್ನು ಹೊಂದಿದ್ದು , ಯುದ್ದದಲ್ಲಿ ಗಾಯಗೊಂಡವರ , ಅಪಘಾತ ಅಥವಾ ಪ್ರಾಣಾಂಕಿತ ಗಾಯಗಳಿಂದ , ಹೃದಯಾಘಾತ , ಹಾವು ಕಡಿತ , ಸಿಲಿಂಡರ್ ಸ್ಫೋಟ ಇಂತಹ ಹತ್ತು ಹಲವು ಸಮಸ್ಯೆಗಳಿಂದ ಪ್ರಪಂಚದಲ್ಲಿ ಲಕ್ಷಾಂತರ ಜನ ಹಸು ನೀಗುತ್ತಾರೆ. ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ದೊರೆತರೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು.
ರೆಡ್ಕಾಸ್ ಸಮಿತಿಯ ರಾಜ್ಯ ಆಡಳಿತ ಮಂಡಳಿಯ ಸದಸ್ಯ ಎಸ್.ಸಿ. ವೆಂಕಟಕೃಷ್ಣಪ್ಪ ಮಾತನಾಡಿ ಪ್ರಥಮ ಚಿಕಿತ್ಸಕರ ಗಾಯಾಗಳುಗಳ ಮತ್ತು ಘಟನಾ ಸ್ಥಳದ ಸಮೀಪದಲ್ಲಿರುವವರ ಜೀವ ರಕ್ಷಣೆ , ಹೆಚ್ಚಿನ ಅಪಾಯಕ್ಕೆ ತಡೆ , ಸೂಕ್ತ ಚಿಕತ್ಸೆ ದೊರೆಯುವವರೆಗೂ ರೋಗಿಯ ಸ್ಥಿತಿ ಬದಲಾಗದಂತೆ ಗಮನಿಸುವ ಮುಖ್ಯ ಉದ್ದೇಶವನ್ನು ಪ್ರಥಮ ಚಿಕಿತ್ಸೆ ಹೊಂದಿದೆ ಎಂದರು.
ವಿದ್ಯಾರ್ಥಿಗಳಿಗೆ ಮೇಲಿಂದ ಮೇಲೆ ಚಿಕತ್ಸೆಯ ತರಬೇತಿಗಳನ್ನು ಪ್ರೌಢ ಶಾಲೆಗಳಲ್ಲಿ ರೆಡ್ಕ್ರಾಸ್ ಜೂನಿಯರ್ ಘಟಕಗಳನ್ನು ಆರಂಭಿಸುವ ಮೂಲಕ ನಿಯಮಿತವಾಗಿ ಹಮ್ಮಿಕೊಳ್ಳಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕೋಶಾಧ್ಯಕ್ಷ ಜಿ . ಶ್ರೀನಿವಾಸ್ ತಿಳಿಸಿದರು. ಆರೋಗ್ಯ ಮತ್ತು ಜೀವನ ಶೈಲಿ ಸುರಕ್ಷಿತ ವಿಷಯಗಳು , ವ್ಯಕ್ತಿತ್ವ ಬೆಳವಣಿಗೆ , ಭಾವನಾತ್ಮಕ ಹತೋಟ , ಸಂಬಂಧಗಳ ವಿಷಯಗಳು , ಶಿಕ್ಷಣ ಮತ್ತು ವೃತ್ತಿ ವಿಷಯಗಳ ಬಗ್ಗೆ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ನಂದೀಶ್ ಕುಮಾರ್ ತಿಳಿಸಿದರು.
ವಿಶ್ವದಲ್ಲಿ ಅತ್ಯಂತ ಹೆಚ್ಚು ಅಪಘಾತಗಳಾಗುವುದು ಭಾರತ ದೇಶದಲ್ಲಿ ಈಗಾಗಿ ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ ಮಹತ್ವ ತಿಳಿದುಕೊಳ್ಳಿ ಎಂದು ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ಕಾಸ್ ಸಮಿತಿಯ ಜಿಲ್ಲಾ ಸಭಾಪತಿ ಡಾ.ಎನ್.ಗೋಪಾಲಕೃಷ್ಣಗೌಡ ತಿಳಿಸಿದರು.
ವಿದ್ಯಾರ್ಥಿಗಳಿಗೆ ಮಾಸ್ಟ್ಗಳನ್ನು ವಿತರಿಸಿದ ಸಂದರ್ಭದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಉಪ ಸಭಾಪತಿ ಆರ್.ಶ್ರೀನಿವಾಸನ್ , ನಿರ್ದೇಶಕ ವಿ.ಪಿ.ಸೋಮಶೇಖರ್ , ಶ್ರೀನಿವಾಸಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್ . ಯೋಗ . ಗುರು ರವಿಕುಮಾರ್ , ಶಾಲೆಯ ಅಧ್ಯಾಪಕರುಗಳಾದ ಹೆಚ್.ಎನ್.ನಾರಾಯಣಸ್ವಾಮಿ , ಲೋಕೇಶಪ್ಪ ಡಟ್ಟರ್ , ಎಂ.ಎಸ್.ಭಾಗ್ಯ , ಸಂತೋಷ ಕುಮಾರಿ , ಕೆ.ನಾರಾಯಣರೆಡ್ಡಿ , ಕೆ.ವಿ.ಪ್ರಭಾವತಿ . ಪ್ರಮೀಳಾ. ಟಿ.ಎನ್ ಫರಿದಾ ಬೇಗಂ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.