ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಶಿಲ್ಪಿಗಳ ನಾಡು ಎಂದೇ ರಾಜ್ಯದಲ್ಲಿ ಪ್ರಸಿದ್ದಿ ಶಿವಾರಪಟ್ಟಣ್ಣ ಗ್ರಾಮದಲ್ಲಿ ಶ್ರೀ ಕೋಟೆ ಗಂಗಮ್ಮ ಯುವಕರ ಬಳಗದ ವತಿಯಿಂದ 18 ನೇ ವರ್ಷದ ಗಣೇಶೋತ್ಸವ, ಸುಮಂಗಲಿಯರ ಪೂಜಾ ಕಾರ್ಯ, ಹಾಗೂ ಶ್ವೇತಾಂಜಲಿ ಭರತನಾಟ್ಯ ಶಾಲೆ ವತಿಯಿಂದ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಸುಮಂಗಲಿಯರ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಶಾಸಕರಾದ ಕೆ.ಎಸ್.ಮಂಜುನಾಥ ಗೌಡ ರವರ ಧರ್ಮಪತ್ನಿ ಶ್ರೀಮತು ಆರಿದ್ರಾ ಮಂಜುನಾಥಗೌಡ ಮಾತನಾಡಿ “ಕೋಟೆ ಗಂಗಮ್ಮ ಯುವಕರ ಬಳಗದ ವತಿಯಿಂದ ಇಂದು ಆಯೋಜಿಸಿರುವ ಗಣೇಶೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ಸುಮಂಗಲಿಯರಿಗೆ ಕೈಬಳೆ, ಅರಿಸಿನ, ಹಣ್ಣು ವೀಳೆಯದೆಲೆ ನೀಡುವ ಮೂಲಕ ನಮ್ಮ ಪ್ರಾಚೀನ ಕಾಲದ ಗತ ವೈಭವದ ಸಂಸ್ಕ್ರತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಬಹಳ ಹೆಮ್ಮೆ, ಈ ರೀತಿಯ ಪೂಜೆಗಳು ನಮ್ಮ ಬದುಕಿನ ಸಕಲ ತೊಡಕುಗಳನ್ನೂ ನಿವಾರಿಸಿ ನಾಡಿನಲ್ಲಿ ಉತ್ತಮ ವಾತವರಣ ನಿರ್ಮಾಣ ಆಗಿ ಸಂತಸದ ಗಳಿಗೆ ಮೂಢುತ್ತದೆ, ಈ ಕಲ್ಪನೆಯನ್ನು ವಾಸ್ತವ ರೂಪದಲ್ಲಿ ಮಾಡಿದ ಶಿವಾರಪಟ್ಟಣ್ಣ ಜನತೆಗೆ ಅಭಿನಂದನೆ” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಲೂರಿನ ಶ್ವೇತಾಂಜಲಿ ಭರತನಾಟ್ಯ ಶಾಲೆ ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ “ಗ್ರಾಮೀಣ ಪ್ರದೇಶದಲ್ಲಿ ನಮ್ಮ ಸಂಸ್ಕ್ರತಿಯ ಪ್ರತಿಬಿಂಬ ಎದ್ದು ಕಾಣುತ್ತದೆ. ಅದರಲ್ಲೂ ಧಾರ್ಮಿಕತೆಯ ಹಬ್ಬ-ಹರಿದಿನಗಳಲ್ಲಿ ಎಲ್ಲರೂ ಏಕತೆಯ ಮಂತ್ರದಿಂದ ಒಗ್ಗಟ್ಟಿನಿಂದ ಸೇರಿ ಆಚರಿಸುತ್ತಿರುವ ಸುಮಂಗಲಿಯರ ಪೂಜಾ ಕಾರ್ಯ ಎಲ್ಲಾರಿಗೂ ಮಾದರಿ, ಶಿಲ್ಪಿಗಳ ನಾಡು ವಿಶ್ವದಲ್ಲಿ ಪ್ರಸಿದ್ದಿ ಪಡೆದಿರುವುದು ಈ ರೀತಿಯ ವಿಶೇಷ ಆಚರಣೆಗಳಿಂದಲೇ ಎಂಬುದು ಗಮನರ್ಹವಾದದ್ದು, ನಮ್ಮ ಮಕ್ಕಳ ನೃತ್ಯ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಶ್ರೀ ಕೋಟೆ ಗಂಗಮ್ಮ ಯುವಕರ ಬಳಗಕ್ಕೆ ಅಭಿನಂದನೆ” ಅರ್ಪಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ಸಂಸ್ಕ್ರತಿ ನಮ್ಮ ಹೆಮ್ಮೆ ಶೀರ್ಷಿಕೆ ಅಡಿಯಲ್ಲಿ ಶ್ರೀಮತಿ ಶ್ವೇತನಾಗರಾಜ್ ಸಾರಥ್ಯದಲ್ಲಿನ “ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.)” ಯ ವಿದ್ಯಾರ್ಥಿಗಳಾದ ತನುಶ್ರೀ,ಆರ್. ಹರ್ಷಿತ, ವಿದ್ಯಾಶ್ರೀ, ಸನ್ ಯುಕ್ತ, ಪ್ರತೀಕ್ಷಾ, ಉಷಾ, ಆರ್ಚನಾ, ಜಯಶ್ರೀ, ಧನುಶ್ರೀ, ದಾಕ್ಷಯಿಣಿ, ಇತರೆ ವಿದ್ಯಾರ್ಥಿಗಳು ಅದ್ಬುತವಾದ ಧಾರ್ಮಿಕತೆಯ, ನಾಡು-ನುಡಿ, ಸಂಸ್ಕ್ರತಿಯ ಉಳಿವು, ಗಣಪತಿಯ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಗ್ರಾಮಸ್ಥರಿಗೆ ಸಂಸ್ಕ್ರತಿಯ ಉಳಿವಿನ ಜಾಗೃತಿ ಮೂಢಿಸಿದರು. ಹಾಗೇ ಎಲ್ಲಾ ನೃತ್ಯ ಪ್ರದರ್ಶನ ನೀಡಿದ ಮಕ್ಕಳಿಗೆ ಮಾಜಿ ಶಾಸಕರಾದ ಮಂಜುನಾಥ್ ಗೌಡರ ಧರ್ಮಪತ್ನಿ ಶ್ರೀಮತಿ ಆರಿದ್ರಾ ಮಂಜುನಾಥ್ ಗೌಡ ಸನ್ಮಾನಿಸಿ ಅಭಿನಂದನೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಆರಿದ್ರಾ ಮಂಜುನಾಥ್ ಗೌಡರಿಗೆ ಬೃಹತ್ ಭಾರಿ ಗಾತ್ರದ ಹಾರ ಹಾಕುವ ಮೂಲಕ ಶ್ರೀ ಕೋಟೆ ಗಂಗಮ್ಮ ಯುವಕರ ಬಳಗದ ಸಮಸ್ತ ಪದಾಧಿಕಾರಿಗಳು ಅದ್ದೂರಿ ಸ್ವಾಗತ ಕೋರಿ ಅಭಿನಂದನೆ ಅರ್ಪಿಸಿದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.